SUPER SIX: 3ನೇ ಕ್ರಮಾಂಕದಲ್ಲಿ ಕಿಶನ್ ಬ್ಯಾಟಿಂಗ್.. ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​ಗೆ ಆಘಾತ..!

ತಿಲಕ್​ ವರ್ಮಾ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ನ್ಯೂಜಿಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್​ ಕಿಶನ್ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದು ಕನ್​ಫರ್ಮ್. ಕ್ರಿಕೆಟ್ ಲೋಕದ ಆರು ಪ್ರಮುಖ ಸುದ್ದಿಗಳ ಹೂರಣ ಇಲ್ಲಿದೆ. ಮಿಸ್ ಮಾಡದೇ ಓದಿ..

author-image
Ganesh Kerekuli
Ishan kishan
Advertisment

ಬೆಂಗಳೂರಿಗೆ ಬಂದಿಳಿದ ತಿಲಕ್​ ವರ್ಮಾ 

ಇಂಜುರಿಗೆ ತುತ್ತಾಗಿ ನ್ಯೂಜಿಲೆಂಡ್​ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಬಿದ್ದಿರೋ ತಿಲಕ್​ ವರ್ಮಾ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬಿಸಿಸಿಐ ಸೆಂಟರ್​ ಆಫ್​​ ಎಕ್ಸಲೆನ್ಸ್​ನಲ್ಲಿ ಇಂದಿನಿಂದ ತಿಲಕ್​ ವರ್ಮಾ ರಿಹ್ಯಾಬ್​ಗೆ ಒಳಗಾಗಲಿದ್ದಾರೆ. ಫಿಟ್​​ನೆಸ್​ ಟೆಸ್ಟ್​ ಪಾಸಾದ ಬಳಿಕ ಟೀಮ್​ ಇಂಡಿಯಾವನ್ನ ಕೂಡಿಕೊಳ್ಳಲಿದ್ದಾರೆ. ವಿಜಯ್​ ಹಜಾರೆ ಪಂದ್ಯದ ವೇಳೆ ಇಂಜುರಿಗೆ ತುತ್ತಾದ ತಿಲಕ್​ ವರ್ಮಾ, ಸರ್ಜರಿಗೆ ಒಳಗಾಗಿದ್ರು.

Tilak varma

3ನೇ ಕ್ರಮಾಂಕದಲ್ಲಿ ಇಶಾನ್​ ಕಿಶನ್​ ಕಣಕ್ಕೆ 

ಇಂದು ನ್ಯೂಜಿಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್​ ಕಿಶನ್ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದು ಕನ್​ಫರ್ಮ್​ ಆಗಿದೆ. ಇಂದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್​ ಬ್ಯಾಟಿಂಗ್​ ನಡೆಸಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್​ ಯಾದವ್​ ಸ್ಪಷ್ಟಪಡಿಸಿದ್ದಾರೆ. ಗಾಯಗೊಂಡು ಸರಣಿಯಿಂದ ಹೊರಬಿದ್ದ ತಿಲಕ್​ ವರ್ಮಾ ಜಾಗದಲ್ಲಿ ಕಿಶನ್​ ಬ್ಯಾಟಿಂಗ್ ನಡೆಸಲಿದ್ದಾರೆ. 2023ರಲ್ಲಿ ಇಶಾನ್​ ಟೀಮ್​ ಇಂಡಿಯಾ ಪರ ಕೊನೆಯ ಟಿ20 ಪಂದ್ಯವನ್ನಾಡಿದ್ರು. 

Ishan kishan (2)

ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​ಗೆ ಆಘಾತ

ಭಾರತದ ವಿರುದ್ಧದ T20 ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​​ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕಲ್​ ಬ್ರೇಸ್​ವೆಲ್​ ಇಡೀ ಸರಣಿಯಿಂದಲೇ ಹೊರಗುಳಿಯೋ ಸಾಧ್ಯತೆ ಎದುರಾಗಿದೆ. ಇಂದೋರ್​ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಬ್ರೇಸ್​ವೆಲ್ ಕಾಲು ನೋವಿಗೆ ಒಳಗಾಗಿ ಮೈದಾನ ತೊರೆದಿದ್ರು. ಸಂಪೂರ್ಣ ಫಿಟ್​ ಆಗಿಲ್ಲ ಎಂದು ತಿಳಿದು ಬಂದಿದ್ದು, ಇಂದಿನ ಪಂದ್ಯದಿಂದ ಹೊರಗುಳಿಯೋದು ಬಹುತೇಕ ಕನ್​ಫರ್ಮ್​ ಆಗಿದೆ. 

ಯುಪಿ ವಾರಿಯರ್ಸ್​- ಗುಜರಾತ್​ ಮುಖಾಮುಖಿ

ಮಹಿಳಾ ಪ್ರೀಮಿಯರ್​​ ಲೀಗ್​​​ನ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್​​ ಹಾಗೂ ಗುಜರಾತ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಉಭಯ ತಂಡಗಳು ಸೀಸನ್​ನಲ್ಲಿ ಆಡಿದ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದ್ದು, 3 ಪಂದ್ಯದಲ್ಲಿ ಸೋಲುಂಡಿವೆ. 4 ಪಾಯಿಂಟ್ಸ್​ ಹೊಂದಿರೋ ಎರಡೂ ತಂಡಗಳಿಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. 

ತಿಂಗಳುಗಟ್ಟಲೇ ರಿಷಭ್ ಪಂತ್​ ಮೈದಾನದಿಂದ ಔಟ್​ 

ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರಬಿದ್ದಿದೆ. ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಇಂಜುರಿಗೆ ತುತ್ತಾಗಿದ್ದ ರಿಷಭ್​ ಪಂತ್​ರ ಲೇಟೆಸ್ಟ್​ ರಿಪೋರ್ಟ್​​ ಹೊರಬಂದಿದೆ. ರಿಬ್​ ಮಸಲ್​ ಬಳಿ ಗಂಭೀರ ಇಂಜುರಿಗೆ ಪಂತ್​ ತುತ್ತಾಗಿರೋದು ದೃಢಪಟ್ಟಿದೆ. ಸುಮಾರು ತಿಂಗಳಿಗೂ ಅಧಿಕ ಕಾಲ ಪಂತ್ ಮೈದಾನದಿಂದ ಹೊರಗಿರಲಿದ್ದಾರೆ ಎನ್ನಲಾಗ್ತಿದೆ. 

RISHABH_PANT (5)

ಮುಂಬೈ ತಂಡಕ್ಕೆ ವೈಷ್ಣವಿ ಶರ್ಮಾ ಎಂಟ್ರಿ 

ಮಹಿಳಾ ಪ್ರೀಮಿಯರ್​ ಲೀಗ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಯುವ ಆಟಗಾರ್ತಿ ವೈಷ್ಣವಿ ಶರ್ಮಾರನ್ನ ಅದೃಷ್ಠ ಹುಡುಕಿಕೊಂಡು ಬಂದಿದೆ. ಮುಂಬೈ ತಂಡದ ಆಟಗಾರ್ತಿ ಕಮಲಿನಿ ಇಂಜುರಿಗೆ ತುತ್ತಾಗಿ ಸೀಸನ್​ನಿಂದ ಹೊರಬಿದ್ದಿದ್ದಾರೆ. ಕಮಲಿನಿ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ವೈಷ್ಣವಿ ಶರ್ಮಾರನ್ನ  ಮುಂಬೈ ತಂಡ ಆಯ್ಕೆ ಮಾಡಿಕೊಂಡಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಪರ ಡೆಬ್ಯೂ ಮಾಡಿದ್ದ ವೈಷ್ಣವಿ ಶರ್ಮಾ, 5 ವಿಕೆಟ್​​ ಕಬಳಿಸಿ ಗಮನ ಸೆಳೆದಿದ್ರು. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada
Advertisment