ಫೇಸ್ಬುಕ್ ಮೂಲಕ ಸ್ನೇಹಿತರಾಗಿದ್ದ ಅನ್ನಪೂರ್ಣ ಹಾಗೂ ನವೀನ್
ರಾಜಿ ಪಂಚಾಯತಿಗೆ ಬರಲು ಹೇಳಿ ಮೂವರನ್ನು ಹತ್ಯೆಗೈದ ಅಳಿಯ
ಸೈದಾಪುರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ
ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನಿವಾಸಿ ನವೀನ್, ತನ್ನ ಹೆಂಡತಿ, ಅತ್ತೆ ಮತ್ತು ಮಾವನನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರೀತಿಸಿ ಮದುವೆಯಾದ ನವೀನ್ ನ್ಯಾಯಪಂಚಾಯತಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಅನ್ನಪೂರ್ಣ, ಮಾವ ಬಸವರಾಜ ಹಾಗೂ ಅತ್ತೆ ಕವೀತಾ ಮೃತ ದುರ್ದೈವಿಗಳು.
ಇದನ್ನೂ ಓದಿ: ಎಲ್ಲೆಲ್ಲೂ Boycott phone pay ಅಭಿಯಾನ; ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪೋನ್ ಪೇ CEO ಹೇಳಿದ್ದೇನು?
ದಾವಣಗೆರೆ ಜಿಲ್ಲೆಯ ನಿಟ್ಟೊಳ್ಳಿ ಗ್ರಾಮದ ಅನ್ನಪೂರ್ಣ ಹಾಗೂ ನವೀನ್ ಪರಸ್ಪರ ಫೇಸ್ ಬುಕ್ ಮೂಲಕ ಸ್ನೇಹಿತರಾಗಿ ಬಳಿಕ ಪ್ರೀತಿ ಮಾಡುತ್ತಿದ್ದರು. ಪ್ರೀತಿಸಿ ಮೂರು ವರ್ಷದ ನಂತರ ಮದುವೆಯಾಗಿದ್ದರು. ನವೀನ್ ಸೈದಾಪುರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ದಂಪತಿಗಳಿಗೆ ಎರಡು ವರ್ಷದ ಗಂಡು ಮಗುವಿದೆ. ಮದುವೆಯಾದ ಒಂದೂವರೇ ವರ್ಷದ ನಂತ್ರ ದಂಪತಿಗಳಲ್ಲಿ ಕಲಹ ಶುರುವಾಗಿದೆ. ಹೆರಿಗೆ ನಂತರ ಅನ್ನಪೂರ್ಣ ಗಂಡನ ಮನೆಗೆ ಹೋಗಿದ್ದಳು. ಮೂರು ತಿಂಗಳ ನಂತರ ನವೀನ್ ಕುಮಾರ್ ಹಾಗೂ ಅವರ ಮನೆಯವರು ಅನ್ನಪೂರ್ಣಗೆ ವರದಕ್ಷಿಣೆ ಕಿರುಕುಳ ನೀಡಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ಅನ್ನಪೂರ್ಣ ತವರು ಮನೆಗೆ ಬಂದಿದ್ದಳು. ನಂತರ ಅನ್ನಪೂರ್ಣಗೆ ಕರೆದುಕೊಂಡು ಹೋಗು ಅಂದ್ರು ನವೀನ್ ಕರೆದುಕೊಂಡು ಹೋಗಿರಲಿಲ್ಲ. ಅನ್ನಪೂರ್ಣಾಳ ಪೋಷಕರು ಒಂದು ವರ್ಷದಲ್ಲಿ 4 ಸಲ ಬಿಡಲು ಯತ್ನಿಸಿದರು. ನವೀನ್ ಹಾಗೂ ಅವರ ಪೋಷಕರು ಅನ್ನಪೂರ್ಣಳನ್ನು ಮನೆಯೊಳಗಡೆ ಕರೆದುಕೊಂಡಿಲ್ಲವಂತೆ. ನಂತ್ರ ನವೀನ್ ಹೆಂಡತಿಗೆ ರಾಜಿ ಪಂಚಾಯತೆಗೆ ಬರಲು ಹೇಳಿದ್ದನಂತೆ. ಅಳಿಯ ಕರೆಯುತ್ತಿದ್ದಾನೆಂದು ಮಗಳ ಜೊತೆ ಹೆತ್ತವರು ದಾವಣಗೇರಿಯಿಂದ 15 ರಂದು ಯಾದಗಿರಿ ಜಿಲ್ಲೆಯ ಸೈದಾಪುರಗೆ ಬಂದಿದ್ದರು.
ಸೈದಾಪುರ ಠಾಣೆಯಲ್ಲಿ ನ್ಯಾಯ ಪಂಚಾಯತ ನಡೆದಿದೆ. ನವೀನ್ ಅನ್ನಪೂರ್ಣಾಳಿಗೆ ಡೈವೊರ್ಸ್ ಕೊಡಲು ಬಯಸಿದ್ದ, ಆದ್ರೆ ಅನ್ನಪೂರ್ಣ ಪತಿ ಜೊತೆ ಇರಲು ಬಯಸಿದ್ದಳು. ಇದಕ್ಕೆ ನವೀನ್ ಪತ್ನಿ ಅತ್ತೆ ಹಾಗೂ ಮಾವ ನಡುವೆ ಜಗಳವಾಗಿದೆ. ನವೀನ್ ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು ನಿರ್ಧರಿಸಿದನಂತೆ. ಸೈದಾಪುರ ಪೊಲೀಸರು ಕೂಡ ದಂಪತಿಗಳಿಗೆ ಸಣ್ಣ ವಯಸ್ಸಿದೆ ಚನ್ನಾಗಿ ಜೀವನ ನಡೆಸಿ ಎಂದು ಬುದ್ದಿ ಮಾತು ಹೇಳಿದರಂತೆ. ಗಂಡನ ಜೊತೆ ಇರುತ್ತೇನೆ ಡೈವೋರ್ಸ್ ಕೊಡುವದಿಲ್ಲವೆಂದು ಅನ್ನಪೂರ್ಣ ಸೈದಾಪುರ ಠಾಣೆಯಲ್ಲಿ ಬರೆದುಕೊಟ್ಟಿದ್ದಳಂತೆ. ನವೀನ್ ಸೈದಾಪುರನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಹೆಂಡತಿ ಹಾಗೂ ಅತ್ತೆ, ಮಾವರನ್ನು ಬಾಡಿಗೆ ಮನೆಗೆ ಕರೆದುಕೊಂಡು ಹೋಗದೆ ಸೈದಾಪುರ ಪಟ್ಟಣದ ಲಾಡ್ಜ್ನಲ್ಲಿ ಇರಿಸಿದ್ದನಂತೆ.
ಇದನ್ನೂ ಓದಿ: ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!
ನ್ಯಾಯ ಪಂಚಾಯತಿಯಲ್ಲಿ ದಾವಣಗೆರೆಯಲ್ಲಿ ಹೆಂಡತಿ ಜೊತೆ ಇರುತ್ತೇನೆಂದು ಹೇಳಿದ್ದ. ಆದ್ರೆ ಡೈವೊರ್ಸ್ ನಿರಾಕರಣೆ ಮಾಡಿದ್ದು ಕೋಪ ನವೀನ್ನಲ್ಲಿತ್ತು. ಜೂಲೈ 16ರಂದು ದಾವಣಗೆರೆ ಕಾರ್ ತೆಗೆದುಕೊಂಡು ಹೊಗೋಣ ಎಂದು ಹೇಳಿದನು. ನವೀನ್ ದೊಡ್ಡಮ್ಮಳ ಊರಾದ ವಡಗೇರಾ ತಾಲೂಕಿನ ಮನಗನಾಳ ಗ್ರಾಮಕ್ಕೆ ಹೋಗಿದ್ದನು. ಮನಗನಾಳ ಗ್ರಾಮದ ದೊಡ್ಡಮ್ಮಳ ಮಗನ ಹತ್ತಿರ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡು ದಾವಣಗೆರೆಗೆ ಹೊಗೋಣ ಅಂದಿದ್ದನಂತೆ. ನವೀನ್ ದೊಡ್ಡಮ್ಮಳ ಊರಲ್ಲಿ ಇದ್ದಾಗ ಅನ್ನಪೂರ್ಣ ತಮ್ಮ ಚಿಕ್ಕಮ್ಮಳಿಗೆ ಫೊನ್ ಮೂಲಕ ತಿಳಿಸಿದ್ದಾಳೆ. ಮನಗನಾಳನಲ್ಲಿದ್ದೇವೆ ಬರುತ್ತೇವೆಂದು ಹೇಳಿದ್ದಾಳಂತೆ. ಆದ್ರೆ ದೊಡ್ಡಮ್ಮಳ ಊರಲ್ಲಿಯೇ ಇದ್ದಾಗ ನವೀನ್ ಮಾವ ಬಸವರಾಜ ಸಾಲ ಮಾಡಿ ಜೀವನ ಮಾಡಿದ್ರೆ ಹೇಗೆ ಎಂದು ಅಳಿಯನಿಗೆ ಬುದ್ದಿ ಮಾತು ಹೇಳಿದ್ದಾನೆ. ಇದರಿಂದ ಕೋಪಕೊಂಡು ಜೂಲೈ 16ರಂದು ಮಂಗಳವಾರ ಹಾಡಹಗಲೇ ಎಲ್ಲರ ಎದುರೆ ರಾಡ್ ಹಾಗೂ ಚಾಕು ಇರಿದು ಕೊಲೆ ಮಾಡಿದ್ದಾನೆ. ಹೆಂಡತಿ ಡೈವೋರ್ಸ್ ನಿರಾಕರಣೆ ಕೋಪದಿಂದ ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆ ಮಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಹೊಗೋಣ ಎಂದು ಕಾರ್ನಲ್ಲಿ ಮಾವನ ಶವ ಹಾಕಿಕೊಂಡು ಆಸ್ಪತ್ರೆಗೆ ತೆರಳದೇ ಬೆಂಡಬೆಂಬಳಿ ಕಡೆ ತೆರಳಿ ರಸ್ತೆ ಪಕ್ಕದಲ್ಲಿ ಮಾವ ಬಸವರಾಜನ ಶವ ಬಿಸಾಕಿದ್ದಾನೆ. ನಂತ್ರ ಹೆಣ್ಣು ಕೊಟ್ಟ ಅತ್ತೆ ಕವೀತಾ ಅಲಿಯಾಸ್ ಚಂದ್ರಮ್ಮ ಹಾಗೂ ಹೆಂಡತಿ ಅನ್ನಪೂರ್ಣಳಿಗೆ ಬೆದರಿಕೆ ಹಾಕಿ ಜೋಳದಡಗಿ ಹತ್ತಿರ ಕರೆದುಕೊಂಡು ಹೋಗಿ ರಾಡ್ ಹಾಗೂ ಚಾಕುವಿನಿಂದ ಅತ್ತೆ ಹಾಗೂ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿ, ಜೋಳದಡಗಿ ಹೊರ ಭಾಗದ ರಸ್ತೆ ಪಕ್ಕದಲ್ಲಿ ಬಿಸಾಕಿದ್ದಾನೆ. ಆದ್ರೆ ನವೀನ್ ಎರಡು ವರ್ಷದ ಮಗುವಾದ ನೆಹಾಂತನನ್ನು ಯಾಕೋ ಕೊಲೆ ಮಾಡಿಲ್ಲ. ಎರಡು ವರ್ಷದ ಮಗುವಿನ ಎದುರೆ ತ್ರಿವಳಿ ಕೊಲೆ ಮಾಡಿದ್ದಾನೆ ಪಾಪಿ ಅಳಿಯ ನವೀನ್.
ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬದ ಸಂಭ್ರಮ ವಿತ್ತು. ಮೊಹರಂ ಹಬ್ಬದ ವೇಳೆಯೇ ಹಂತಕ ನವೀನ್, ಹೆಣ್ಣು ಕೊಟ್ಟ ಅತ್ತೆ, ಮಾವ ಹಾಗೂ ತನ್ನ ಒಡತಿಯ ಕೊಲೆ ಮಾಡಿದ್ದಾನೆ. ಈ ವೇಳೆ ದಾವಣಗೆರೆಗೆ ಬರುತ್ತೆನೆಂದು ಹೇಳಿದವರ ಫೋನ್ ಸ್ವಿಚ್ ಆಫ್ ಆಗಿದಕ್ಕೆ ಅನ್ನಪೂರ್ಣ ತವರು ಮನೆಯವರು ಆತಂಕಗೊಂಡಿದ್ರು. ಈ ಬಗ್ಗೆ ನವೀನ್ಗೆ ಫೊನ್ ಮಾಡಿ ಕೇಳಿದ್ರೆ ಅವರಿಗೆ ಬಸ್ ಮೂಲಕ ದಾವಣಗೆರೆಗೆ ಕಳುಹಿಸಿದ್ದೆನೆಂದು ಸುಳ್ಳು ಹೇಳಿದ್ದಾನೆ. ಕೊಲೆ ಮಾಡಿ ಜೂಲೈ 16ರಂದು ರಾತ್ರಿ ನವೀನ್ ಊರಲ್ಲಿ ಏನು ಆಗಿಲ್ಲ ಎಂಬಂತೆ ಆರಾಮಾಗಿ ಇದ್ದನಂತೆ. ಅನ್ನಪೂರ್ಣ ತವರು ಮನೆಯವರು ಈ ಬಗ್ಗೆ ಸೈದಾಪುರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ನವೀನ್ನನ್ನ ವಿಚಾರಣೆ ನಡೆಸಿದಾಗ ಅಳಿಯನ ನಿಜಬಣ್ಣ ಬೆಳಕಿಗೆ ಬಂದಿದೆ. ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಕರಾಳ ಮುಖ ಬೆಳಕಿಗೆ ಬಂದಿದೆ. ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು, ಡೈವೋರ್ಸ್ ನೀಡದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನಂತೆ. ವಡಗೇರಾ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಮಾವ ಬಸವರಾಜ ಶವ ಬೆಂಡಬೆಂಬಳಿ ರಸ್ತೆ ಪಕ್ಕದಲ್ಲಿ ಎಸೆದಿದ್ದಾನೆ.
ಅದೇ ರೀತಿ ಜೋಳದಡಗಿ ಹೊರ ಭಾಗದ ರಸ್ತೆ ಪಕ್ಕದಲ್ಲಿ ಅತ್ತೆ ಚಂದ್ರಮ್ಮ ಹಾಗೂ ಪತ್ನಿ ಕೊಲೆ ಮಾಡಿ ಶವ ಬಿಸಾಕಿದ್ದು ತೊರಿಸಿದ್ದಾನೆ. ವಡಗೇರಾ ಹಾಗೂ ಸೈದಾಪುರ ಠಾಣೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಕೇವಲ ನವೀನ್ ಒಬ್ಬನೇ ಕೊಲೆ ಮಾಡಿ ಶವ ಸಾಗಾಟ ಮಾಡಿಲ್ಲ ಇದರಲ್ಲಿ ಹಲವರು ಇರಬಹುದೆಂದು ಅನುಮಾನ ವ್ಯಕ್ತವಾಗಿದೆ. ಕೊಲೆ ಮಾಡಿ ಶವ ಸಾಗಾಟ ಮಾಡಲು ಕ್ರೂಷರ್ ವಾಹನ ಬಳಕೆ ಮಾಡಿದ್ರಾ? ಕಾರಿನಲ್ಲಿ ಮೂರು ಶವ ಸಾಗಿಸಲು ಆಗುವುದಿಲ್ಲ. ಹೀಗಾಗಿ, ಈ ಕೃತ್ಯದಲ್ಲಿ ನವೀನ್ ಕುಟುಂಬಸ್ಥರು ಸಹಕರಿಸಿದ್ದಾರೆ. ನವೀನ್ ಅವರ ತಂದೆ ದೇವಿಂದ್ರಪ್ಪ , ತಾಯಿ ಅಂಜಮ್ಮ ಹಾಗೂ ನವೀನ್ ಸಹೋದರ ರಾಹುಲ್ ಹಾಗೂ ವಿಜ್ಜೆಮ್ಮ ವಿರುದ್ಧ ಕೊಲೆ ಮಾಡಿದ್ದ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಅನ್ನಪೂರ್ಣಾಳ ಚಿಕ್ಕಮ್ಮ ದೂರು ನೀಡಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಹಂತಕ ನವೀನ್ ಹಾಗೂ ತಂದೆ ದೇವಿಂದ್ರಪ್ಪ, ತಾಯಿ ಅಂಜಮ್ಮ ಈ ಮೂವರನ್ನು ಬಂಧಿಸಿದ್ದಾರೆ.
ಇನ್ನುಳಿದ ಆರೋಪಿಗಳಿಗೆ ವಿಚಾರಣೆ ನಡೆಸುತ್ತಿದ್ದಾರೆ. ಮೊಮ್ಮಗನ ಜೊತೆ ನಕ್ಕು, ನಲಿದು ಖುಷಿಯಿಂದ ಇರುತ್ತಿದ್ದ ಅಜ್ಜ, ಅಜ್ಜಿ ಕೊಲೆಯಾಗಿದ್ದಾರೆ. ಹೆತ್ತವ್ವಳ ಮಡಿಲಲ್ಲಿ ಇರಬೇಕಾದ ಗಂಡು ಮಗು ಈಗ ಅನಾಥವಾಗಿದೆ. ಮಗು ಈಗ ಅನ್ನಪೂರ್ಣ ಅವರ ಕುಟುಂಬಸ್ಥರ ಹತ್ತಿರವಿದೆ. ಯಾದಗಿರಿ ಎಸ್ಪಿ ಜಿ.ಸಂಗೀತಾ ಮಾರ್ಗದರ್ಶನದಲ್ಲಿ ವಡಗೇರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಸ್ಬುಕ್ನಿಂದ ಪ್ರೀತಿ ಮಾಡಿದ್ದ ಪ್ರೇಮಿ ಈಗ ಮೂವರನ್ನು ಕೊಲೆ ಮಾಡಿದ್ದಾನೆ. ನವೀನ್ ಎರಡನೇ ಮದುವೆ ಆಗಿದ್ದನಂತೆ. ಹೀಗಾಗಿ ಮೊದಲನೇ ಪತ್ನಿಯನ್ನು ನಿರಾಕರಣೆ ಮಾಡಿದನಂತೆ. ಈ ಬಗ್ಗೆ ಪೊಲೀಸರು ತನೀಖೆ ನಡೆಸಿದಾಗ ಹಂತಕ ಅಳಿಯನ ಕರಾಳ ಮುಖ ಅನಾವರಣವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಫೇಸ್ಬುಕ್ ಮೂಲಕ ಸ್ನೇಹಿತರಾಗಿದ್ದ ಅನ್ನಪೂರ್ಣ ಹಾಗೂ ನವೀನ್
ರಾಜಿ ಪಂಚಾಯತಿಗೆ ಬರಲು ಹೇಳಿ ಮೂವರನ್ನು ಹತ್ಯೆಗೈದ ಅಳಿಯ
ಸೈದಾಪುರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ
ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನಿವಾಸಿ ನವೀನ್, ತನ್ನ ಹೆಂಡತಿ, ಅತ್ತೆ ಮತ್ತು ಮಾವನನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರೀತಿಸಿ ಮದುವೆಯಾದ ನವೀನ್ ನ್ಯಾಯಪಂಚಾಯತಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಅನ್ನಪೂರ್ಣ, ಮಾವ ಬಸವರಾಜ ಹಾಗೂ ಅತ್ತೆ ಕವೀತಾ ಮೃತ ದುರ್ದೈವಿಗಳು.
ಇದನ್ನೂ ಓದಿ: ಎಲ್ಲೆಲ್ಲೂ Boycott phone pay ಅಭಿಯಾನ; ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪೋನ್ ಪೇ CEO ಹೇಳಿದ್ದೇನು?
ದಾವಣಗೆರೆ ಜಿಲ್ಲೆಯ ನಿಟ್ಟೊಳ್ಳಿ ಗ್ರಾಮದ ಅನ್ನಪೂರ್ಣ ಹಾಗೂ ನವೀನ್ ಪರಸ್ಪರ ಫೇಸ್ ಬುಕ್ ಮೂಲಕ ಸ್ನೇಹಿತರಾಗಿ ಬಳಿಕ ಪ್ರೀತಿ ಮಾಡುತ್ತಿದ್ದರು. ಪ್ರೀತಿಸಿ ಮೂರು ವರ್ಷದ ನಂತರ ಮದುವೆಯಾಗಿದ್ದರು. ನವೀನ್ ಸೈದಾಪುರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ದಂಪತಿಗಳಿಗೆ ಎರಡು ವರ್ಷದ ಗಂಡು ಮಗುವಿದೆ. ಮದುವೆಯಾದ ಒಂದೂವರೇ ವರ್ಷದ ನಂತ್ರ ದಂಪತಿಗಳಲ್ಲಿ ಕಲಹ ಶುರುವಾಗಿದೆ. ಹೆರಿಗೆ ನಂತರ ಅನ್ನಪೂರ್ಣ ಗಂಡನ ಮನೆಗೆ ಹೋಗಿದ್ದಳು. ಮೂರು ತಿಂಗಳ ನಂತರ ನವೀನ್ ಕುಮಾರ್ ಹಾಗೂ ಅವರ ಮನೆಯವರು ಅನ್ನಪೂರ್ಣಗೆ ವರದಕ್ಷಿಣೆ ಕಿರುಕುಳ ನೀಡಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ಅನ್ನಪೂರ್ಣ ತವರು ಮನೆಗೆ ಬಂದಿದ್ದಳು. ನಂತರ ಅನ್ನಪೂರ್ಣಗೆ ಕರೆದುಕೊಂಡು ಹೋಗು ಅಂದ್ರು ನವೀನ್ ಕರೆದುಕೊಂಡು ಹೋಗಿರಲಿಲ್ಲ. ಅನ್ನಪೂರ್ಣಾಳ ಪೋಷಕರು ಒಂದು ವರ್ಷದಲ್ಲಿ 4 ಸಲ ಬಿಡಲು ಯತ್ನಿಸಿದರು. ನವೀನ್ ಹಾಗೂ ಅವರ ಪೋಷಕರು ಅನ್ನಪೂರ್ಣಳನ್ನು ಮನೆಯೊಳಗಡೆ ಕರೆದುಕೊಂಡಿಲ್ಲವಂತೆ. ನಂತ್ರ ನವೀನ್ ಹೆಂಡತಿಗೆ ರಾಜಿ ಪಂಚಾಯತೆಗೆ ಬರಲು ಹೇಳಿದ್ದನಂತೆ. ಅಳಿಯ ಕರೆಯುತ್ತಿದ್ದಾನೆಂದು ಮಗಳ ಜೊತೆ ಹೆತ್ತವರು ದಾವಣಗೇರಿಯಿಂದ 15 ರಂದು ಯಾದಗಿರಿ ಜಿಲ್ಲೆಯ ಸೈದಾಪುರಗೆ ಬಂದಿದ್ದರು.
ಸೈದಾಪುರ ಠಾಣೆಯಲ್ಲಿ ನ್ಯಾಯ ಪಂಚಾಯತ ನಡೆದಿದೆ. ನವೀನ್ ಅನ್ನಪೂರ್ಣಾಳಿಗೆ ಡೈವೊರ್ಸ್ ಕೊಡಲು ಬಯಸಿದ್ದ, ಆದ್ರೆ ಅನ್ನಪೂರ್ಣ ಪತಿ ಜೊತೆ ಇರಲು ಬಯಸಿದ್ದಳು. ಇದಕ್ಕೆ ನವೀನ್ ಪತ್ನಿ ಅತ್ತೆ ಹಾಗೂ ಮಾವ ನಡುವೆ ಜಗಳವಾಗಿದೆ. ನವೀನ್ ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು ನಿರ್ಧರಿಸಿದನಂತೆ. ಸೈದಾಪುರ ಪೊಲೀಸರು ಕೂಡ ದಂಪತಿಗಳಿಗೆ ಸಣ್ಣ ವಯಸ್ಸಿದೆ ಚನ್ನಾಗಿ ಜೀವನ ನಡೆಸಿ ಎಂದು ಬುದ್ದಿ ಮಾತು ಹೇಳಿದರಂತೆ. ಗಂಡನ ಜೊತೆ ಇರುತ್ತೇನೆ ಡೈವೋರ್ಸ್ ಕೊಡುವದಿಲ್ಲವೆಂದು ಅನ್ನಪೂರ್ಣ ಸೈದಾಪುರ ಠಾಣೆಯಲ್ಲಿ ಬರೆದುಕೊಟ್ಟಿದ್ದಳಂತೆ. ನವೀನ್ ಸೈದಾಪುರನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಹೆಂಡತಿ ಹಾಗೂ ಅತ್ತೆ, ಮಾವರನ್ನು ಬಾಡಿಗೆ ಮನೆಗೆ ಕರೆದುಕೊಂಡು ಹೋಗದೆ ಸೈದಾಪುರ ಪಟ್ಟಣದ ಲಾಡ್ಜ್ನಲ್ಲಿ ಇರಿಸಿದ್ದನಂತೆ.
ಇದನ್ನೂ ಓದಿ: ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!
ನ್ಯಾಯ ಪಂಚಾಯತಿಯಲ್ಲಿ ದಾವಣಗೆರೆಯಲ್ಲಿ ಹೆಂಡತಿ ಜೊತೆ ಇರುತ್ತೇನೆಂದು ಹೇಳಿದ್ದ. ಆದ್ರೆ ಡೈವೊರ್ಸ್ ನಿರಾಕರಣೆ ಮಾಡಿದ್ದು ಕೋಪ ನವೀನ್ನಲ್ಲಿತ್ತು. ಜೂಲೈ 16ರಂದು ದಾವಣಗೆರೆ ಕಾರ್ ತೆಗೆದುಕೊಂಡು ಹೊಗೋಣ ಎಂದು ಹೇಳಿದನು. ನವೀನ್ ದೊಡ್ಡಮ್ಮಳ ಊರಾದ ವಡಗೇರಾ ತಾಲೂಕಿನ ಮನಗನಾಳ ಗ್ರಾಮಕ್ಕೆ ಹೋಗಿದ್ದನು. ಮನಗನಾಳ ಗ್ರಾಮದ ದೊಡ್ಡಮ್ಮಳ ಮಗನ ಹತ್ತಿರ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡು ದಾವಣಗೆರೆಗೆ ಹೊಗೋಣ ಅಂದಿದ್ದನಂತೆ. ನವೀನ್ ದೊಡ್ಡಮ್ಮಳ ಊರಲ್ಲಿ ಇದ್ದಾಗ ಅನ್ನಪೂರ್ಣ ತಮ್ಮ ಚಿಕ್ಕಮ್ಮಳಿಗೆ ಫೊನ್ ಮೂಲಕ ತಿಳಿಸಿದ್ದಾಳೆ. ಮನಗನಾಳನಲ್ಲಿದ್ದೇವೆ ಬರುತ್ತೇವೆಂದು ಹೇಳಿದ್ದಾಳಂತೆ. ಆದ್ರೆ ದೊಡ್ಡಮ್ಮಳ ಊರಲ್ಲಿಯೇ ಇದ್ದಾಗ ನವೀನ್ ಮಾವ ಬಸವರಾಜ ಸಾಲ ಮಾಡಿ ಜೀವನ ಮಾಡಿದ್ರೆ ಹೇಗೆ ಎಂದು ಅಳಿಯನಿಗೆ ಬುದ್ದಿ ಮಾತು ಹೇಳಿದ್ದಾನೆ. ಇದರಿಂದ ಕೋಪಕೊಂಡು ಜೂಲೈ 16ರಂದು ಮಂಗಳವಾರ ಹಾಡಹಗಲೇ ಎಲ್ಲರ ಎದುರೆ ರಾಡ್ ಹಾಗೂ ಚಾಕು ಇರಿದು ಕೊಲೆ ಮಾಡಿದ್ದಾನೆ. ಹೆಂಡತಿ ಡೈವೋರ್ಸ್ ನಿರಾಕರಣೆ ಕೋಪದಿಂದ ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆ ಮಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಹೊಗೋಣ ಎಂದು ಕಾರ್ನಲ್ಲಿ ಮಾವನ ಶವ ಹಾಕಿಕೊಂಡು ಆಸ್ಪತ್ರೆಗೆ ತೆರಳದೇ ಬೆಂಡಬೆಂಬಳಿ ಕಡೆ ತೆರಳಿ ರಸ್ತೆ ಪಕ್ಕದಲ್ಲಿ ಮಾವ ಬಸವರಾಜನ ಶವ ಬಿಸಾಕಿದ್ದಾನೆ. ನಂತ್ರ ಹೆಣ್ಣು ಕೊಟ್ಟ ಅತ್ತೆ ಕವೀತಾ ಅಲಿಯಾಸ್ ಚಂದ್ರಮ್ಮ ಹಾಗೂ ಹೆಂಡತಿ ಅನ್ನಪೂರ್ಣಳಿಗೆ ಬೆದರಿಕೆ ಹಾಕಿ ಜೋಳದಡಗಿ ಹತ್ತಿರ ಕರೆದುಕೊಂಡು ಹೋಗಿ ರಾಡ್ ಹಾಗೂ ಚಾಕುವಿನಿಂದ ಅತ್ತೆ ಹಾಗೂ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿ, ಜೋಳದಡಗಿ ಹೊರ ಭಾಗದ ರಸ್ತೆ ಪಕ್ಕದಲ್ಲಿ ಬಿಸಾಕಿದ್ದಾನೆ. ಆದ್ರೆ ನವೀನ್ ಎರಡು ವರ್ಷದ ಮಗುವಾದ ನೆಹಾಂತನನ್ನು ಯಾಕೋ ಕೊಲೆ ಮಾಡಿಲ್ಲ. ಎರಡು ವರ್ಷದ ಮಗುವಿನ ಎದುರೆ ತ್ರಿವಳಿ ಕೊಲೆ ಮಾಡಿದ್ದಾನೆ ಪಾಪಿ ಅಳಿಯ ನವೀನ್.
ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬದ ಸಂಭ್ರಮ ವಿತ್ತು. ಮೊಹರಂ ಹಬ್ಬದ ವೇಳೆಯೇ ಹಂತಕ ನವೀನ್, ಹೆಣ್ಣು ಕೊಟ್ಟ ಅತ್ತೆ, ಮಾವ ಹಾಗೂ ತನ್ನ ಒಡತಿಯ ಕೊಲೆ ಮಾಡಿದ್ದಾನೆ. ಈ ವೇಳೆ ದಾವಣಗೆರೆಗೆ ಬರುತ್ತೆನೆಂದು ಹೇಳಿದವರ ಫೋನ್ ಸ್ವಿಚ್ ಆಫ್ ಆಗಿದಕ್ಕೆ ಅನ್ನಪೂರ್ಣ ತವರು ಮನೆಯವರು ಆತಂಕಗೊಂಡಿದ್ರು. ಈ ಬಗ್ಗೆ ನವೀನ್ಗೆ ಫೊನ್ ಮಾಡಿ ಕೇಳಿದ್ರೆ ಅವರಿಗೆ ಬಸ್ ಮೂಲಕ ದಾವಣಗೆರೆಗೆ ಕಳುಹಿಸಿದ್ದೆನೆಂದು ಸುಳ್ಳು ಹೇಳಿದ್ದಾನೆ. ಕೊಲೆ ಮಾಡಿ ಜೂಲೈ 16ರಂದು ರಾತ್ರಿ ನವೀನ್ ಊರಲ್ಲಿ ಏನು ಆಗಿಲ್ಲ ಎಂಬಂತೆ ಆರಾಮಾಗಿ ಇದ್ದನಂತೆ. ಅನ್ನಪೂರ್ಣ ತವರು ಮನೆಯವರು ಈ ಬಗ್ಗೆ ಸೈದಾಪುರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ನವೀನ್ನನ್ನ ವಿಚಾರಣೆ ನಡೆಸಿದಾಗ ಅಳಿಯನ ನಿಜಬಣ್ಣ ಬೆಳಕಿಗೆ ಬಂದಿದೆ. ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಕರಾಳ ಮುಖ ಬೆಳಕಿಗೆ ಬಂದಿದೆ. ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು, ಡೈವೋರ್ಸ್ ನೀಡದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನಂತೆ. ವಡಗೇರಾ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಮಾವ ಬಸವರಾಜ ಶವ ಬೆಂಡಬೆಂಬಳಿ ರಸ್ತೆ ಪಕ್ಕದಲ್ಲಿ ಎಸೆದಿದ್ದಾನೆ.
ಅದೇ ರೀತಿ ಜೋಳದಡಗಿ ಹೊರ ಭಾಗದ ರಸ್ತೆ ಪಕ್ಕದಲ್ಲಿ ಅತ್ತೆ ಚಂದ್ರಮ್ಮ ಹಾಗೂ ಪತ್ನಿ ಕೊಲೆ ಮಾಡಿ ಶವ ಬಿಸಾಕಿದ್ದು ತೊರಿಸಿದ್ದಾನೆ. ವಡಗೇರಾ ಹಾಗೂ ಸೈದಾಪುರ ಠಾಣೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಕೇವಲ ನವೀನ್ ಒಬ್ಬನೇ ಕೊಲೆ ಮಾಡಿ ಶವ ಸಾಗಾಟ ಮಾಡಿಲ್ಲ ಇದರಲ್ಲಿ ಹಲವರು ಇರಬಹುದೆಂದು ಅನುಮಾನ ವ್ಯಕ್ತವಾಗಿದೆ. ಕೊಲೆ ಮಾಡಿ ಶವ ಸಾಗಾಟ ಮಾಡಲು ಕ್ರೂಷರ್ ವಾಹನ ಬಳಕೆ ಮಾಡಿದ್ರಾ? ಕಾರಿನಲ್ಲಿ ಮೂರು ಶವ ಸಾಗಿಸಲು ಆಗುವುದಿಲ್ಲ. ಹೀಗಾಗಿ, ಈ ಕೃತ್ಯದಲ್ಲಿ ನವೀನ್ ಕುಟುಂಬಸ್ಥರು ಸಹಕರಿಸಿದ್ದಾರೆ. ನವೀನ್ ಅವರ ತಂದೆ ದೇವಿಂದ್ರಪ್ಪ , ತಾಯಿ ಅಂಜಮ್ಮ ಹಾಗೂ ನವೀನ್ ಸಹೋದರ ರಾಹುಲ್ ಹಾಗೂ ವಿಜ್ಜೆಮ್ಮ ವಿರುದ್ಧ ಕೊಲೆ ಮಾಡಿದ್ದ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಅನ್ನಪೂರ್ಣಾಳ ಚಿಕ್ಕಮ್ಮ ದೂರು ನೀಡಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಹಂತಕ ನವೀನ್ ಹಾಗೂ ತಂದೆ ದೇವಿಂದ್ರಪ್ಪ, ತಾಯಿ ಅಂಜಮ್ಮ ಈ ಮೂವರನ್ನು ಬಂಧಿಸಿದ್ದಾರೆ.
ಇನ್ನುಳಿದ ಆರೋಪಿಗಳಿಗೆ ವಿಚಾರಣೆ ನಡೆಸುತ್ತಿದ್ದಾರೆ. ಮೊಮ್ಮಗನ ಜೊತೆ ನಕ್ಕು, ನಲಿದು ಖುಷಿಯಿಂದ ಇರುತ್ತಿದ್ದ ಅಜ್ಜ, ಅಜ್ಜಿ ಕೊಲೆಯಾಗಿದ್ದಾರೆ. ಹೆತ್ತವ್ವಳ ಮಡಿಲಲ್ಲಿ ಇರಬೇಕಾದ ಗಂಡು ಮಗು ಈಗ ಅನಾಥವಾಗಿದೆ. ಮಗು ಈಗ ಅನ್ನಪೂರ್ಣ ಅವರ ಕುಟುಂಬಸ್ಥರ ಹತ್ತಿರವಿದೆ. ಯಾದಗಿರಿ ಎಸ್ಪಿ ಜಿ.ಸಂಗೀತಾ ಮಾರ್ಗದರ್ಶನದಲ್ಲಿ ವಡಗೇರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಸ್ಬುಕ್ನಿಂದ ಪ್ರೀತಿ ಮಾಡಿದ್ದ ಪ್ರೇಮಿ ಈಗ ಮೂವರನ್ನು ಕೊಲೆ ಮಾಡಿದ್ದಾನೆ. ನವೀನ್ ಎರಡನೇ ಮದುವೆ ಆಗಿದ್ದನಂತೆ. ಹೀಗಾಗಿ ಮೊದಲನೇ ಪತ್ನಿಯನ್ನು ನಿರಾಕರಣೆ ಮಾಡಿದನಂತೆ. ಈ ಬಗ್ಗೆ ಪೊಲೀಸರು ತನೀಖೆ ನಡೆಸಿದಾಗ ಹಂತಕ ಅಳಿಯನ ಕರಾಳ ಮುಖ ಅನಾವರಣವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ