ಸೈಬರ್ ಕ್ರೈಂ ಕುರಿತು ಅರಿವು ನ್ಯೂಸ್ಫಸ್ಟ್ನಿಂದ ವಿಶೇಷ ಪ್ರಯತ್ನ
ಸಚಿವ ಪ್ರಿಯಾಂಕ್ ಖರ್ಗೆಯಿಂದ ಕಾರ್ಯಕ್ರಮ ಉದ್ಘಾಟನೆ
ಐಐಎಸ್ಸಿ ಆವರಣದ ಆಡಿಟೋರಿಯಂನಲ್ಲಿ ಕಾರ್ಯಕ್ರಮ
ಬೆಂಗಳೂರು: ಇಂದಿನಿಂದ ಎರಡು ದಿನಗಳ ಸೈಬರ್ ಕ್ರೈಮ್ಸ್ ಕಾನ್ಕ್ಲೇವ್ ಇಂಡಿಯನ್ ಇನ್ಸ್ಟಿಟ್ಯೂಟ್ನ ಜೆ.ಎನ್.ಟಾಟಾ ಆಡಿಟೊರಿಯಂನಲ್ಲಿ ನಡೆಯಲಿದೆ. ನ್ಯೂಸ್ಫಸ್ಟ್ ಆಯೋಜಿಸಿರುವ ಈ ಅಂತರಾಷ್ಟ್ರಿಯ ಸಮಾವೇಶದಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಇದು ಅತಿ ದೊಡ್ಡ ಚರ್ಚೆಯಾಗಿರಲಿದೆ.
ಸೈಬರ್ ಕ್ರೈಂ ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವ ಮಹಾಮಾರಿ. ದೇಶ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವಷ್ಟು ದೊಡ್ಡದಾಗಿ ಈ ಪಿಡುಗು ವ್ಯಾಪಿಸುತ್ತಿದೆ. ಸೈಬರ್ ವಂಚಕರನ್ನು ತಡೆಯುವಂತಹ ಪಯತ್ನಗಳನ್ನೂ ಸಹ ವಿಶ್ವದ ಹಲವು ರಾಷ್ಟ್ರಗಳು ಹಾಗೂ ನೂರಾರು ಸಂಸ್ಥೆಗಳು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿವೆ. ಜಾಗೃತಿ ಮೂಡಿಸುವ ಕೆಲಸಗಳೂ ನಡೆಯುತ್ತಿವೆ.
ಕಾರ್ಯಕ್ರಮದಡಿಯಲ್ಲಿ ನೂರಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಮಾಡಿದೆ. ಇದಕ್ಕಾಗಿ ಎಕ್ಸ್ಚೇಂಚ್ ಫಾರ್ ಮೀಡಿಯಾ ನೀಡುವ ಗೋಲ್ಡನ್ ಅವಾರ್ಡ್ ಕೂಡ ಪಡೆದುಕೊಂಡಿದೆ. ಇದೀಗ ಎರಡು ದಿನಗಳ ಅಂತರಾಷ್ಟ್ರೀಯ ಸೈಬರ್ ಕ್ರೈಮ್ಸ್ ಕಾನ್ಕ್ಲೇವ್ ಆಯೋಜಿಸಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿರುವ ಜೆ.ಎನ್.ಟಾಟಾ ಆಡಿಯೋರಿಯಂನಲ್ಲಿ ಈ ಸಮಾವೇಶ ನಡೆಯಲಿದೆ. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ವಿವಿಧ ವಿಷಯಗಳ ಬಗ್ಗೆ ದೇಶ ವಿದೇಶದ ತಜ್ಞರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
ಚರ್ಚೆಗೊಳಪಡಲಿರುವ ವಿಷಯಗಳು ಇಲ್ಲಿವೆ..
ಆರ್ಟಿಫಿಶಿಯಲ್ ಇಂಟಲಿಜೆನ್ಸ್
ಡೀಪ್ ಫೇಕ್
ಱನ್ಸಮ್ವೇರ್
ಬ್ಲಾಕ್ ಚೈನ್
ನ್ಯಾಷನಲ್ ಸೆಕ್ಯೂರಿಟಿ ಸೇರಿದಂತೆ ಸೈಬರ್ ಲೋಕದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ಹಲವಾರು ಪ್ರತಿಷ್ಠಿತಿ ಕಂಪನಿಗಳು ಸಿಇಒಗಳು, ಚೀಫ್ ಇನ್ಪಾರ್ಮೇಷನ್ ಸೆಕ್ಯೂರಿಟಿ ಆಫಿಸರ್ಸ್ ಹಾಗೂ ಸೈಬರ್ ತಜ್ಞರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಭಾಗವಾಗಿ ನ್ಯೂಸ್ಫಸ್ಟ್ ಈಗಾಗಲೇ ಹ್ಯಾಕಥಾನ್ ಕೂಡ ನಡೆಸಿದ್ದು, ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 100 ತಂಡಗಳು ಅವರಿಗೆ ನೀಡಲಾಗಿದ್ದ ಪ್ರಾಬ್ಲಮ್ ಸ್ಟೇಟ್ಮೆಂಟ್ಗಳಿಗೆ ತಮ್ಮ ಪರಿಹಾರ ಸೂತ್ರವನ್ನು ತಿಳಿಸಿವೆ. ಇಂದಿ ಈ ಸಮಾವೇಶದ ಭಾಗವಾಗಿಯೇ ಹ್ಯಾಕಥಾನ್ನ ಗ್ರಾಂಡ್ ಫಿನಾಲೆ ಕೂಡ ನಡೆಯಲಿದೆ. ಇದರಲ್ಲಿ ವಿಜೇತವಾಗುವ ತಂಡಗಳಿಗೆ 2 ಲಕ್ಷ ರೂಪಾಯಿಗಳ ಬಹುಮಾನ ಕೂಡ ನೀಡಲಾಗುವುದು.
ಅಲ್ಲದೇ ಇದೇ ಸಮಾವೇಶದ ಭಾಗವಾಗಿ ಸ್ಟಾರ್ಟಪ್ ಪೆವಿಲಿಯನ್ ಕೂಡ ಇರಲಿದ್ದು, ಹಲವಾರು ಸ್ಟಾರ್ಟಪ್ಗಳು ತಮ್ಮ ಪ್ರಾಡಕ್ಟ್ಗಳ ಪ್ರದರ್ಶಿಸಲಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಕೂಡ ಇಂತಹ ಸ್ಟಾರ್ಟಪ್ಗಳಿಗೆ ನೀಡುವ ಸಹಾಯವನ್ನು ತಿಳಿಸಿಕೊಡಲಿದ್ದಾರೆ. ಈ ಎರಡು ದಿನಗಳ ಸಮಾವೇಶಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ನ ಭಾಗವಾದ ಸೈಸೆಕ್ ಅಂದ್ರೆ, ಸೈಬರ್ ಸೆಕ್ಯೂರಿಟಿ ಕೌನ್ಸಿಲ್ ಸಹಕಾರ ನೀಡಿದ್ದು, ಐಟಿ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳಿಗೆ ರಿಯಲ್ ಟೈಮ್ ಉದ್ಯಮಕ್ಕೆ ಅನುಕೂಲವಾಗುವಂತೆ ಜಿನಿಮೈಂಡ್ಸ್ ಸಂಸ್ಥೆ ಡೇಟಾ ಮ್ಯಾನೇಜ್ಮೆಂಟ್ ಪರಿಹಾರಗಳನ್ನು ಒದಗಿಸುತ್ತದೆ. ಒಟ್ಟಾರೆ, ನ್ಯೂಸ್ಫಸ್ಟ್ ವಾಹಿನಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಅಂತರಾಷ್ಟ್ರೀಯ ಕಾನ್ಕ್ಲೇವ್ನಿಂದ ಸೈಬರ್ ಕಂಪನಿಗಳು, ತಜ್ಞರು, ಪೊಲೀಸರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿದೆ. ಅಗೋಚರ ಶತ್ರುವಿನ ವಿರುದ್ಧ ತಮ್ಮದೇ ಶೈಲಿಯಲ್ಲಿ ಹೋರಾಟಕ್ಕೆ ಈ ಕಾರ್ಯಕ್ರಮ ಸ್ಪೂರ್ತಿಯಾಗಿದೆ. ಈ ಕಾನ್ಕ್ಲೇವ್ನಿಂದ ಸೈಬರ್ ಅಪರಾಧ ಲೋಕದ ಹಾಗೂಹೋಗುಗಳ ಬಗ್ಗೆ ಜೊತೆಗೆ ಅಪರಾಧ ಪ್ರಕರಣಗಳ ಕುರಿತು ಅರಿವು ಮೂಡಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸೈಬರ್ ಕ್ರೈಂ ಕುರಿತು ಅರಿವು ನ್ಯೂಸ್ಫಸ್ಟ್ನಿಂದ ವಿಶೇಷ ಪ್ರಯತ್ನ
ಸಚಿವ ಪ್ರಿಯಾಂಕ್ ಖರ್ಗೆಯಿಂದ ಕಾರ್ಯಕ್ರಮ ಉದ್ಘಾಟನೆ
ಐಐಎಸ್ಸಿ ಆವರಣದ ಆಡಿಟೋರಿಯಂನಲ್ಲಿ ಕಾರ್ಯಕ್ರಮ
ಬೆಂಗಳೂರು: ಇಂದಿನಿಂದ ಎರಡು ದಿನಗಳ ಸೈಬರ್ ಕ್ರೈಮ್ಸ್ ಕಾನ್ಕ್ಲೇವ್ ಇಂಡಿಯನ್ ಇನ್ಸ್ಟಿಟ್ಯೂಟ್ನ ಜೆ.ಎನ್.ಟಾಟಾ ಆಡಿಟೊರಿಯಂನಲ್ಲಿ ನಡೆಯಲಿದೆ. ನ್ಯೂಸ್ಫಸ್ಟ್ ಆಯೋಜಿಸಿರುವ ಈ ಅಂತರಾಷ್ಟ್ರಿಯ ಸಮಾವೇಶದಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಇದು ಅತಿ ದೊಡ್ಡ ಚರ್ಚೆಯಾಗಿರಲಿದೆ.
ಸೈಬರ್ ಕ್ರೈಂ ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವ ಮಹಾಮಾರಿ. ದೇಶ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವಷ್ಟು ದೊಡ್ಡದಾಗಿ ಈ ಪಿಡುಗು ವ್ಯಾಪಿಸುತ್ತಿದೆ. ಸೈಬರ್ ವಂಚಕರನ್ನು ತಡೆಯುವಂತಹ ಪಯತ್ನಗಳನ್ನೂ ಸಹ ವಿಶ್ವದ ಹಲವು ರಾಷ್ಟ್ರಗಳು ಹಾಗೂ ನೂರಾರು ಸಂಸ್ಥೆಗಳು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿವೆ. ಜಾಗೃತಿ ಮೂಡಿಸುವ ಕೆಲಸಗಳೂ ನಡೆಯುತ್ತಿವೆ.
ಕಾರ್ಯಕ್ರಮದಡಿಯಲ್ಲಿ ನೂರಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಮಾಡಿದೆ. ಇದಕ್ಕಾಗಿ ಎಕ್ಸ್ಚೇಂಚ್ ಫಾರ್ ಮೀಡಿಯಾ ನೀಡುವ ಗೋಲ್ಡನ್ ಅವಾರ್ಡ್ ಕೂಡ ಪಡೆದುಕೊಂಡಿದೆ. ಇದೀಗ ಎರಡು ದಿನಗಳ ಅಂತರಾಷ್ಟ್ರೀಯ ಸೈಬರ್ ಕ್ರೈಮ್ಸ್ ಕಾನ್ಕ್ಲೇವ್ ಆಯೋಜಿಸಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿರುವ ಜೆ.ಎನ್.ಟಾಟಾ ಆಡಿಯೋರಿಯಂನಲ್ಲಿ ಈ ಸಮಾವೇಶ ನಡೆಯಲಿದೆ. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ವಿವಿಧ ವಿಷಯಗಳ ಬಗ್ಗೆ ದೇಶ ವಿದೇಶದ ತಜ್ಞರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
ಚರ್ಚೆಗೊಳಪಡಲಿರುವ ವಿಷಯಗಳು ಇಲ್ಲಿವೆ..
ಆರ್ಟಿಫಿಶಿಯಲ್ ಇಂಟಲಿಜೆನ್ಸ್
ಡೀಪ್ ಫೇಕ್
ಱನ್ಸಮ್ವೇರ್
ಬ್ಲಾಕ್ ಚೈನ್
ನ್ಯಾಷನಲ್ ಸೆಕ್ಯೂರಿಟಿ ಸೇರಿದಂತೆ ಸೈಬರ್ ಲೋಕದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ಹಲವಾರು ಪ್ರತಿಷ್ಠಿತಿ ಕಂಪನಿಗಳು ಸಿಇಒಗಳು, ಚೀಫ್ ಇನ್ಪಾರ್ಮೇಷನ್ ಸೆಕ್ಯೂರಿಟಿ ಆಫಿಸರ್ಸ್ ಹಾಗೂ ಸೈಬರ್ ತಜ್ಞರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಭಾಗವಾಗಿ ನ್ಯೂಸ್ಫಸ್ಟ್ ಈಗಾಗಲೇ ಹ್ಯಾಕಥಾನ್ ಕೂಡ ನಡೆಸಿದ್ದು, ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 100 ತಂಡಗಳು ಅವರಿಗೆ ನೀಡಲಾಗಿದ್ದ ಪ್ರಾಬ್ಲಮ್ ಸ್ಟೇಟ್ಮೆಂಟ್ಗಳಿಗೆ ತಮ್ಮ ಪರಿಹಾರ ಸೂತ್ರವನ್ನು ತಿಳಿಸಿವೆ. ಇಂದಿ ಈ ಸಮಾವೇಶದ ಭಾಗವಾಗಿಯೇ ಹ್ಯಾಕಥಾನ್ನ ಗ್ರಾಂಡ್ ಫಿನಾಲೆ ಕೂಡ ನಡೆಯಲಿದೆ. ಇದರಲ್ಲಿ ವಿಜೇತವಾಗುವ ತಂಡಗಳಿಗೆ 2 ಲಕ್ಷ ರೂಪಾಯಿಗಳ ಬಹುಮಾನ ಕೂಡ ನೀಡಲಾಗುವುದು.
ಅಲ್ಲದೇ ಇದೇ ಸಮಾವೇಶದ ಭಾಗವಾಗಿ ಸ್ಟಾರ್ಟಪ್ ಪೆವಿಲಿಯನ್ ಕೂಡ ಇರಲಿದ್ದು, ಹಲವಾರು ಸ್ಟಾರ್ಟಪ್ಗಳು ತಮ್ಮ ಪ್ರಾಡಕ್ಟ್ಗಳ ಪ್ರದರ್ಶಿಸಲಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಕೂಡ ಇಂತಹ ಸ್ಟಾರ್ಟಪ್ಗಳಿಗೆ ನೀಡುವ ಸಹಾಯವನ್ನು ತಿಳಿಸಿಕೊಡಲಿದ್ದಾರೆ. ಈ ಎರಡು ದಿನಗಳ ಸಮಾವೇಶಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ನ ಭಾಗವಾದ ಸೈಸೆಕ್ ಅಂದ್ರೆ, ಸೈಬರ್ ಸೆಕ್ಯೂರಿಟಿ ಕೌನ್ಸಿಲ್ ಸಹಕಾರ ನೀಡಿದ್ದು, ಐಟಿ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳಿಗೆ ರಿಯಲ್ ಟೈಮ್ ಉದ್ಯಮಕ್ಕೆ ಅನುಕೂಲವಾಗುವಂತೆ ಜಿನಿಮೈಂಡ್ಸ್ ಸಂಸ್ಥೆ ಡೇಟಾ ಮ್ಯಾನೇಜ್ಮೆಂಟ್ ಪರಿಹಾರಗಳನ್ನು ಒದಗಿಸುತ್ತದೆ. ಒಟ್ಟಾರೆ, ನ್ಯೂಸ್ಫಸ್ಟ್ ವಾಹಿನಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಅಂತರಾಷ್ಟ್ರೀಯ ಕಾನ್ಕ್ಲೇವ್ನಿಂದ ಸೈಬರ್ ಕಂಪನಿಗಳು, ತಜ್ಞರು, ಪೊಲೀಸರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿದೆ. ಅಗೋಚರ ಶತ್ರುವಿನ ವಿರುದ್ಧ ತಮ್ಮದೇ ಶೈಲಿಯಲ್ಲಿ ಹೋರಾಟಕ್ಕೆ ಈ ಕಾರ್ಯಕ್ರಮ ಸ್ಪೂರ್ತಿಯಾಗಿದೆ. ಈ ಕಾನ್ಕ್ಲೇವ್ನಿಂದ ಸೈಬರ್ ಅಪರಾಧ ಲೋಕದ ಹಾಗೂಹೋಗುಗಳ ಬಗ್ಗೆ ಜೊತೆಗೆ ಅಪರಾಧ ಪ್ರಕರಣಗಳ ಕುರಿತು ಅರಿವು ಮೂಡಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ