/newsfirstlive-kannada/media/post_attachments/wp-content/uploads/2025/04/Siddaramaiah-2.jpg)
‘ಹನಿ’ಟ್ರ್ಯಾಪ್ ಕಹಾನಿ.. ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ.. ಕುರ್ಚಿ ಜಟಾಪಟಿ.. ಇಷ್ಟೆಲ್ಲಾ ಕಚ್ಚಾಟವೀಗ ರಾಷ್ಟ್ರರಾಜಧಾನಿ ತಲುಪಿದೆ. ಇಡೀ ಅರ್ಧ ಸರ್ಕಾರವೇ ದೆಹಲಿಯಲ್ಲಿ ಬೀಡುಬಿಟ್ಟಿದೆ. ಸಿಎಂ, ಡಿಸಿಎಂ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವರದಿ ಒಪ್ಪಿಸುತ್ತಿದ್ದಾರೆ. ಇದೇ ವೇಳೆ ಹನಿ ಕಹಾನಿ ಕೇಳಿ ವೇಣುಗೋಪಾಲ್ ಗರಂ ಆಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ಹರಿದು ಬಂದಿದೆ.
ಒನ್ ಟು ಒನ್ ಮೀಟಿಂಗ್
ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ.ವೇಣುಗೋಪಾಲ್ರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಒನ್ ಟು ಒನ್ ಸಭೆ ನಡೆಸಿದ್ರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವೇಣುಗೋಪಾಲ್ ಜೊತೆ ಎಂಎಲ್ ಸಿ ನಾಮನಿರ್ದೇಶನ, ಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಮುಂದೆ ಕರ್ನಾಟಕದ ಹನಿ ಗದ್ದಲವನ್ನು ಪಸ್ತಾಪಿಸಿ, ಶಾಸನಸಭೆಯಲ್ಲಿ ರಾಜಣ್ಣ ತಮ್ಮ ನಿಲುವು ವ್ಯಕ್ತಪಡಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ ಸ್ವಾಗತಿಸಿದ ದೇವೇಗೌಡ.. ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ..!
ಸಂಪುಟಕ್ಕೆ ಸದ್ಯಕ್ಕಿಲ್ಲ ಸರ್ಜರಿ..!
ನಾಲ್ಕು ಪ್ರಮುಖ ಅಜೆಂಡಾಗಳೊಂದಿಗೆ ಸಿಎಂ, ಡಿಸಿಎಂ ದೆಹಲಿಗೆ ತೆರಳಿದ್ದಾರೆ.. ಅದರಲ್ಲಿ ಸಚಿವ ಸಂಪುಟ ಪುರಾಚರನೆಯೂ ಒಂದು. ರಾಹುಲ್ ಗಾಂಧಿ ಜೊತೆ ಭೇಟಿ ವೇಳೆ ಸದ್ಯಕ್ಕೆ ಸಂಪುಟ ಸರ್ಜರಿಗೆ ಕೈ ಹಾಕೋದು ಬೇಡ ಎಂಬ ಚರ್ಚೆ ಆಗಿದ್ಯಂತೆ.
ಚರ್ಚೆ ಏನು?
- ನಾಗೇಂದ್ರಗೆ ಅವಕಾಶ ಮಾಡಿಕೊಡಬೇಕು ಎಂಬ ತೀರ್ಮಾನ
- ನಾಗೇಂದ್ರ ವಿಚಾರದಲ್ಲಿ ಈ ಹಿಂದೆಯೇ ನಿರ್ಧಾರ ಆಗಿತ್ತು
- ಒಬ್ಬರಿಗೆ ಅವಕಾಶ ಮಾಡಿಕೊಟ್ಟರೇ ಬೇರೆ ಸಂದೇಶ ರವಾನೆ
- ಸರ್ಕಾರದ 2ನೇ ವರ್ಷ ಆಚರಣೆ ಬಳಿಕ ಸಂಪುಟಕ್ಕೆ ಕೈ ಹಾಕೋಣ
- ರಾಹುಲ್ ಗಾಂಧಿಯ ಜೊತೆ ಮಾತುಕತೆಯಲ್ಲಿ ಸಿದ್ದು ಅಭಿಪ್ರಾಯ
- ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವೂ ಸೂಕ್ಷ್ಮವಾಗಿ ಪ್ರಸ್ತಾಪ
- ರಾಹುಲ್ ಗಾಂಧಿ ಭೇಟಿ ವೇಳೆ ಹನಿಟ್ರ್ಯಾಪ್ ವಿಚಾರ ಚರ್ಚೆ
ಕಾಂಗ್ರೆಸ್ ಸರ್ಕಾರದ 2ನೇ ವರ್ಷಾಚರಣೆಗೆ ‘ರಾಗಾ’ಗೆ ಆಹ್ವಾನ
ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರೈಸಲಿದೆ. ಈ 2ನೇ ವರ್ಷದ ಆಚರಣೆಯನ್ನು ಅದ್ಧೂರಿಯಾಗಿ ಮಾಡಲು ಸಿಎಂ ತೀರ್ಮಾನಿಸಿದ್ದಾರೆ.. ನಾಲ್ಕು ಕಂದಾಯ ವಿಭಾಗಗಳಲ್ಲಿ ಅದ್ದೂರಿ ಸಮಾರಂಭ ಮಾಡಲು ಸಿದ್ದು ಸರ್ಕಾರ ಪ್ಲಾನ್ ಮಾಡಿದೆ. ಹೀಗಾಗಿ 2ನೇ ವರ್ಷಾಚರಣೆಗೆ ಅತಿಥಿಯಾಗಿ ಬರುವಂತೆ ರಾಹುಲ್ ಗಾಂಧಿಗೆ ಸಿಎಂ ಆಹ್ವಾನ ನೀಡಿದ್ದಾರೆ. ಇನ್ನು ಸಿಎಂ ಆಹ್ವಾನಕ್ಕೆ ರಾಹುಲ್ ಸಕಾರಾತ್ಮ ಸ್ಪಂದನೆ ನೀಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಮತ್ತೊಂದು ಆಘಾತ; ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮನೋಜ್ ಕುಮಾರ್ ಇನ್ನಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ