ಟೀಮ್ ಇಂಡಿಯಾಕ್ಕೆ ಕೈ ಕೊಟ್ಟ ಬ್ಯಾಟರ್ಸ್​​.. 193 ರನ್​ ಚೇಸ್​ ಮಾಡಲಾಗದ ಗಿಲ್​ ಸೇನೆಗೆ ಭಾರೀ ಅವಮಾನ! ​

author-image
Bheemappa
Updated On
ಟೀಮ್ ಇಂಡಿಯಾಕ್ಕೆ ಕೈ ಕೊಟ್ಟ ಬ್ಯಾಟರ್ಸ್​​.. 193 ರನ್​ ಚೇಸ್​ ಮಾಡಲಾಗದ ಗಿಲ್​ ಸೇನೆಗೆ ಭಾರೀ ಅವಮಾನ! ​
Advertisment
  • ಹಾಗೇ ಬಂದು ಹೀಗೆ ಹೆಜ್ಜೆ ಹಾಕುತ್ತಿದ್ದ ಭಾರತದ ಎಲ್ಲ ಬ್ಯಾಟ್​ಮನ್ಸ್​
  • ಟೀಮ್ ಇಂಡಿಯಾ ಭರವಸೆ ಬ್ಯಾಟ್ಸ್​ಮನ್​ ಕನ್ನಡಿಗ ಕೈಹಿಡಿಯಲಿಲ್ಲ
  • ಯಾವೊಬ್ಬ ಬ್ಯಾಟರ್​ ಸಹ 40 ರನ್​ಗಳ ಸನಿಹಕ್ಕೂ ಹೋಗಲೇ ಇಲ್ಲ!

ಮೂರನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶುಭ್​ಮನ್​ ಗಿಲ್ ನೇತೃತ್ವದ ಟೀಮ್ ಇಂಡಿಯಾ ನೆಲಕಚ್ಚಿದೆ. ಕೇವಲ 22 ರನ್​ಗಳಿಂದ ಭಾರತ ತಂಡ ಸೋಲೋಪ್ಪಿಕೊಂಡಿದೆ. ಇದರಿಂದ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1ರಿಂದ ಮುನ್ನಡೆ ಕಾಯ್ದುಕೊಂಡಿದೆ.

publive-image

ಲಂಡನ್​​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆಯ ನಾಯಕ ಬೆನ್​ ಸ್ಟೋಕ್ಸ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದರು. ಆದರೆ ಭಾರತದ ಬೌಲರ್​ಗಳ ಮಾರಕ ದಾಳಿಗೆ ಕ್ರೀಸ್​​ನಲ್ಲಿ ಹೆಚ್ಚು ಹೊತ್ತು ನಿಲ್ಲದ ಇಂಗ್ಲೆಂಡ್ ಬ್ಯಾಟರ್​ಗಳು ಕೇವಲ 387 ರನ್​ಗೆ ಆಲೌಟ್​ ಆಗಿದ್ದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 387 ರನ್​ಗೆ ಆಲೌಟ್​ ಆಗಿದ್ದರಿಂದ ಮುನ್ನಡೆ ಕಾಯ್ದುಕೊಳ್ಳಲಾಗಲಿಲ್ಲ. ಇದರಿಂದ ಮೊದಲ ಇನ್ನಿಂಗ್ಸ್​ ಟೈ ಎಂದೇ ಹೇಳಬಹುದು.

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್​​ ಬೀಸಿದ್ದ ಬೆನ್​ ಸ್ಟೋಕ್ಸ್​ ನೇತೃತ್ವದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​ಗಿಂತ ಹೀನಾಯವಾಗಿ ಆಡಿದ್ದರು. ಏಕೆಂದರೆ ಯಾವೊಬ್ಬ ಬ್ಯಾಟರ್ ಕೂಡ 40 ರನ್​ಗಳ ಗಡಿ ದಾಟಿರಲಿಲ್ಲ. ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ಕೇವಲ 192 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಅಲ್ಪ ಮೊತ್ತದ ಟಾರ್ಗೆಟ್​ ಅನ್ನು ಚೇಸ್​ ಮಾಡಲಾಗದೇ ಟೀಮ್ ಇಂಡಿಯಾ ಪರಾಭವಗೊಂಡಿರುವುದು ಭಾರೀ ನಿರಾಶೆ ಮೂಡಿಸಿದೆ. ಯುವ ಬ್ಯಾಟರ್​ಗಳಿಂದ ಕೂಡಿದ ಭಾರತ 3ನೇ ಟೆಸ್ಟ್​ ಪಂದ್ಯವನ್ನು ಕೈಚೆಲ್ಲಿ ಕುಳಿತಿದೆ.​

2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ದೊಡ್ಡ ಪೆಟ್ಟು ತಿಂದಿತು. ಯಶಸ್ವಿ ಜೈಸ್ವಾಲ್ ಅವರು ಡಕೌಟ್ ಆಗಿರುವುದು ತಂಡಕ್ಕೆ ಮಾರಕವಾಗಿ ಕಾಡಿತು. ಕನ್ನಡಿಗ ಕೆ.ಎಲ್ ರಾಹುಲ್ ಕೊನೆ ದಿನದವರೆಗೆ ಬ್ಯಾಟಿಂಗ್ ಕಾಯ್ದುಕೊಂಡರೂ ಉಪಯೋಗವಾಗಲಿಲ್ಲ. 39 ರನ್​ಗೆ ಎಲ್​​ಬಿಗೆ ಬಲಿಯಾದರು. ಮೊದಲೆರಡು ಟೆಸ್ಟ್​ನಲ್ಲಿ ವಿಫಲವಾಗಿದ್ದ ಕನ್ನಡಿಗ ಕರುಣ್ ನಾಯರ್ (14) ಈ ಪಂದ್ಯದಲ್ಲೂ ತಂಡಕ್ಕೆ ಭಾರವಾದರು. ನಾಯಕ ಗಿಲ್ 6, ಆಕಾಶ್ ದೀಪ್ 1 ರನ್​ಗೆ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್​ಗೆ ನಡೆದರು.

ಇದನ್ನೂ ಓದಿ: ಕರುಣ್ ನಾಯರ್​ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್​ ಕುಂಬ್ಳೆ, ಏನಂದ್ರು?

publive-image

ವಿಕೆಟ್ ಕೀಪರ್ ರಿಷಭ್ ಪಂತ್ ಭರವಸೆ ಮೂಡಿಸುತ್ತಾರೆ ಎಂದುಕೊಳ್ಳುವಷ್ಟರಲ್ಲಿ 9 ರನ್​ಗೆ ಕ್ಲೀನ್ ಬೋಲ್ಡ್​ ಆಗಿ ಫ್ಯಾನ್ಸ್​ಗೆ ನಿರಾಶೆ ಮೂಡಿಸಿದರು. ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ ಡಕೌಟ್ ಆಗಿದ್ದು ಮತ್ತಷ್ಟು ರನ್​ಗಳ ಹಿನ್ನಡೆಗೆ ಕಾರಣವಾಯಿತು. ರವೀಂಧ್ರ ಜಡೇಜಾ (ಅಜೇಯ 61 ರನ್) ತಂಡಕ್ಕೆ ಬಲವಾದ ಅಸ್ತ್ರದಂತೆ ಕಂಡರೂ ಯಾವ ಬ್ಯಾಟರ್​ ಕೂಡ ಜಡೇಜಾಗೆ ಸಾಥ್​ ಕೊಡಲಿಲ್ಲ.

ಹೀಗಾಗಿ ಟೀಮ್ ಇಂಡಿಯಾ ಆಂಗ್ಲರ ಎದುರು ತಲೆ ಬಾಗುವಂತೆ ಆಯಿತು. ಕೊನೆ ದಿನವಾಗಿದ್ದರಿಂದ ಡ್ರಾ ಮಾಡಿಕೊಳ್ಳುವ ಅವಕಾಶವೂ ಭಾರತಕ್ಕಿತ್ತು. ಆದರೆ ವಿಕೆಟ್​ಗಳು ಪಟ ಪಟ ಉದುರುತ್ತಿದ್ದಂರಿಂದ ಡ್ರಾಗೆ ಪ್ರಯತ್ನಿಸಲಿಲ್ಲ. 22 ರನ್​ಗಳಿಂದ ಭಾರತ ಪರಾಭವಗೊಂಡಿದ್ದು ಇಂಗ್ಲೆಂಡ್ ತಂಡ 2-1 ರಿಂದ ಸರಣಿಯಲ್ಲಿ ಮುನ್ನಡೆಯಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment