newsfirstkannada.com

ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್

Share :

Published September 6, 2024 at 9:03am

Update September 6, 2024 at 9:04am

    ಇಂಡಿಯಾ ಸಿ ತಂಡದಲ್ಲಿ ಕನ್ನಡಿಗ ವಿಜಯಕುಮಾರ್​ ವೈಶಾಕ್

    ಮೂರು ವಿಕೆಟ್ ಕಿತ್ತು ಟೀಂ ಇಂಡಿಯಾ ಡೋರ್ ಬಡಿದಿದ್ದಾರೆ

    ಕಂಬ್ಯಾಕ್ ಕನಸು ಕಂಡಿದ್ದ ಅಯ್ಯರ್​ಗೆ ಬಿಗ್ ಶಾಕ್ ​​

ದುಲೀಪ್ ಟ್ರೋಫಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್ ಸಂಚಲನ ಸೃಷ್ಟಿಸಿದ್ದಾರೆ. ಇಂಡಿಯಾ ಸಿ ತಂಡವನ್ನು ಪ್ರತಿನಿಧಿಸುತ್ತಿರುವ ಆರ್​ಸಿಬಿ ಬೌಲರ್​, ಮಿಂಚಿನ ಬೌಲಿಂಗ್ ನಡೆಸಿದ ಟೀಂ ಇಂಡಿಯಾದ ಡೋರ್​ ತಟ್ಟಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಇಂಡಿಯಾ ಸಿ ತಂಡವು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ವೈಶಾಕ್, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 12 ಓವರ್​ಗಳಲ್ಲಿ ಕೇವಲ 19 ರನ್​ ನೀಡಿ, ಮೂರು ಮೇಡಿನ್ ಓವರ್ ಮಾಡಿದರು. ಅಲ್ಲದೇ ಮೂರು ವಿಕೆಟ್ ಪಡೆದು ಇಂಡಿಯಾ ಡಿ ತಂಡವನ್ನು ಕೇವಲ 164 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?

ಶ್ರೇಯಸ್ ಅಯ್ಯರ್​ ಅವರನ್ನು 9 ರನ್​ಗೆ ಪೆವಿಲಿಯನ್​ಗೆ ಕಳುಹಿಸಿ ಬಿಗ್ ಶಾಕ್ ನೀಡಿದ್ದು ಇದೇ ವೈಶಾಕ್. ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವ ಕನಸನ್ನು ಅಯ್ಯರ್ ಕಂಡಿದ್ದರು. ಆದರೆ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ಅಯ್ಯರ್​ ನಿರಾಸೆ ಆಗಿದೆ. ಅಯ್ಯರ್ ಮಾತ್ರವಲ್ಲ, ರಜತ್ ಪಾಟಿದಾರ್, ಅರ್ಷದೀಪ್ ಸಿಂಗ್ ವಿಕೆಟ್ ಕೂಡ ಕಬಳಿಸಿದರು. ಇಂಡಿಯಾ ಡಿ ತಂಡವು 164 ರನ್​ಗಳಿಗೆ ಆಲ್ಔಟ್ ಆಗಿದ್ದು, ಇಂಡಿಯಾ ಸಿ ತಂಡವು 4 ವಿಕೆಟ್ ಕಳೆದುಕೊಂಡು 91 ರನ್​ಗಳಿಸಿ ಆಡುತ್ತಿದೆ.

ಇದನ್ನೂ ಓದಿ: ಈ 5 ದಿಗ್ಗಜರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್; ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಅಂತ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್

https://newsfirstlive.com/wp-content/uploads/2024/09/VYSHAK.jpg

    ಇಂಡಿಯಾ ಸಿ ತಂಡದಲ್ಲಿ ಕನ್ನಡಿಗ ವಿಜಯಕುಮಾರ್​ ವೈಶಾಕ್

    ಮೂರು ವಿಕೆಟ್ ಕಿತ್ತು ಟೀಂ ಇಂಡಿಯಾ ಡೋರ್ ಬಡಿದಿದ್ದಾರೆ

    ಕಂಬ್ಯಾಕ್ ಕನಸು ಕಂಡಿದ್ದ ಅಯ್ಯರ್​ಗೆ ಬಿಗ್ ಶಾಕ್ ​​

ದುಲೀಪ್ ಟ್ರೋಫಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್ ಸಂಚಲನ ಸೃಷ್ಟಿಸಿದ್ದಾರೆ. ಇಂಡಿಯಾ ಸಿ ತಂಡವನ್ನು ಪ್ರತಿನಿಧಿಸುತ್ತಿರುವ ಆರ್​ಸಿಬಿ ಬೌಲರ್​, ಮಿಂಚಿನ ಬೌಲಿಂಗ್ ನಡೆಸಿದ ಟೀಂ ಇಂಡಿಯಾದ ಡೋರ್​ ತಟ್ಟಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಇಂಡಿಯಾ ಸಿ ತಂಡವು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ವೈಶಾಕ್, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 12 ಓವರ್​ಗಳಲ್ಲಿ ಕೇವಲ 19 ರನ್​ ನೀಡಿ, ಮೂರು ಮೇಡಿನ್ ಓವರ್ ಮಾಡಿದರು. ಅಲ್ಲದೇ ಮೂರು ವಿಕೆಟ್ ಪಡೆದು ಇಂಡಿಯಾ ಡಿ ತಂಡವನ್ನು ಕೇವಲ 164 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?

ಶ್ರೇಯಸ್ ಅಯ್ಯರ್​ ಅವರನ್ನು 9 ರನ್​ಗೆ ಪೆವಿಲಿಯನ್​ಗೆ ಕಳುಹಿಸಿ ಬಿಗ್ ಶಾಕ್ ನೀಡಿದ್ದು ಇದೇ ವೈಶಾಕ್. ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವ ಕನಸನ್ನು ಅಯ್ಯರ್ ಕಂಡಿದ್ದರು. ಆದರೆ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ಅಯ್ಯರ್​ ನಿರಾಸೆ ಆಗಿದೆ. ಅಯ್ಯರ್ ಮಾತ್ರವಲ್ಲ, ರಜತ್ ಪಾಟಿದಾರ್, ಅರ್ಷದೀಪ್ ಸಿಂಗ್ ವಿಕೆಟ್ ಕೂಡ ಕಬಳಿಸಿದರು. ಇಂಡಿಯಾ ಡಿ ತಂಡವು 164 ರನ್​ಗಳಿಗೆ ಆಲ್ಔಟ್ ಆಗಿದ್ದು, ಇಂಡಿಯಾ ಸಿ ತಂಡವು 4 ವಿಕೆಟ್ ಕಳೆದುಕೊಂಡು 91 ರನ್​ಗಳಿಸಿ ಆಡುತ್ತಿದೆ.

ಇದನ್ನೂ ಓದಿ: ಈ 5 ದಿಗ್ಗಜರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್; ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಅಂತ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More