/newsfirstlive-kannada/media/post_attachments/wp-content/uploads/2025/07/BGM_LATTE.jpg)
ಬೆಳಗಾವಿ: ಬಾ ಹುಡುಗಿ ಪಂಚಮಿಗೆ ಹಿಟ್ ಸಾಂಗ್ ಹಾಡಿದಂತ ಜಾನಪದ ಗಾಯಕ ಭಯಾನಕ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ರಾಯಬಾಗ ತಾಲೂಕಿನ ಭೂದಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಯಬಾಗ ತಾಲೂಕಿನ ಭೂದಿಹಾಳ ಗ್ರಾಮದ ಯುವಕ ಗಾಯಕ ಮಾರುತಿ ಲಟ್ಟೆ (21) ನಿಧನರಾಗಿದ್ದಾರೆ. ತಾಲೂಕಿನ ಭೂದಿಹಾಳ ಗ್ರಾಮದ ಬಳಿ ಜುಲೈ 10 ರಂದು ಗುರುವಾರ ರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಭಯಾನಕವಾದ ಅಪಘಾತ ಸಂಭವಿಸಿದೆ. ಈ ವೇಳೆ ಜಾನಪದ ಗಾಯಕ ಮಾರುತಿ ಲಟ್ಟೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಪಾಕ್ ನಟಿಯ ದುರಂತ ಅಂತ್ಯ.. 9 ತಿಂಗಳ ಹಿಂದೆಯೇ ಹೋದ ಜೀವ, ತನಿಖೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಪತ್ತೆ!
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಯಬಾಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಕ ಮಾರುತಿ ಲಟ್ಟೆ ಅವರಿಗೆ ಅಪಘಾತವಾಗಿಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇನ್ನು ಈ ಘಟನೆ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ