/newsfirstlive-kannada/media/post_attachments/wp-content/uploads/2024/08/darshan.webp)
ಸ್ಯಾಂಡಲ್​ವುಡ್​ ನಟ, ನಿರ್ದೇಶಕ ತರುಣ್​ ಮತ್ತು ನಟಿ ಸೋನಲ್​ ಮೊಂತೆರೊ ಮದುವೆ ಇದೇ ತಿಂಗಳು 10-11ರಂದು ನಡೆಯಲಿದೆ. ಮದುವೆಗೆ ಕೆಲ ದಿನಗಳು ಬಾಕಿ ಇದ್ದು, ಸದ್ಯ ಸ್ಟಾರ್​ ಜೋಡಿ ಮದುವೆ ತರಾತುರಿಯಲ್ಲಿದ್ದಾರೆ. ಅತ್ತ ತರುಣ್​ ಆಪ್ತ ಸ್ನೇಹಿತ ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ತರುಣ್ ಜೈಲಿಗೆ ತೆರಳಿ ದರ್ಶನ್​ ಭೇಟಿ ಮಾಡಿ, ಮದುವೆ ವಿಚಾರ ಪ್ರಸ್ತಾಪಿಸಿ ವಿಚಾರ ತಿಳಿಸಿದ್ದಾರೆ. ಆದರೆ ನಟಿ ಸೋನಲ್​ ಇದುವರೆಗೆ ದರ್ಶನ್​ ಭೇಟಿಗೆ ಜೈಲಿಗೆ ಹೋಗಿಲ್ಲ. ಇದರ ನಡುವಲ್ಲಿ ರಾಖಿ ಕಟ್ಟಿಸಿದ ಅಣ್ಣನ ಭೇಟಿಗೆ ಸೋನಲ್​ ಯಾಕೆ ಹೋಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಆದರೀಗ ಅಭಿಮಾನಿಗಳ ಅನುಮಾನದ ಪ್ರಶ್ನೆಗೆ ನಟಿ ಸೋನಲ್​​ ಉತ್ತರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/Sonal-montero-1.jpg)
ನಾನು ದರ್ಶನ್ ಅವರನ್ನು ಅಲ್ಲಿ ನೋಡೋಕೆ ಇಷ್ಟ ಪಡಲ್ಲ. ತರುಣ್ ಹೋಗಿ ನೋಡ್ಕೊಂಡ್ ಬಂದ್ರು. ನಾನು ಅವರನ್ನು ನೋಡಿರೋ ರೀತಿನೇ ಬೇರೆ. ಅಂಥಾ ಪರಿಸ್ಥಿತಿಯಲ್ಲಿ ನಾನು ಅವರನ್ನು ನೋಡೋಕೆ ಆಗಲ್ಲ ಎಂದು ನಟಿ ಸೋನಲ್​​ ಸ್ಪಷ್ಟಣೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/sonal-monteiro-3.jpg)
ತರುಣ್​​ ವಿವಾಹದ ಮೊದಲ ಆಮಂತ್ರಣ ಪತ್ರವನ್ನು ದರ್ಶನ್​ ಪತ್ನಿ ವಿಜಯಲಕ್ಷ್ಮೀಯವರಿಗೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ಅವರು ತುಂಬಾ ನೋವಲ್ಲಿ ಇದ್ರು. ಹೆಚ್ಚು ಮಾತಾಡೋಕೆ ಆಗ್ಲಿಲ್ಲ ಎಂದು ತರುಣ್​ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/Tharun-and-sonal.jpg)
ಆಗಸ್ಟ್ 10-11 ರಂದು ಬೆಂಗಳೂರಿನ ಬಸವೇಶ್ವರ ನಗರದ ಶಂಕರ್​ ಮಠದ ಬಳಿಯ​ ಹಾಲ್​ನಲ್ಲಿ ತರುಣ್​ ಮತ್ತು ಸೋನಲ್​ ವಿವಾಹವಾಗುತ್ತಿದ್ದಾರೆ. ಇನ್ನು ಈ ಜೋಡಿ ವಿಶೇಷವಾದ ಆಮಂತ್ರಣ ಪತ್ರಿಕೆಯನ್ನು​ ಮುದ್ರಿಸಿದ್ದಾರೆ. ಪರಿಸರ ಸ್ನೇಹಿ ಲಗ್ನ ಪತ್ರಿಕೆಯನ್ನು ಮುದ್ರಿಸಿ ವಿತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us