ರೌಡಿ ಶೀಟರ್ ಕೊಲೆ ಕೇಸ್..!
11 ಮಂದಿ ಪೊಲೀಸ್ ವಶಕ್ಕೆ
ಸದ್ಯ ಪೊಲೀಸರಿಂದ ವಿಚಾರಣೆ
ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮಹೇಶ್ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ನಿನ್ನೆ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್ ಸೇರಿ ಐವರು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ. ಈಗ ಕೊನೆಗೂ ಪೊಲೀಸರು ಕೇಸ್ ಸಂಬಂಧ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ್, ಕಾರ್ತಿಕ್, ವಾಲೆ ಪ್ರವೀಣ, ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು ಸೇರಿ 11 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್, ವಾಲ್ಟರ್ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದರು. ಇದಾದ ಬೆನ್ನಲ್ಲೇ ಪೊಲೀಸರು ತೀವ್ರ ಶೋಧಕಾರ್ಯ ನಡೆಸಿ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತಂಡ ರಚನೆ
ಈ ಹಿಂದೆ ಡಿಸಿಪಿ ಸೌತ್-ಈಸ್ಟ್ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್ ಮೇಲೂ 2 ಕೊಲೆ ಸೇರಿ 11 ಕೇಸ್ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದರು.
ಏನಿದು ಕೇಸ್..?
ರೌಡಿ ಶೀಟರ್ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಕಾರಿಗೆ ಅಡ್ಡ ಹಾಕಿ ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೌಡಿ ಶೀಟರ್ ಕೊಲೆ ಕೇಸ್..!
11 ಮಂದಿ ಪೊಲೀಸ್ ವಶಕ್ಕೆ
ಸದ್ಯ ಪೊಲೀಸರಿಂದ ವಿಚಾರಣೆ
ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮಹೇಶ್ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ನಿನ್ನೆ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್ ಸೇರಿ ಐವರು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ. ಈಗ ಕೊನೆಗೂ ಪೊಲೀಸರು ಕೇಸ್ ಸಂಬಂಧ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ್, ಕಾರ್ತಿಕ್, ವಾಲೆ ಪ್ರವೀಣ, ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು ಸೇರಿ 11 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್, ವಾಲ್ಟರ್ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದರು. ಇದಾದ ಬೆನ್ನಲ್ಲೇ ಪೊಲೀಸರು ತೀವ್ರ ಶೋಧಕಾರ್ಯ ನಡೆಸಿ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತಂಡ ರಚನೆ
ಈ ಹಿಂದೆ ಡಿಸಿಪಿ ಸೌತ್-ಈಸ್ಟ್ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್ ಮೇಲೂ 2 ಕೊಲೆ ಸೇರಿ 11 ಕೇಸ್ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದರು.
ಏನಿದು ಕೇಸ್..?
ರೌಡಿ ಶೀಟರ್ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಕಾರಿಗೆ ಅಡ್ಡ ಹಾಕಿ ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ