ಕಾಡುಗಳ್ಳ ವೀರಪ್ಪನ್ ತೋಳಿನಿಂದ ಅಣ್ಣಾವ್ರ ಬಿಡಿಸಿಕೊಂಡು ಬಂದಿದ್ದೇ ರೋಚಕ.. SM ಕೃಷ್ಣರ ಪಾತ್ರ ಹೇಗಿತ್ತು..?

author-image
Bheemappa
Updated On
ಕಾಡುಗಳ್ಳ ವೀರಪ್ಪನ್ ತೋಳಿನಿಂದ ಅಣ್ಣಾವ್ರ ಬಿಡಿಸಿಕೊಂಡು ಬಂದಿದ್ದೇ ರೋಚಕ.. SM ಕೃಷ್ಣರ ಪಾತ್ರ ಹೇಗಿತ್ತು..?
Advertisment
  • ಘಟನೆಯಿಂದ ಬಹಳಷ್ಟು ನೊಂದುಕೊಂಡಿದ್ದ ಎಸ್​.ಎಂ ಕೃಷ್ಣ
  • ಡಾ.ರಾಜ್​​ಕುಮಾರ್ ಅಪಹರಣದಿಂದ ರಾಜ್ಯಕ್ಕೆ ಮುಜುಗರ
  • 92ನೇ ವಯಸ್ಸಿನಲ್ಲಿ ನಿಧನ ಹೊಂದಿದ ಮಾಜಿ ಸಿಎಂ SM ಕೃಷ್ಣ

ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ಇಂದು ನಿಧನರಾಗಿದ್ದಾರೆ. 92 ವರ್ಷಗಳು ಆಗಿದ್ದ ಎಸ್​.ಎಂ ಕೃಷ್ಣ ಅವರಿಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ತಡರಾತ್ರಿ ಸದಾಶಿವ ನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಎಸ್​.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವರನಟ ಡಾ.ರಾಜ್​ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದನು. ಈ ವೇಳೆ ಸಿಎಂ ಆಗಿದ್ದ ಎಸ್​.ಎಂ ಕೃಷ್ಣ ಬಹಳಷ್ಟು ನೊಂದುಕೊಂಡಿದ್ದರು.

publive-image

ಮೇರುನಟ ಡಾ.ರಾಜ್​ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿರುವುದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅವರ ಅಪಹರಣ ಮಾಡಿರುವುದು ರಾಜ್ಯದ ಮುಜುಗರದ ಜೊತೆಗೆ ಸಿಎಂ ಆಗಿದ್ದ ಎಸ್​.ಎಂ ಕೃಷ್ಣ ಅವರಿಗೂ ಮಾನಸಿಕ ಚಿಂತೆ ತಂದಿಟ್ಟಿತ್ತು. ರಾಜ್ಯದ ಹಿರಿಯ ಸಿನಿಮಾ ನಟರನ್ನು ಕಿಡ್ನಾಪ್ ಮಾಡಿರುವುದು ಅಭಿಮಾನಿಗಳಿಗೆ ಸಹಿಸದ ವಿಚಾರವಾಗಿತ್ತು. ಅಭಿಮಾನಿಗಳು ಸಿಡಿದೆದ್ದರೇ ಏನು ಗತಿ ಎನ್ನುವ ಆಲೋಚನೆ ಎಸ್​.ಎಂ ಕೃಷ್ಣರನ್ನ ಕಾಡಿತ್ತಿ.

ಕಾಡುಗಳ್ಳ ವೀರಪ್ಪನ್ ಒಂದು ವೇಳೆ ಡಾ.ರಾಜ್​ಕುಮಾರ್ ಅವರಿಗೆ ಏನಾದರೂ ಹಾನಿ ಮಾಡಿದರೆ ಸಮಸ್ಯೆ ದೊಡ್ಡದಾಗುತ್ತದೆ. ಬೆಂಗಳೂರಲ್ಲಿ ತಮಿಳರು ಇದ್ದಾರೆ. ಇವರ ವಿರುದ್ಧ ಕನ್ನಡಿಗರು ಸಿಡಿದೆದ್ದರೇ ರಾಜ್ಯದ ಚಿತ್ರಣವೇ ಬೇರೆ ರೀತಿ ಆಗುತ್ತದೆ ಅಂತ ಎಸ್​.ಎಂ ಕೃಷ್ಣರ ಮನಸ್ಸು ಕದಡಿತ್ತು. ರಾಜ್​ಕುಮಾರ್​ ಅವರನ್ನು ವಾಪಸ್ ಕರೆದುಕೊಂಡು ಬರುವುದು ಸಿಎಂಗೆ ದೊಡ್ಡ ಸವಾಲಾಗಿತ್ತು.

ಈ ಸಂಬಂಧ ಎಸ್​.ಎಂ ಕೃಷ್ಣ ಅವರು ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ರಾಜಕೀಯ ನಾಯಕರು ಕರುಣಾನಿಧಿ, ಜಯಲಲಿತಾ ಸೇರಿ ಇತರೆ ನಾಯಕರನ್ನು ಭೇಟಿ ಮಾಡಿದ್ದರು. ರಾಜ್​ಕುಮಾರ್ ಅವರನ್ನು ಬಿಡಿಸಿಕೊಂಡು ಬರುವುದು ಹೇಗೆ ಎಂದು ಅವರ ಜೊತೆ ಚರ್ಚೆ ಮಾಡಿದ್ದರು. ಮುಂದೆ ಆಗುವ ಅನಾಹುತಗಳ ಬಗ್ಗೆಯು ಎಸ್​.ಎಂ ಕೃಷ್ಣ ಅವರು ತಮಿಳುನಾಡಿನ ರಾಜಕೀಯ ನಾಯಕರಿಗೆ ತಿಳಿ ಹೇಳಿದ್ದರು. ರಾಜ್​ಕುಮಾರ್ ಅವರನ್ನು ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ಪಟ್ಟಿದ್ದರು.

ಇದನ್ನೂ ಓದಿ: ‘ಕರ್ನಾಟಕ ಸದಾ ಋಣಿಯಾಗಿರುತ್ತದೆ’ -SM ಕೃಷ್ಣ ಅಗಲಿಕೆಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

publive-image

ಡಾ.ರಾಜ್​ ಕುಟುಂಬದ ಜೊತೆಯು ಎಸ್​.ಎಂ ಕೃಷ್ಣ ಅವರು ನಿರಂತರ ಸಂಪರ್ಕದಲ್ಲಿದ್ದರು. ರಾಜ್​ಕುಮಾರ್ ಪತ್ನಿ ಪಾರ್ವತಮ್ಮ ಅವರನ್ನು ಭೇಟಿಯಾಗಿ ಮಾತನಾಡಿ, ಎಲ್ಲ ಮಾಹಿತಿಗಳನ್ನು ಪಡೆಯುತ್ತಿದ್ದರು. ಇವರ ನಿರಂತರ ಫಲವಾಗಿ 108 ದಿನಗಳ ಬಳಿಕ ಡಾ.ರಾಜ್​ಕುಮಾರ್ ಅವರು ಆರೋಗ್ಯವಾಗಿ, ಸುರಕ್ಷಿತವಾಗಿಯೇ ವಾಪಸ್ ರಾಜ್ಯಕ್ಕೆ ಬಂದರು. ಈ ವೇಳೆ ಇಡೀ ಕರ್ನಾಟಕವೆಲ್ಲಾ ದೊಡ್ಡ ಸಂಭ್ರಮಾಚರಣೆ ಮಾಡಿತು. ಡಾ.ರಾಜ್​ಕುಮಾರನ್ನ ಕರೆದುಕೊಂಡು ಬಂದ ಮೇಲೆ ಎಸ್​.ಎಂ ಕೃಷ್ಣ ಅವರು ಸಂತಸ ಪಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment