Advertisment

ತಮ್ಮನಿಗೆ HIV.. ಮರ್ಯಾದೆಗೆ ಅಂಜಿ ಆ್ಯಂಬುಲೆನ್ಸ್​​ನಲ್ಲೇ ಒಡ ಹುಟ್ಟಿದವನ ಕತ್ತು ಹಿಸುಕಿದ ಅಕ್ಕ..!

author-image
Ganesh
Updated On
ತಮ್ಮನಿಗೆ HIV.. ಮರ್ಯಾದೆಗೆ ಅಂಜಿ ಆ್ಯಂಬುಲೆನ್ಸ್​​ನಲ್ಲೇ ಒಡ ಹುಟ್ಟಿದವನ ಕತ್ತು ಹಿಸುಕಿದ ಅಕ್ಕ..!
Advertisment
  • ಚಿತ್ರದುರ್ಗದಲ್ಲಿ ನಡೆಯಿತು ಅಮಾನುಷ ಕೃತ್ಯ
  • ಸ್ಥಳೀಯರ ಅನುಮಾನದಿಂದ ಬಯಲಾಯ್ತು ಸತ್ಯ
  • ಆ್ಯಂಬುಲೆನ್ಸ್​ನಲ್ಲೇ ತಮ್ಮನ ಜೀವ ತೆಗೆದ ಅಕ್ಕ-ಭಾವ

ಚಿತ್ರದುರ್ಗದ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನುಷ ಕೃತ್ಯವೊಂದು ನಡೆದು ಹೋಗಿದೆ. HIV ಇದೆ ಎಂದು ಮರ್ಯಾದೆಗೆ ಅಂಜಿದ ಅಕ್ಕ, ಒಡ ಹುಟ್ಟಿದ ತಮ್ಮನ ಕುತ್ತಿಗೆ ಹಿಸುಕಿ ಮುಗಿಸಿದ್ದಾಳೆ.

Advertisment

23 ವರ್ಷದ ಯುವಕನೊಬ್ಬನಿಗೆ ಅಪಘಾತವಾಗಿತ್ತು. ಕಾಲಿಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆಪರೇಷನ್ ಮಾಡುವ ಅಗತ್ಯ ಇತ್ತು. ಹೀಗಾಗಿ ವೈದ್ಯಾಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಹೆಚ್​ಐವಿ ಇರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮತ್ತೆ ಆಸರೆಯಾದ ಕನ್ನಡಿಗ KL ರಾಹುಲ್.. ಇವತ್ತು ಕೊನೆಯ ದಿನ, ಮತ್ತಷ್ಟು ಕುತೂಹಲ..!

ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ HIV ಇರುವ ಮಾಹಿತಿ ನೀಡಿದ್ದರು. ಅಪಘಾತ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ತಮ್ಮನಿಗೆ ಹೆಚ್​ಐವಿ ಸೋಂಕು ಇರೋದನ್ನ ಅಕ್ಕ ಸಹಿಸಲಿಲ್ಲ. ಎಲ್ಲಿ ಮನೆಯ ಮರ್ಯಾದೆ ಹೋಗುತ್ತೋ ಅನ್ನೋ ಕಾರಣಕ್ಕೆ ಮರ್ಯಾದೆ ಹ*ತ್ಯೆಗೆ ಮುಂದಾಗಿದ್ದಾಳೆ. ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ಕ-ಭಾವ ಸೇರಿ ಉಸಿರುಗಟ್ಟಿಸಿ ಜೀವ ತೆಗೆದಿದ್ದಾರೆ.

Advertisment

ನಂತರ ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತಂದಿದ್ದಾರೆ. ಕುತ್ತಿಗೆಯಲ್ಲಿ ಗಾಯ ಇರೋದನ್ನು ಗಮನಿಸಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೊಳಲ್ಕೆರೆ ಠಾಣೆಗೆ ಮೃತನ ತಂದೆ ದೂರು ನೀಡಿದ್ದಾರೆ. ಬೆನ್ನಲ್ಲೇ ಅಸಲಿ ಸತ್ಯ ಗೊತ್ತಾಗಿದೆ.

ಇದನ್ನೂ ಓದಿ: ಸಂಜಯ ಕಪೂರ್ ತಾಯಿ vs ಕಂಪನಿ ನಿರ್ದೇಶಕ ಮಧ್ಯೆ ಬಿಗ್​ ಫೈಟ್​​.. 30 ಸಾವಿರ ಕೋಟಿ ಹಿಡಿತ ಯಾರ ಕೈಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment