ಪಂದ್ಯ ಗೆದ್ದ ಖುಷಿಯಲ್ಲಿದ್ದ ಶ್ರೇಯಸ್​ ಅಯ್ಯರ್​​ಗೆ ಬಿಗ್ ಶಾಕ್.. ಚೆನ್ನೈ ಮೈದಾನದಲ್ಲಿ ಆಗಿದ್ದೇನು?

author-image
Bheemappa
Updated On
ಪಂದ್ಯ ಗೆದ್ದ ಖುಷಿಯಲ್ಲಿದ್ದ ಶ್ರೇಯಸ್​ ಅಯ್ಯರ್​​ಗೆ ಬಿಗ್ ಶಾಕ್.. ಚೆನ್ನೈ ಮೈದಾನದಲ್ಲಿ ಆಗಿದ್ದೇನು?
Advertisment
  • ಶ್ರೇಯಸ್, ಪ್ರಭಾಸಿಮ್ರನ್​ ಭರ್ಜರಿ ಅರ್ಧಶತಕ ಬಾರಿಸಿದ್ದರು
  • ಪಂದ್ಯದಲ್ಲಿ 191 ರನ್​ಗಳ ಗುರಿ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್​
  • ಕೇವಲ 2 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿದ್ದ ತಂಡ

ಕೂಲ್ ಕ್ಯಾಪ್ಟನ್​ ಎಂ.ಎಸ್​ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್ 4 ವಿಕೆಟ್​ಗಳಿಂದ ಭರ್ಜರಿ ಗೆಲುವು ಪಡೆದಿದೆ. ಪಂದ್ಯವನ್ನು ಗೆದ್ದ ಖುಷಿಯಲ್ಲಿದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್​ಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು ಅಲ್ಲದೇ ದೊಡ್ಡ ಮೊತ್ತದ ದಂಡ ವಿಧಿಸಿದೆ.​

ಐಪಿಎಲ್​ನ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್​ಗೆ 12 ಲಕ್ಷ ರೂಪಾಯಿಗಳ ದಂಡವನ್ನು ಬಿಸಿಸಿಐ ವಿಧಿಸಿದೆ. ಏಪ್ರಿಲ್​ 30 ರಂದು ಚೆನ್ನೈ ತಂಡದ ವಿರುದ್ಧ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲೀಗ್​​ನ ಓವರ್​ ರೇಟ್​ ನಿಯಮಗಳನ್ನು ಕ್ಯಾಪ್ಟನ್​ ಉಲ್ಲಂಘನೆ ಮಾಡಿದ್ದರಿಂದ ಈ ದಂಡವನ್ನು ಕಟ್ಟುವಂತೆ ತಿಳಿಸಲಾಗಿದೆ.

ಇದನ್ನೂ ಓದಿ:ಬಿಸಿಸಿಐನ ಕೋರ್ಟ್ ಕಟಕಟೆಗೆ ಎಳೆದುತಂದ ರೋಬೋ ನಾಯಿ, IPLನಲ್ಲಿ ಬಿಗ್​ಬಾಸ್​ಗೆ ಸಂಕಷ್ಟ..!

publive-image

ಈ ಸೀಸನ್​ನಲ್ಲಿ ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಅವರು ಇದೇ ಮೊದಲ ಬಾರಿಗೆ ತಪ್ಪು ಎಸಗಿದ್ದಾರೆ. ಐಪಿಎಲ್​ನ ನೀತಿ ಸಂಹಿತೆ ಆರ್ಟಿಕಲ್​ 2.22 ಅನ್ನು ಮೀರಲಾಗಿದೆ. ಪಂದ್ಯದಲ್ಲಿ ಸ್ಲೋ ಓವರ್​ ರೇಟ್ ಆಗಿದ್ದರಿಂದ ಫೈನ್ ಹಾಕಲಾಗಿದೆ ಎಂದು ಬಿಸಿಸಿಐನಿಂದ ಪ್ರಕಟಣೆ ಹೊರಡಿಸಲಾಗಿದೆ. ಐಪಿಎಲ್​ ಆರಂಭದಿಂದ ಶ್ರೇಯಸ್ ಅಯ್ಯರ್ ಸೇರಿ ಒಟ್ಟು 6 ನಾಯಕರು ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಐಪಿಎಲ್ ನಿಯಮದಂತೆ 20 ಓವರ್​ಗಳನ್ನು 1 ಗಂಟೆ 30 ನಿಮಿಷದ ಒಳಗೆ ಎಲ್ಲ ತಂಡಗಳು ಪೂರ್ಣಗೊಳಿಸಬೇಕು. ಇಲ್ಲದಿದ್ರೆ ದಂಡವನ್ನು ಪಾವತಿಸಬೇಕಾಗುತ್ತದೆ.

ಚೆನ್ನೈ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಟಾಸ್ ಗೆದ್ದು ಚೆನ್ನೈ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ಎಂ.ಎಸ್ ಧೋನಿ ಪಡೆಯು 19.2 ಓವರ್​ಗಳಲ್ಲಿ ಆಲೌಟ್ ಆಗಿ 191 ರನ್​ ಗುರಿ ನೀಡಿತ್ತು. ಈ ಗುರಿ ಹಿಂದೆ ಬಿದ್ದಿದ್ದ ಪಂಜಾಬ್​ ಇನ್ನೂ 2 ಎಸೆತ ಬಾಕಿ ಇರುವಾಗಲೇ 6 ವಿಕೆಟ್​ಗೆ 194 ರನ್​ ಗಳಿಸುವ ಮೂಲಕ ಜಯ ಸಾಧಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment