ಆಟೋ ಚಾಲಕನಿಗೆ ಅಮ್ಮನ ಆಸ್ತಿ ಮೇಲೆ ಕಣ್ಣು
ಸದಾ ಕುಡಿದು ಆಸ್ತಿಯಾಗಿ ಪೀಡಿಸುತ್ತಿದ್ದ ಮಗ
ಹೆತ್ತಬ್ಬೆಯನ್ನು ಕೊಡಲಿಯಿಂದ ಕಡಿದು ನಾನಲ್ಲ ಎಂದು ಕಥೆ ಕಟ್ಟಿದ
ಶಿವಮೊಗ್ಗ: ಮಗನೊಬ್ಬ ಆಸ್ತಿಗಾಗಿ ತನ್ನ ತಾಯಿಯನ್ನೇ ಹತ್ಯೆಗೈದ ಘಟನೆ ತಾಲೂಕಿನ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ. ಸುಲೋಚನಮ್ಮ (57)ರನ್ನು ಮಗ ಸಂತೋಷ ಕೊಡಲಿಯಿಂದ ಕಡಿದುಕೊಂಡಿದ್ದಾನೆ.
ಕೊಲೆಗಡುಕ ಸಂತೋಷನು ಸುಲೋಚನಮ್ಮ ಎರಡನೇ ಮಗನಾಗಿದ್ದನು. ಈತ ಅಮ್ಮನ ಹೆಸರಿನಲ್ಲಿದ್ದ ಆಸ್ತಿಯನ್ನ ತನ್ನ ಹೆಸರಿಗೆ ಬರೆದು ಕೊಡುವಂತೆ ಸದಾ ಪೀಡಿಸುತ್ತಿದ್ದ ಎನ್ನಲಾಗಿದೆ.
ಆಗಸ್ಟ್ 27ರ ರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡಿದ್ದಾನೆ. ಆಸ್ತಿ ಕೊಡಲು ನಿರಾಕರಿಸಿದ ತಾಯಿಯನ್ನ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಹೊರಗಡೆ ಮಲಗಿದ್ದ ಸಂತೋಷ್ ಕೊಲೆ ಮಾಡಿಲ್ಲ ಎಂದಿದ್ದಾನೆ. ಪಕ್ಕದ ಮನೆಯವರು ಸುಲೋಚನಮ್ಮನಿಗೆ ಆ.28ರ ಮಧ್ಯಾಹ್ನ ಊಟಕೊಡಲು ಹೋದಾಗ ಆಕೆಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದ ಸಂತೋಷ ಸದಾ ಕುಡಿದು ಹಣ ಹಾಳು ಮಾಡುತ್ತಿದ್ದ. ಮಗನಿಂದ ನೊಂದ ತಾಯಿ ಸುಲೋಚನಮ್ಮ ಪ್ರತ್ಯೇಕವಾಗಿ ವಾಸವಾಗಿದ್ದಳು. ಆದರೆ ಕುಡಿತದ ದಾಸನಾಗಿ ಆಸ್ತಿಯ ಗುಂಗಿನಲ್ಲಿದ್ದ ಸಂತೋಷ ತಾಯಿಯನ್ನು ಕಡಿದು ಕೊಂದಿದ್ದಾನೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಟೋ ಚಾಲಕನಿಗೆ ಅಮ್ಮನ ಆಸ್ತಿ ಮೇಲೆ ಕಣ್ಣು
ಸದಾ ಕುಡಿದು ಆಸ್ತಿಯಾಗಿ ಪೀಡಿಸುತ್ತಿದ್ದ ಮಗ
ಹೆತ್ತಬ್ಬೆಯನ್ನು ಕೊಡಲಿಯಿಂದ ಕಡಿದು ನಾನಲ್ಲ ಎಂದು ಕಥೆ ಕಟ್ಟಿದ
ಶಿವಮೊಗ್ಗ: ಮಗನೊಬ್ಬ ಆಸ್ತಿಗಾಗಿ ತನ್ನ ತಾಯಿಯನ್ನೇ ಹತ್ಯೆಗೈದ ಘಟನೆ ತಾಲೂಕಿನ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ. ಸುಲೋಚನಮ್ಮ (57)ರನ್ನು ಮಗ ಸಂತೋಷ ಕೊಡಲಿಯಿಂದ ಕಡಿದುಕೊಂಡಿದ್ದಾನೆ.
ಕೊಲೆಗಡುಕ ಸಂತೋಷನು ಸುಲೋಚನಮ್ಮ ಎರಡನೇ ಮಗನಾಗಿದ್ದನು. ಈತ ಅಮ್ಮನ ಹೆಸರಿನಲ್ಲಿದ್ದ ಆಸ್ತಿಯನ್ನ ತನ್ನ ಹೆಸರಿಗೆ ಬರೆದು ಕೊಡುವಂತೆ ಸದಾ ಪೀಡಿಸುತ್ತಿದ್ದ ಎನ್ನಲಾಗಿದೆ.
ಆಗಸ್ಟ್ 27ರ ರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡಿದ್ದಾನೆ. ಆಸ್ತಿ ಕೊಡಲು ನಿರಾಕರಿಸಿದ ತಾಯಿಯನ್ನ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಹೊರಗಡೆ ಮಲಗಿದ್ದ ಸಂತೋಷ್ ಕೊಲೆ ಮಾಡಿಲ್ಲ ಎಂದಿದ್ದಾನೆ. ಪಕ್ಕದ ಮನೆಯವರು ಸುಲೋಚನಮ್ಮನಿಗೆ ಆ.28ರ ಮಧ್ಯಾಹ್ನ ಊಟಕೊಡಲು ಹೋದಾಗ ಆಕೆಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದ ಸಂತೋಷ ಸದಾ ಕುಡಿದು ಹಣ ಹಾಳು ಮಾಡುತ್ತಿದ್ದ. ಮಗನಿಂದ ನೊಂದ ತಾಯಿ ಸುಲೋಚನಮ್ಮ ಪ್ರತ್ಯೇಕವಾಗಿ ವಾಸವಾಗಿದ್ದಳು. ಆದರೆ ಕುಡಿತದ ದಾಸನಾಗಿ ಆಸ್ತಿಯ ಗುಂಗಿನಲ್ಲಿದ್ದ ಸಂತೋಷ ತಾಯಿಯನ್ನು ಕಡಿದು ಕೊಂದಿದ್ದಾನೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ