ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಜೂನ್ ತಿಂಗಳಲ್ಲಿ ಟಿ20 ವಿಶ್ವಕಪ್
ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ!
T20 ವಿಶ್ವಕಪ್ಗೆ ಟೀಮ್ ಇಂಡಿಯಾದಲ್ಲಿ ಇಲ್ಲ ಈ ಇಬ್ಬರಿಗೆ ಸ್ಥಾನ; ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಈಗಾಗಲೇ ಮೆಗಾ ಐಸಿಸಿ ಟೂರ್ನಿ ಟಿ20 ವಿಶ್ವಕಪ್ಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಚ್ಚರಿ ಎಂದರೆ ಫಾರ್ಮ್ನಲ್ಲಿದ್ರೂ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್, ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಕ್ಕಿಲ್ಲ. ಈ ಬೆನ್ನಲ್ಲೇ ಇಬ್ಬರಿಗೂ ಸ್ಥಾನ ನೀಡದಿರಲು ಕಾರಣವೇನು? ಅನ್ನೋ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೀಗ, ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕಳೆದ ವರ್ಷ ಇಶಾನ್ ಕಿಶನ್ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಟೆಸ್ಟ್ ಸರಣಿಗೆ ಮುನ್ನ ಮಾನಸಿಕ ಒತ್ತಡದ ಕಾರಣ ನೀಡಿ ಟೀಮ್ ಇಂಡಿಯಾದಿಂದ ಹೊರಬಂದಿದ್ದರು. ಆದರೆ, ರೆಸ್ಟ್ ಮಾಡಬೇಕಿದ್ದ ಇಶಾನ್ ದುಬೈನಲ್ಲಿ ಎಂಎಸ್ ಧೋನಿ ಜತೆ ಪಾರ್ಟಿ ಮಾಡಿದ್ದಾರೆ. ಇದರಿಂದ ಇಶಾನ್ ಕಿಶನ್ ಟೀಂ ಇಂಡಿಯಾ ಸೆಲೆಕ್ಟರ್ಸ್ ಕೆಂಗಣ್ಣಿಗೆ ಗುರಿಯಾಗಿದ್ದು, ಬೇಕಂತಲೇ ನಂತರ ಇವರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದಲೂ ತೆಗೆದು ಹಾಕಲಾಗಿತ್ತು. ಈಗ ಟಿ20 ವಿಶ್ವಕಪ್ನಿಂದಲೂ ಕೈ ಬಿಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಕೂಡ ಎಷ್ಟೇ ಹೇಳಿದ್ರೂ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ಎಚ್ಚರಿಕೆಯಿಂದ ಆಡದೆ ಅನಗತ್ಯ ಶಾಟ್ಗಳ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಮಾಡುತ್ತಿರೋ ತಪ್ಪುಗಳು ಟೀಮ್ ಇಂಡಿಯಾ ಪಾಲಿಗೆ ದುಬಾರಿ ಆಗಿದೆ. ಜತೆಗೆ ಇಬ್ಬರು ರಣಜಿ ಕೂಡ ಆಡಿಲ್ಲ. ಹೀಗಾಗಿ ಇಶಾನ್ ಜತೆಗೆ ಅಯ್ಯರ್ಗೂ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಕೊಕ್ ನೀಡಲಾಗಿತ್ತು. ಈಗ ಟಿ20 ವಿಶ್ವಕಪ್ನಿಂದಲೂ ತೆಗೆದು ಹಾಕಲಾಗಿದೆ.
ಇನ್ನು, ಇಬ್ಬರು ಅಶಸ್ತಿನಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಜಿತ್ ಅರ್ಗರ್ಕರ್ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡಿಗನಿಗೆ ಬಿಗ್ ಶಾಕ್.. ಟಿ20 ವಿಶ್ವಕಪ್ನಿಂದಲೇ ಕೆ.ಎಲ್ ರಾಹುಲ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಜೂನ್ ತಿಂಗಳಲ್ಲಿ ಟಿ20 ವಿಶ್ವಕಪ್
ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ!
T20 ವಿಶ್ವಕಪ್ಗೆ ಟೀಮ್ ಇಂಡಿಯಾದಲ್ಲಿ ಇಲ್ಲ ಈ ಇಬ್ಬರಿಗೆ ಸ್ಥಾನ; ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಈಗಾಗಲೇ ಮೆಗಾ ಐಸಿಸಿ ಟೂರ್ನಿ ಟಿ20 ವಿಶ್ವಕಪ್ಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಚ್ಚರಿ ಎಂದರೆ ಫಾರ್ಮ್ನಲ್ಲಿದ್ರೂ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್, ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಕ್ಕಿಲ್ಲ. ಈ ಬೆನ್ನಲ್ಲೇ ಇಬ್ಬರಿಗೂ ಸ್ಥಾನ ನೀಡದಿರಲು ಕಾರಣವೇನು? ಅನ್ನೋ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೀಗ, ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕಳೆದ ವರ್ಷ ಇಶಾನ್ ಕಿಶನ್ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಟೆಸ್ಟ್ ಸರಣಿಗೆ ಮುನ್ನ ಮಾನಸಿಕ ಒತ್ತಡದ ಕಾರಣ ನೀಡಿ ಟೀಮ್ ಇಂಡಿಯಾದಿಂದ ಹೊರಬಂದಿದ್ದರು. ಆದರೆ, ರೆಸ್ಟ್ ಮಾಡಬೇಕಿದ್ದ ಇಶಾನ್ ದುಬೈನಲ್ಲಿ ಎಂಎಸ್ ಧೋನಿ ಜತೆ ಪಾರ್ಟಿ ಮಾಡಿದ್ದಾರೆ. ಇದರಿಂದ ಇಶಾನ್ ಕಿಶನ್ ಟೀಂ ಇಂಡಿಯಾ ಸೆಲೆಕ್ಟರ್ಸ್ ಕೆಂಗಣ್ಣಿಗೆ ಗುರಿಯಾಗಿದ್ದು, ಬೇಕಂತಲೇ ನಂತರ ಇವರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದಲೂ ತೆಗೆದು ಹಾಕಲಾಗಿತ್ತು. ಈಗ ಟಿ20 ವಿಶ್ವಕಪ್ನಿಂದಲೂ ಕೈ ಬಿಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಕೂಡ ಎಷ್ಟೇ ಹೇಳಿದ್ರೂ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ಎಚ್ಚರಿಕೆಯಿಂದ ಆಡದೆ ಅನಗತ್ಯ ಶಾಟ್ಗಳ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಮಾಡುತ್ತಿರೋ ತಪ್ಪುಗಳು ಟೀಮ್ ಇಂಡಿಯಾ ಪಾಲಿಗೆ ದುಬಾರಿ ಆಗಿದೆ. ಜತೆಗೆ ಇಬ್ಬರು ರಣಜಿ ಕೂಡ ಆಡಿಲ್ಲ. ಹೀಗಾಗಿ ಇಶಾನ್ ಜತೆಗೆ ಅಯ್ಯರ್ಗೂ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಕೊಕ್ ನೀಡಲಾಗಿತ್ತು. ಈಗ ಟಿ20 ವಿಶ್ವಕಪ್ನಿಂದಲೂ ತೆಗೆದು ಹಾಕಲಾಗಿದೆ.
ಇನ್ನು, ಇಬ್ಬರು ಅಶಸ್ತಿನಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಜಿತ್ ಅರ್ಗರ್ಕರ್ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡಿಗನಿಗೆ ಬಿಗ್ ಶಾಕ್.. ಟಿ20 ವಿಶ್ವಕಪ್ನಿಂದಲೇ ಕೆ.ಎಲ್ ರಾಹುಲ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್