ಸೂಪರ್ ಸ್ಟಾರ್ಗಳ ಮೇಲೆ ಅಭಿಷೇಕ್ ನಾಯರ್ ಹದ್ದಿನ ಕಣ್ಣು
ಇಂದಿನಿಂದ ಭಾರತ- ಶ್ರೀಲಂಕಾ ಮಧ್ಯೆ 3 ಪಂದ್ಯಗಳ ಏಕದಿನ ಸರಣಿ
ಯುದ್ಧಕ್ಕೆ ಕಿಂಗ್ ಕೊಹ್ಲಿ- ಹಿಟ್ಮ್ಯಾನ್ ರೋಹಿತ್ ಸಮರಾಭ್ಯಾಸ!
ಟಿ20ಯಲ್ಲಿ ಯಂಗ್ಸ್ಟರ್ಸ್ ಲಂಕನ್ ಲಯನ್ಸ್ನ ಬೇಟೆಯಾಡಿದ್ದಾಯ್ತು. ಇದೀಗ ಏಕದಿನ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಏಕದಿನ ಫಾರ್ಮೆಟ್ನಲ್ಲಿ ಸಿಂಹಳೀಯರನ್ನ ಬೇಟೆಯಾಡಲು ದಿಗ್ಗಜರು ಫೀಲ್ಡಿಗಿಳಿಯಲಿದ್ದಾರೆ. ಅಸಲಿ ಆಟಕ್ಕೂ ಮುನ್ನ ನೆಟ್ಸ್ನಿಂದಲೇ ಕಿಂಗ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಈ ಸ್ಟೇಡಿಯಂನಲ್ಲಿ ಕೊಹ್ಲಿ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್ಗೆ ಚಾನ್ಸ್ ಕೊಡ್ತಾರಾ ಗಂಭೀರ್?
ಶ್ರೀಲಂಕಾ ಎದುರಿನ ಟಿ20 ಸರಣಿ ಅಂತ್ಯ ಕಂಡಿದೆ. ಇದೀಗ ಏಕದಿನ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಟೀಮ್ ಇಂಡಿಯಾ ಮತ್ತೊಂದು ದಿಗ್ವಿಜಯವನ್ನ ಎದುರು ನೋಡ್ತಿದೆ. ಕೊಲಂಬೋದಲ್ಲಿ ಏಕದಿನ ಸಮರಕ್ಕೆ ಭರ್ಜರಿ ಸಮಾರಾಭ್ಯಾಸ ನಡೆದಿದೆ.
ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!
ವಿಶ್ರಾಂತಿ ಅಂತ್ಯ.. ಫೀಲ್ಡ್ಗಿಳಿಯಲು ಭಲೇ ಜೋಡಿ ರೆಡಿ.!
T20 ವಿಶ್ವಕಪ್ ಟೂರ್ನಿಯ ಬಳಿಕ ವಿಶ್ರಾಂತಿಗೆ ಜಾರಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಫೀಲ್ಡ್ಗಿಳಿಯಲು ರೆಡಿಯಾಗಿದ್ದಾರೆ. ತಿಂಗಳ ಅಂತರದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ ಮೈದಾನಕ್ಕಿಳಿಯಲಿದ್ದಾರೆ. ಇಂದು ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ದಿಗ್ಗಜರ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ.
ಅಭ್ಯಾಸದ ಅಖಾಡದಲ್ಲಿ ದಿಗ್ಗಜರ ಘರ್ಜನೆ.!
ಲಂಕನ್ನರ ಬೇಟೆಯಾಡಲು ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ 3 ದಿನದಿಂದ ಟೀಮ್ ಇಂಡಿಯಾದ ಅಭ್ಯಾಸ ಜೋರಾಗಿ ನಡೆದಿದೆ. ಲಂಕಾಗೆ ಕಾಲಿಟ್ಟ ದಿನದಿಂದಲೇ ಕಿಂಗ್ ವಿರಾಟ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಅಭ್ಯಾಸ ನಡೆಸಿದ್ರು. 3 ದಿನ ನೆಟ್ಸ್ನಲ್ಲಿ ಅಬ್ಬರಿಸೋದ್ರೊಂದಿಗೆ ಎದುರಾಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕೊಲಂಬೋ ನೆಟ್ಸ್ನಲ್ಲಿ ಕೊಹ್ಲಿ, ರೋಹಿತ್ ವಿಶೇಷ ಅಭ್ಯಾಸ
ಕೊಲಂಬೋದಲ್ಲಿ ಕಳೆದ 3 ದಿನಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶೇಷ ಅಭ್ಯಾಸ ನಡೆಸಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಗಳ ಮೇಲೆ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಹದ್ದಿನ ಕಣ್ಣಿಟ್ಟಿದ್ರು. ಟಿ20 ತಂಡದೊಂದಿಗಿದ್ದ ಅಭಿಷೇಕ್ ನಾಯರ್, 2ನೇ ಪಂದ್ಯ ಅಂತ್ಯದ ಬೆನ್ನಲ್ಲೇ ಪಲ್ಲೆಕೆಲೆಯಿಂದ ಕೊಲಂಬೋಗೆ ಪ್ರಯಾಣಿಸಿದ್ರು. ಏಕದಿನ ತಂಡ ಕೂಡಿಕೊಂಡಿದ್ದ ಅಭಿಷೇಕ್ ನಾಯರ್, ನೆಟ್ ಸೆಷನ್ನಲ್ಲೂ ಭಾಗಿಯಾಗಿದ್ರು. ಕೊಹ್ಲಿ, ರೋಹಿತ್ ಅಭ್ಯಾಸದ ಮೇಲೆ ಹೆಚ್ಚು ಫೋಕಸ್ ಮಾಡಿದ್ರು.
ತಿಂಗಳ ಬಳಿಕ ಕಮ್ಬ್ಯಾಕ್.. ರಿಧಮ್ ಕಂಡುಕೊಳ್ಳೋ ಯತ್ನ.!
ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯವೇ ಕೊನೆ. ಆ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ರೂ ಅಂಗಳಕ್ಕಿಳಿದೇ ಇಲ್ಲ. ಸುಮಾರು 1 ತಿಂಗಳಿಂದ ಮೈದಾನದಿಂದ ದೂರ ಉಳಿದಿರೋ ಈ ಇಬ್ಬರ ಮುಂದೆ ಇದೀಗ ರಿಧಮ್ ಕಂಡುಕೊಳ್ಳೋ ಚಾಲೆಂಜ್ಯಿದೆ. ಹೀಗಾಗಿಯೇ ನೆಟ್ಸ್ನಲ್ಲಿ ಹೆಚ್ಚು ಕಾಲ ಬೆವರಿಳಿಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಪೊಲೀಸರಿಂದ ಹಲ್ಲೆ; ಯುವಕನ ಸ್ಥಿತಿ ಗಂಭೀರ; ಸ್ಥಳೀಯರಿಂದ ಭಾರೀ ಆಕ್ರೋಶ
ಚಾಂಪಿಯನ್ಸ್ ಟ್ರೋಫಿಯೇ ದಿಗ್ಗಜರ ಟಾರ್ಗೆಟ್.!
T20 ವಿಶ್ವಕಪ್ ಗೆಲುವಿನೊಂದಿಗೆ ಬಹುಕಾಲದಿಂದ ಕಾಡಿದ್ದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕಿದ್ದಾಯ್ತು. ಇದೀಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂದಿನ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ. ಮುಂದಿನ ವರ್ಷ ನಡೆಯೋ ಈ ಪ್ರತಿಷ್ಠಿತ ಟ್ರೋಫಿ ಗೆಲ್ಲೋದು ಭಲೇ ಜೋಡಿಯ ಗುರಿಯಾಗಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ, ಲಂಕಾ ವಿರುದ್ಧದ 3 ಪಂದ್ಯಗಳೂ ಸೇರಿ ಕೇವಲ 6 ಏಕದಿನ ಪಂದ್ಯಗಳನ್ನಾಡಲಿದೆ. ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಈ ಪಂದ್ಯಗಳು ರೋಹಿತ್, ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್ಗೆ ಏನಾಯಿತು..?
ಚುಟುಕು ವಿಶ್ವಕಪ್ ಬಳಿಕ ಮೈದಾನದಿಂದ ಹೊರಗುಳಿದಿದ್ದ ರೋಹಿತ್, ಕೊಹ್ಲಿ ಕೊನೆಗೂ ಅಂಗಳಕ್ಕೆ ಮರಳಿದ್ದಾರೆ. ಒಂದು ತಿಂಗಳ ಬಳಿಕ ದರ್ಶನ ಕೊಡ್ತಿರೋ ದಿಗ್ಗಜರ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕುತೂಹಲದಿಂದ ಕಾಯ್ತಿದ್ದಾರೆ. ಬಹು ನಿರೀಕ್ಷೆಯಿಟ್ಟು ಕಾಯ್ತಿರೋ ಫ್ಯಾನ್ಸ್ಗೆ ಭಲೇ ಜೋಡಿ ನಿರಾಸೆ ಮೂಡಿಸದಿರಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸೂಪರ್ ಸ್ಟಾರ್ಗಳ ಮೇಲೆ ಅಭಿಷೇಕ್ ನಾಯರ್ ಹದ್ದಿನ ಕಣ್ಣು
ಇಂದಿನಿಂದ ಭಾರತ- ಶ್ರೀಲಂಕಾ ಮಧ್ಯೆ 3 ಪಂದ್ಯಗಳ ಏಕದಿನ ಸರಣಿ
ಯುದ್ಧಕ್ಕೆ ಕಿಂಗ್ ಕೊಹ್ಲಿ- ಹಿಟ್ಮ್ಯಾನ್ ರೋಹಿತ್ ಸಮರಾಭ್ಯಾಸ!
ಟಿ20ಯಲ್ಲಿ ಯಂಗ್ಸ್ಟರ್ಸ್ ಲಂಕನ್ ಲಯನ್ಸ್ನ ಬೇಟೆಯಾಡಿದ್ದಾಯ್ತು. ಇದೀಗ ಏಕದಿನ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಏಕದಿನ ಫಾರ್ಮೆಟ್ನಲ್ಲಿ ಸಿಂಹಳೀಯರನ್ನ ಬೇಟೆಯಾಡಲು ದಿಗ್ಗಜರು ಫೀಲ್ಡಿಗಿಳಿಯಲಿದ್ದಾರೆ. ಅಸಲಿ ಆಟಕ್ಕೂ ಮುನ್ನ ನೆಟ್ಸ್ನಿಂದಲೇ ಕಿಂಗ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಈ ಸ್ಟೇಡಿಯಂನಲ್ಲಿ ಕೊಹ್ಲಿ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್ಗೆ ಚಾನ್ಸ್ ಕೊಡ್ತಾರಾ ಗಂಭೀರ್?
ಶ್ರೀಲಂಕಾ ಎದುರಿನ ಟಿ20 ಸರಣಿ ಅಂತ್ಯ ಕಂಡಿದೆ. ಇದೀಗ ಏಕದಿನ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಟೀಮ್ ಇಂಡಿಯಾ ಮತ್ತೊಂದು ದಿಗ್ವಿಜಯವನ್ನ ಎದುರು ನೋಡ್ತಿದೆ. ಕೊಲಂಬೋದಲ್ಲಿ ಏಕದಿನ ಸಮರಕ್ಕೆ ಭರ್ಜರಿ ಸಮಾರಾಭ್ಯಾಸ ನಡೆದಿದೆ.
ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!
ವಿಶ್ರಾಂತಿ ಅಂತ್ಯ.. ಫೀಲ್ಡ್ಗಿಳಿಯಲು ಭಲೇ ಜೋಡಿ ರೆಡಿ.!
T20 ವಿಶ್ವಕಪ್ ಟೂರ್ನಿಯ ಬಳಿಕ ವಿಶ್ರಾಂತಿಗೆ ಜಾರಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಫೀಲ್ಡ್ಗಿಳಿಯಲು ರೆಡಿಯಾಗಿದ್ದಾರೆ. ತಿಂಗಳ ಅಂತರದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ ಮೈದಾನಕ್ಕಿಳಿಯಲಿದ್ದಾರೆ. ಇಂದು ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ದಿಗ್ಗಜರ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ.
ಅಭ್ಯಾಸದ ಅಖಾಡದಲ್ಲಿ ದಿಗ್ಗಜರ ಘರ್ಜನೆ.!
ಲಂಕನ್ನರ ಬೇಟೆಯಾಡಲು ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ 3 ದಿನದಿಂದ ಟೀಮ್ ಇಂಡಿಯಾದ ಅಭ್ಯಾಸ ಜೋರಾಗಿ ನಡೆದಿದೆ. ಲಂಕಾಗೆ ಕಾಲಿಟ್ಟ ದಿನದಿಂದಲೇ ಕಿಂಗ್ ವಿರಾಟ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಅಭ್ಯಾಸ ನಡೆಸಿದ್ರು. 3 ದಿನ ನೆಟ್ಸ್ನಲ್ಲಿ ಅಬ್ಬರಿಸೋದ್ರೊಂದಿಗೆ ಎದುರಾಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕೊಲಂಬೋ ನೆಟ್ಸ್ನಲ್ಲಿ ಕೊಹ್ಲಿ, ರೋಹಿತ್ ವಿಶೇಷ ಅಭ್ಯಾಸ
ಕೊಲಂಬೋದಲ್ಲಿ ಕಳೆದ 3 ದಿನಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶೇಷ ಅಭ್ಯಾಸ ನಡೆಸಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಗಳ ಮೇಲೆ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಹದ್ದಿನ ಕಣ್ಣಿಟ್ಟಿದ್ರು. ಟಿ20 ತಂಡದೊಂದಿಗಿದ್ದ ಅಭಿಷೇಕ್ ನಾಯರ್, 2ನೇ ಪಂದ್ಯ ಅಂತ್ಯದ ಬೆನ್ನಲ್ಲೇ ಪಲ್ಲೆಕೆಲೆಯಿಂದ ಕೊಲಂಬೋಗೆ ಪ್ರಯಾಣಿಸಿದ್ರು. ಏಕದಿನ ತಂಡ ಕೂಡಿಕೊಂಡಿದ್ದ ಅಭಿಷೇಕ್ ನಾಯರ್, ನೆಟ್ ಸೆಷನ್ನಲ್ಲೂ ಭಾಗಿಯಾಗಿದ್ರು. ಕೊಹ್ಲಿ, ರೋಹಿತ್ ಅಭ್ಯಾಸದ ಮೇಲೆ ಹೆಚ್ಚು ಫೋಕಸ್ ಮಾಡಿದ್ರು.
ತಿಂಗಳ ಬಳಿಕ ಕಮ್ಬ್ಯಾಕ್.. ರಿಧಮ್ ಕಂಡುಕೊಳ್ಳೋ ಯತ್ನ.!
ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯವೇ ಕೊನೆ. ಆ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ರೂ ಅಂಗಳಕ್ಕಿಳಿದೇ ಇಲ್ಲ. ಸುಮಾರು 1 ತಿಂಗಳಿಂದ ಮೈದಾನದಿಂದ ದೂರ ಉಳಿದಿರೋ ಈ ಇಬ್ಬರ ಮುಂದೆ ಇದೀಗ ರಿಧಮ್ ಕಂಡುಕೊಳ್ಳೋ ಚಾಲೆಂಜ್ಯಿದೆ. ಹೀಗಾಗಿಯೇ ನೆಟ್ಸ್ನಲ್ಲಿ ಹೆಚ್ಚು ಕಾಲ ಬೆವರಿಳಿಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಪೊಲೀಸರಿಂದ ಹಲ್ಲೆ; ಯುವಕನ ಸ್ಥಿತಿ ಗಂಭೀರ; ಸ್ಥಳೀಯರಿಂದ ಭಾರೀ ಆಕ್ರೋಶ
ಚಾಂಪಿಯನ್ಸ್ ಟ್ರೋಫಿಯೇ ದಿಗ್ಗಜರ ಟಾರ್ಗೆಟ್.!
T20 ವಿಶ್ವಕಪ್ ಗೆಲುವಿನೊಂದಿಗೆ ಬಹುಕಾಲದಿಂದ ಕಾಡಿದ್ದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕಿದ್ದಾಯ್ತು. ಇದೀಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂದಿನ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ. ಮುಂದಿನ ವರ್ಷ ನಡೆಯೋ ಈ ಪ್ರತಿಷ್ಠಿತ ಟ್ರೋಫಿ ಗೆಲ್ಲೋದು ಭಲೇ ಜೋಡಿಯ ಗುರಿಯಾಗಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ, ಲಂಕಾ ವಿರುದ್ಧದ 3 ಪಂದ್ಯಗಳೂ ಸೇರಿ ಕೇವಲ 6 ಏಕದಿನ ಪಂದ್ಯಗಳನ್ನಾಡಲಿದೆ. ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಈ ಪಂದ್ಯಗಳು ರೋಹಿತ್, ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್ಗೆ ಏನಾಯಿತು..?
ಚುಟುಕು ವಿಶ್ವಕಪ್ ಬಳಿಕ ಮೈದಾನದಿಂದ ಹೊರಗುಳಿದಿದ್ದ ರೋಹಿತ್, ಕೊಹ್ಲಿ ಕೊನೆಗೂ ಅಂಗಳಕ್ಕೆ ಮರಳಿದ್ದಾರೆ. ಒಂದು ತಿಂಗಳ ಬಳಿಕ ದರ್ಶನ ಕೊಡ್ತಿರೋ ದಿಗ್ಗಜರ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕುತೂಹಲದಿಂದ ಕಾಯ್ತಿದ್ದಾರೆ. ಬಹು ನಿರೀಕ್ಷೆಯಿಟ್ಟು ಕಾಯ್ತಿರೋ ಫ್ಯಾನ್ಸ್ಗೆ ಭಲೇ ಜೋಡಿ ನಿರಾಸೆ ಮೂಡಿಸದಿರಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ