Advertisment

ಅಯ್ಯೋ.. ಇದೆಂಥಾ ದುರ್ಘಟನೆ.. ದೋಣಿ ಮುಳುಗಿ 6 ಜನ ನಾಪತ್ತೆ

author-image
AS Harshith
Updated On
ಅಯ್ಯೋ.. ಇದೆಂಥಾ ದುರ್ಘಟನೆ.. ದೋಣಿ ಮುಳುಗಿ 6 ಜನ ನಾಪತ್ತೆ
Advertisment
  • ಮುಳುಗಿದ ದೋಣಿ.. ಆರು ಜನರು ನಾಪತ್ತೆ
  • ಪುಣೆ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಘೋರ ದುರಂತ
  • ಕಾಣೆಯಾಗಿದ್ದವರನ್ನು ಹುಡುಕಾಡುತ್ತಿರುವ ರಕ್ಷಣಾ ತಂಡ

ದೋಣಿ ಮುಳುಗಿ ಆರು ಜನ ನಾಪತ್ತೆಯಾದ ಪ್ರಕರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸೀಲ್​​ ಸಮೀಪದ ಕಲಾಶಿ ಗ್ರಾಮದ ಬಳಿ ನಡೆದಿದೆ. ಇಲ್ಲಿನ ಉಜನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮುಳುಗಿದೆ.

Advertisment

ನಗರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಪುಣೆ ಜಿಲ್ಲೆಯಲ್ಲಿ ದೋಣಿ ನಾಪತ್ತೆಯಾಗಿದೆ. ಪ್ರಾಥಮಿಕ ವರದಿಯಂತೆ ಆರು ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ದೋಣಿಯಲ್ಲಿರುವವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ ಒಟ್ಟು 7 ಜನರಿದ್ದರು ಅದರಲ್ಲಿ ಒಬ್ಬರು ಈಜಿ ಬದುಕುಳಿದಿದ್ದಾರೆ ಎಂದು ಪುಣೆಯ ವರಿಷ್ಠಾಧಿಕಾರಿ ಪಂಕಜ್​ ದೇಶಮುಖ್​ ತಿಳಿಸಿದ್ದಾರೆ.

ಇದನ್ನೂ ಓದಿ: RCBvsRR: ಎಲಿಮಿನೇಟ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ವಿಶೇಷ ಸಂದೇಶ ಕಳುಹಿಸಿದ ವಿಜಯ ಮಲ್ಯ! ಏನಂದ್ರು?

Advertisment

ಇನ್ನು ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment