Advertisment

ಶುಭಾಂಶು ಶುಕ್ಲಾ ಭೂಮಿಗೆ ವಾಪಸ್.. ನಾಲ್ವರು ಗಗನಯಾತ್ರಿಗಳೂ ಸೇಫ್ ಸ್ಪ್ಲ್ಯಾಶ್​ಡೌನ್..!

author-image
Ganesh
Updated On
ಶುಭಾಂಶು ಶುಕ್ಲಾ ಭೂಮಿಗೆ ವಾಪಸ್.. ನಾಲ್ವರು ಗಗನಯಾತ್ರಿಗಳೂ ಸೇಫ್ ಸ್ಪ್ಲ್ಯಾಶ್​ಡೌನ್..!
Advertisment
  • ಶುಕ್ಲಾ ಸೇರಿ ನಾಲ್ವರು ಮಧ್ಯಾಹ್ನ ಭೂಮಿಗೆ ವಾಪಸ್
  • ಜೂನ್ 25ರಂದು ISSಗೆ ತೆರಳಿದ್ದ ಗಗನಯಾತ್ರಿಗಳು
  • ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತರಿಕ್ಷಯಾನ

ಜೂನ್ 25 ರಂದು ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಶುಭಾಂಶು ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್​ಡೌನ್ (Splashdown) ಆಗಿದ್ದಾರೆ.

Advertisment

ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಕಾಪುಗೆ ಅವರು ಆಕ್ಸಿಯೋಂ-4 ಮಿಷನ್ (Axiom-4) ಭಾಗವಾಗಿ ಐಎಸ್​ಎಸ್​ ತೆರಳಿದ್ದರು. ಜೂನ್ 25ರ ಬುಧವಾರ ಅಂತರಿಕ್ಷಯಾನ ಹೊರಟಿದ್ದ ಯಾತ್ರಿಗಳು, 26ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು.

ಇದನ್ನೂ ಓದಿ: ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ.. ಏನ್ ಹೇಳಿದರು?

publive-image

ಪುನಶ್ಚೇತನ ಕಾರ್ಯಕ್ರಮ..!

ಲ್ಯಾಂಡಿಂಗ್ ಬಳಿಕ ಪುನಶ್ಚೇತನ ಕಾರ್ಯಕ್ರಮ ಇದೆ. ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುವಾಗುವಂತೆ 7 ದಿನಗಳ ಪುನಶ್ಚತನಕ್ಕೆ ಒಳಪಡಲಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತದ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆಗಸದಲ್ಲಿ ಶುಭಾರಂಭ ಅಂತರಿಕ್ಷ ಯಾನ ಅಂತ್ಯವಾಗಿದೆ. ಗಗನದಿಂದ ಭಾರತವನ್ನು ಸಾರೆ ಜಹಾಂಸೆ ಅಚ್ಛಾ ಅಂತ ಶುಕ್ಲಾ ಬಣ್ಣಿಸಿದ್ದರು.

Advertisment

ಭಾರತದ ಪರ ಶುಕ್ಲಾ 7 ಅಧ್ಯಯನ

ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ವಿವಿಧ ಪ್ರಯೋಗ ಮಾಡಿದ್ದಾರೆ. ವಿಶೇಷ ಅಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಪ್ರಯೋಗ ಇದೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳನ್ನ ನಡೆಸಿದ್ದಾರೆ. ಜೊತೆಗೆ ದೆಹಲಿಯ 2 ಪ್ರಯೋಗ, ಕೇರಳದ 1 ಪ್ರಯೋಗ ಸಂಬಂಧ ಅಧ್ಯಯನ ನಡೆದಿದೆ.

ಇದನ್ನೂ ಓದಿ: ಭಾರತದ ಪರವಾಗಿ ಶುಕ್ಲಾ 7 ಪ್ರಯೋಗ.. ಖುಷಿ ವಿಚಾರ ಅಂದ್ರೆ ಅದರಲ್ಲಿ ಕರ್ನಾಟಕದ್ದೇ 4 ಟೆಸ್ಟ್​ಗಳು..!

publive-image

ಶುಕ್ಲಾ ನಡೆಸಿರುವ ಅಧ್ಯಯನಗಳು..

  • ಕಾಳುಗಳ ಮೊಳಕೆ: ಧಾರವಾಡದ ಕೃಷಿ ವಿವಿ, ಐಐಟಿ ಧಾರವಾಡದಿಂದ ಕಾಳುಗಳು ಮೊಳಕೆ ಹೊಡೆಯುವ ಬಗ್ಗೆ ಅಧ್ಯಯನ
  •  ಗಗನಯಾತ್ರಿಗಳ ಮಸಲ್ ಲಾಸ್: ಬಾಹ್ಯಾಕಾಶದಲ್ಲಿ ಯಾತ್ರಿಗಳ ಮಸಲ್ ಲಾಸ್ ಬಗ್ಗೆ ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ ಅಧ್ಯಯನ
  •  ಟಾರ್ಡಿಗ್ರೇಡ್: IISC ಯಿಂದ ಕಠಿಣ ಪರಿಸ್ಥಿತಿಯಲ್ಲಿ ಟಾರ್ಡಿಗ್ರೇಡ್ ಸೂಕ್ಷ್ಮಜೀವಿಗಳು ಬದುಕುಳಿಯುವ ಬಗ್ಗೆ ಅಧ್ಯಯನ
    ಎಲೆಕ್ಟ್ರಾನಿಕ್ ಡಿಸ್​ಪ್ಲೇ: IISC ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿಸಪ್ಲೇ ಬಗ್ಗೆ ಅಧ್ಯಯನ
  • ಖಾದ್ಯ ಸೂಕ್ಷ್ಮ ಪಾಚಿಗಳು: ನವದೆಹಲಿ ICGEBಯ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 3 ಆಯ್ದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆ ಅಧ್ಯಯನ
  •  ಸೈನೋಬ್ಯಾಕ್ಟೀರಿಯಾ : ನವದೆಹಲಿ ICGEBಯ ಬಾಹ್ಯಾಕಾಶದಲ್ಲಿ ಎರಡು ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ
  •  ಆಹಾರ ಬೆಳೆ ಬೀಜಗಳು: ಕೇರಳದ IISTಯ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಗ್ಗಿದ ಅಕ್ಕಿ, ಜೋಳ, ಎಳ್ಳು, ಬದನೆಕಾಯಿ, ಟೊಮೆಟೊ ಬೀಜಗಳ ಅಧ್ಯಯನ
Advertisment

ಇದನ್ನೂ ಓದಿ: ‘ನೀವು ಇಲ್ಲದಿದ್ದರೆ..’ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಪತ್ನಿ ಬಗ್ಗೆ ಶುಭಾಂಶು ಭಾವನಾತ್ಮಕ ಮಾತು.. ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment