/newsfirstlive-kannada/media/post_attachments/wp-content/uploads/2024/10/Shubhman-Gill-1.jpg)
ಲೀಡರ್ ಅಂದ್ರೆ, ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುವುದು ಮಾತ್ರವಲ್ಲ. ತಂಡದ ಹಿತಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ನಿಜವಾದ ಲೀಡರ್ನ ಕಾರಣ. ಇಂಥ ನಿರ್ಧಾರ ತೆಗೆದುಕೊಂಡಿರುವ ಶುಭ್ಮನ್ ಗಿಲ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯನ್ನ ನೆನಪಿಸಿದ್ದಾರೆ. ಅಂದ್ಹಾಗೆ ಶುಭ್ಮನ್ ತೆಗೆದುಕೊಂಡ ಆ ನಿರ್ಧಾರಕ್ಕೂ, ಮಾಹಿ, ಕೊಹ್ಲಿಗೂ ಏನ್ ಸಂಬಂಧ. ಈ ಸ್ಟೋರಿ ಓದಿ.
ಸೀಸನ್-18ರ ಐಪಿಎಲ್ ರಿಟೈನ್ ರಿಲೀಸ್ ಲೆಕ್ಕಾಚಾರಗಳು ದಿನೇ ದಿನೇ ರೋಚಕತೆ ಪಡೆದುಕೊಳ್ಳುತ್ತಿದೆ. ಕ್ಷಣ ಕ್ಷಣಕ್ಕೂ ಹೊರ ಬೀಳ್ತಿರುವ ಸುದ್ದಿಗಳು ಫ್ಯಾನ್ಸ್ ಕುತೂಹಲಕ್ಕೆ ಕಾರಣವಾಗ್ತಿದೆ. ಇಂದು ಸಂಜೆಯೊಳಗೆ ಯಾವ್ಯಾವ ತಂಡಗಳು ಯಾರನ್ನ ಉಳಿಸಿಕೊಳ್ಳುತ್ತೆಂಬ ಕ್ಲಿಯರ್ ಕಟ್ ಅನ್ಸರ್ ಸಿಗುತ್ತೆ. ಆದ್ರೆ, ಈ ನಡುವೆ ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಇದು CSK ಫ್ಯಾನ್ಸ್ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ?
ಹೌದು! ಗುಜರಾತ್ ಟೈಟನ್ಸ್ ಉಳಿಸಿಕೊಳ್ಳುವ ಆಟಗಾರರನ್ನು ಬಹುತೇಕ ಅಂತಿಮಗೊಳಿಸಿದೆ. ಮುಂದಿನ ಸೀಸನ್ನಲ್ಲೂ ಶುಭ್ಮನ್ ಗಿಲ್, ನಾಯಕರಾಗಿಯೇ ಮುಂದುವರಿಯಲಿದ್ದಾರೆ. ಆದ್ರೆ, ತಂಡದ ಹಿತಕ್ಕಾಗಿ ತೆಗೆದುಕೊಂಡಿರುವ ಒಂದು ನಿರ್ಧಾರ ಗಿಲ್ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ.
ಸ್ಟಾರ್ ಸ್ಪಿನ್ನರ್ ರಶೀದ್ ಫಸ್ಟ್ ರಿಟೈನ್ ಚಾಯ್ಸ್..!
ಶುಭ್ಮನ್ ಗಿಲ್, ಗುಜರಾತ್ ಟೈಟನ್ಸ್ ತಂಡದ ನಾಯಕನಾರಾಗಿಯೇ ಮುಂದುವರಿಯಲಿದ್ದಾರೆ. ಆದರೆ, ಫಸ್ಟ್ ರಿಟೈನ್ ಆಯ್ಕೆ ಶುಭ್ಮನ್ ಗಿಲ್ ಅಲ್ಲ. ಮತ್ಯಾರು ಅಂದ್ರೆ, ಅಫ್ಘಾನ್ ಸ್ಟಾರ್ ರಶೀದ್ ಖಾನ್.
ಇದನ್ನೂ ಓದಿ: IPL 2025: ಎಷ್ಟು ಆಟಗಾರರನ್ನ ರಿಟೈನ್ ಮಾಡಬಹುದು? ರಿಟೈನ್ ಆಟಗಾರರಿಗೆ ಸಿಗೋ ಹಣವೆಷ್ಟು ಗೊತ್ತಾ?
ಹೌದು! ಅಫ್ಘಾನ್ ಸ್ಟಾರ್ ಆಟಗಾರ ರಶೀದ್ ಖಾನ್, ಮೊದಲ ರಿಟೈನ್ ಆಗಿದ್ದಾರೆ. 2ನೇ ರಿಟೈನರ್ ಆಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಶುಭ್ಮನ್, ಮೊದಲ ರಿಟೈನ್ ಆಗಿ ಯಾಕಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇದಕ್ಕೆ ಕಾರಣ ಶುಭ್ಮನ್ ಗಿಲ್.
ಟಾಪ್ ರಿಟೈನ್ಶನ್ ತ್ಯಾಗ!
ಮೊದಲ ರಿಟೈನ್, ಹೆಚ್ಚು ಹಣ ಸಿಗಲಿಲ್ಲ ಎಂದು ಸಾಲು ಸಾಲು ಆಟಗಾರರು, ಫ್ರಾಂಚೈಸಿಗಳನ್ನ ತೊರೆದಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಶುಭ್ಮನ್, ಭಿನ್ನವಾಗಿ ಕಾಣ್ತಿದ್ದಾರೆ. 25ರ ವಯಸ್ಸಿನಲ್ಲೂ ಗಿಲ್, ಪ್ರಬುದ್ಧತೆ ಮರೆದಿದ್ದಾರೆ. ಹಣದ ಬದಲಾಗಿ ತಂಡದ ಹಿತಕ್ಕೆ ಪ್ರಾಮುಖ್ಯತೆ ನೀಡಿರುವ ಶುಭ್ಮನ್, ಮ್ಯಾಚ್ ವಿನ್ನರ್ ರಶೀದ್ ಖಾನ್ಗೆ ಮೊದಲ ರಿಟೈನ್ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಗುಜರಾತ್ ಟೈಟನ್ಸ್, ಲೆಗ್ ಸ್ಪಿನ್ನರ್ ರಶೀದ್ಗೆ 18 ಕೋಟಿ ನೀಡಿದ ಮೊದಲ ರಿಟೈನ್ ಮಾಡಿಕೊಳ್ಳುತ್ತಿದೆ. ಇನ್ಫ್ಯಾಕ್ಟ್ ಇದಕ್ಕೆ ರಶೀದ್ ಖಾನ್ ಅರ್ಹರೂ ಕೂಡ.
ತ್ಯಾಗಮಹಿ ಶುಭ್ಮನ್ ನಿರ್ಧಾರದ ಹಿಂದಿದೆ ಲೆಕ್ಕಾಚಾರ!
ಶುಭ್ಮನ್ ಗಿಲ್, ರಶೀದ್ ಖಾನ್ ಹೆಸರು ಸೂಚಿಸಿರುವ ಹಿಂದೆ ಭವಿಷ್ಯದ ಲೆಕ್ಕಾಚಾರ ಇದೆ. ಮುಂದಿನ ಆವೃತ್ತಿಯಲ್ಲಿ ಬಲಿಷ್ಠ ತಂಡ ಕಟ್ಟುವ ಉದ್ದೇಶ ಹೊಂದಿರುವ ಗಿಲ್, ನಂ.1 ರಿಟೈನ್ ಸ್ಪಾಟ್ನ ರಶೀದ್ಗೆ ನೀಡುವ ಮೂಲಕ ಅಸಮಾಧಾನದ ಹೊಗೆಯಾಡದಂತೆ ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮಿಂದ ಉಳಿಯುವ ಹಣದಿಂದ ಪರ್ಸ್ ಹೆಚ್ಚಾಗುವಂತೆ ಮಾಡಿರುವ ಗಿಲ್, ಮೆಗಾ ಹರಾಜಿನಲ್ಲಿ ಬಳಕೆಯಾಗುವಂತೆ ನಡೆದುಕೊಂಡಿದ್ದಾರೆ.
ಇದಿಷ್ಟೇ ಅಲ್ಲ. ರಶೀದ್ ಖಾನ್, ಗುಜರಾತ್ ತಂಡದ ಟ್ರಂಪ್ ಕಾರ್ಡ್ ಆ್ಯಂಡ್ ಮ್ಯಾಚ್ ವಿನ್ನರ್ ಪ್ಲೇಯರ್. ಸ್ಮರಣೀಯ ಗೆಲುವುಗಳ ಹಿಂದಿನ ರೂವಾರಿ ಈತನೇ ಆಗಿದ್ದಾರೆ. ಇದೇ ಕಾರಣಕ್ಕೆ ರಶೀದ್, ಫಸ್ಟ್ ರಿಟೈನ್ಗೆ ಸೂಕ್ತ ಅನ್ನೋದು ಶುಭ್ಮನ್ ಅಭಿಮತವಾಗಿದೆ.
ಜಡೇಜಾಗಾಗಿ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದ ಮಾಹಿ
ಶುಭ್ಮನ್ ಗಿಲ್ರ ಈ ನಿರ್ಧಾರ ಲೆಜೆಂಡರಿ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯನ್ನೇ ನೆನಪಿಸಿದೆ. ಯಾಕಂದ್ರೆ, 2022ರ ಸೀನಸ್ ಆರಂಭಕ್ಕೂ ಮುನ್ನ ಧೋನಿ, ಇಂಥದ್ದೇ ನಿರ್ಧಾರ ತೆಗೆದುಕೊಂಡಿದ್ದರು. ಆಲ್ರೌಂಡರ್ ರವೀಂದ್ರ ಜಡೇಜಾಗಾಗಿ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದ ಧೋನಿ, 2ನೇ ರಿಟೈರ್ ಆಟಗಾರನಾಗಿ 12 ಕೋಟಿಗೆ ತೃಪ್ತಿ ಪಟ್ಟಿದ್ದರು. ಮೊದಲ ಸ್ಥಾನದಲ್ಲಿದ್ದ ಜಡೇಜಾ, 16 ಕೋಟಿ ಜೇಬಿಗೆ ಇಳಿಸಿದ್ರು.
ಧೋನಿನೇ ಅಲ್ಲ.! ವಿರಾಟ್ ಕೊಹ್ಲಿ ಸಹ ವೇತನ ಕಡಿತಕ್ಕೆ ಸೂಚಿಸಿದ್ದರು. ತಂಡದ ಹಿತ ದೃಷ್ಟಿಯಿಂದ 17 ಕೋಟಿಯ ವೇತನದ ಬದಲಾಗಿ 15 ಕೋಟಿ ಪಡೆದುಕೊಂಡಿದ್ದರು. ಇದರಿಂದ ಉಳಿದ 2 ಕೋಟಿ ಆರ್ಸಿಬಿ ಮೆಗಾ ಹರಾಜಿನಲ್ಲಿ ವಿನಯೋಗಿಸಿತ್ತು. ಆದ್ರೀಗ ಇಂಥದ್ದೇ ಹಾದಿಯಲ್ಲಿ ಶುಭ್ಮನ್ ಗಿಲ್, ಸಾಗಿದ್ದಾರೆ. ತನ್ನ ವೈಯಕ್ತಿಕ ಲಾಭಕ್ಕಿಂತ ತಂಡದ ಹಿತಕ್ಕೆ ಆದ್ಯತೆ ನೀಡಿದ್ದಾರೆ. ಇದು ಶುಭ್ಮನ್ ಗಿಲ್ನ ಹೃದಯ ವೈಶಾಲ್ಯತೆಯನ್ನಷ್ಟೇ ತೋರಿಸ್ತಿಲ್ಲ. ತನ್ನಲ್ಲಿನ ನಾಯಕತ್ವದ ಗುಣಗಳನ್ನು ತೋರಿಸ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ