Advertisment

ಪ್ರಾಮಾಣಿಕ ಕಳ್ಳರಿದ್ದಾರೆ ಎಚ್ಚರಿಕೆ! ಕಾರು ಕದ್ದು I am Sorry ಎಂದಿದ್ದೇಕೆ ಕಿಲಾಡಿ?

author-image
Gopal Kulkarni
Updated On
ಪ್ರಾಮಾಣಿಕ ಕಳ್ಳರಿದ್ದಾರೆ ಎಚ್ಚರಿಕೆ! ಕಾರು ಕದ್ದು I am Sorry ಎಂದಿದ್ದೇಕೆ ಕಿಲಾಡಿ?
Advertisment
  • ಕಳ್ಳರಿಗೂ ಕೂಡ ಆತ್ಮಸಾಕ್ಷಿ ಎಂಬುದು ಇದೆ ಎಂದು ಸಾಬೀತು
  • ಕದ್ದ ಕಾರನ್ನು ಮಾಲೀಕನಿಗೆ ಸಿಗುವಂತೆ ಮಾಡಿದ ಕಿಲಾಡಿ ಕಳ್ಳ
  • ದೆಹಲಿಯಲ್ಲಿ ಕದ್ದ ಕಾರನ್ನು ರಾಜಸ್ತಾನದಲ್ಲಿ ಬಿಟ್ಟು ಓಡಿದ್ದೇಕೆ ?

ಕಳ್ಳರ ಕೈಗೆ ಒಂದು ಬಾರಿ ಅನ್ಯರ ವಸ್ತು ಹೋದ್ರೆ ಮುಗಿತು ಅದಕ್ಕೆ ಎಳ್ಳು ನೀರು ಬಿಟ್ಟ ಹಾಗೆಯೇ. ವಾಪಸ್ ಮಾಲೀಕರ ಕೈಗೆ ಸಿಗೋದು ಹೆಚ್ಚು ಕಡಿಮೆ ಕನಸಿನ ಮಾತು ಆದ್ರೆ ರಾಜಸ್ತಾನದ, ಬಿಕನೇರ್​ನಲ್ಲೊಬ್ಬ ಪ್ರಾಮಾಣಿಕ ಕಳ್ಳನೊಬ್ಬ ಸಿಕ್ಕಿದ್ದಾನೆ. ಕದ್ದ ಕಾರನ್ನು 450 ಕಿಲೋ ಮೀಟರ್​ವರೆಗೂ ತೆಗೆದುಕೊಂಡು ಹೋಗಿ, ವಾಪಸ್ ಅದು ಮಾಲೀಕರಿಗೆ ಸಿಗುವಂತೆ ಒಂದು ಪೇಪರ್​ನಲ್ಲಿ ಒಂದಿಷ್ಟು ನೋಟ್ಸ್ ಬರೆದು ಕಾರಿಗೆ ಅಂಟಿಸಿದ್ದಾನೆ. ಇದು ಕಳ್ಳರಿಗೂ ಅಪರೂಪಕ್ಕೆ ಆತ್ಮಸಾಕ್ಷಿ ಮಿಡಿಯುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.

Advertisment

ಇದನ್ನೂ ಓದಿ:ದೀಪಾವಳಿಗೆ ಭರ್ಜರಿ ಗಿಫ್ಟ್​; ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಾ ಸ್ಪೆಷಲ್​ ಬೋನಸ್​​?

ದೆಹಲಿಯಿಂದ ಕಾರನ್ನು ಕದ್ದುಕೊಂಡು ಬಂದ ಕಳ್ಳ ರಾಜಸ್ತಾನದ ಬಿಕನೇರ್​ನಲ್ಲಿ ನಿಲ್ಲಿಸಿ ಅದರ ನಂಬರ್ ಪ್ಲೇಟ್​ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಕಾರು ಕದ್ದ ಕಳ್ಳನಿಗೆ ನಡುರಸ್ತೆಯಲ್ಲಿ ಪಾಪಪ್ರಜ್ಞೆ ಕಾಡಿದೆಯೋ ಏನೊ ಬಿಕನೇರ್​ನ ನಪಸಾರ್​ ಪಟ್ಟಣದ ಹೆದ್ದಾರಿ ಬಳಿ ಕಾರು ನಿಲ್ಲಿಸಿ ಅದರ ಮೇಲೆ ಮೂರು ಕರಪತ್ರ ಅಂಟಿಸಿ ಹೋಗಿದ್ದಾನೆ. ಮೊದಲ ಕರಪತ್ರದಲ್ಲಿ ಈ ಕಾರನ್ನು ದೆಹಲಿಯ ಪಾಲಮ್​ನಿಂದ ಕದಿಯಲಾಗಿದೆ. ದಯವಿಟ್ಟು ಇದನ್ನು ಪೊಲೀಸರ ಗಮನಕ್ಕೆ ತನ್ನಿ, Sorry ಎಂದು ಬರೆಯಲಾಗಿದ್ದು, ಕಾರಿನ ನಂಬರ್​ನ್ನು ಕೂಡ ಅದರ ಮೇಲೆ ಉಲ್ಲೇಖಿಸಿದ್ದಾನೆ. ಇದು ಪೊಲೀಸರಿಗೆ ಕಾರಿನ ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.

ಇದನ್ನೂ ಓದಿ: ಭಾರತದ ತಲೆಗೆ ನಿಜ್ಜಾರ್​ ಕೇಸ್​ ಕಟ್ಟಲು ಕೆನಡಾ ಹೊಂಚು; ಕೆನಡಾದ 6 ಅಧಿಕಾರಿಗಳಿಗೆ ಗೆಟ್​ಔಟ್ ಎಂದ ಮೋದಿ ಸರ್ಕಾರ

Advertisment

ಮತ್ತೊಂದು ಕರಪತ್ರದಲ್ಲಿ ಐ ಲವ್ ಮೈ ಇಂಡಿಯಾ ಎಂದು ಬರೆದಿರುವ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗೆ ಕರಪತ್ರಗಳನ್ನು ಅಂಟಿಸಿಕೊಂಡು ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.ಪೊಲೀಸರು ಕರಪತ್ರದಲ್ಲಿ ಅಂಟಿಸಲಾಗಿದ್ದ ನಂಬರ್​ನ್ನು ಟ್ರೇಸ್ ಮಾಡಿ ಕಾರಿನ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು. ಕಾರ್​ ಮಾಲೀಕರು ಅಕ್ಟೋಬರ್ 10ರಂದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment