ಶುಭ್​ಮನ್ ಗಿಲ್​ಗೆ ಆಫರ್​ ಮೇಲೆ ಆಫರ್.. ಯುವರಾಜನಿಗೆ ಒಲಿಯುತ್ತಾ ಈ ಪಟ್ಟ?

ಟೀಮ್​ ಇಂಡಿಯಾದ ಭವಿಷ್ಯಕ್ಕಾಗಿ ಬಲಿಷ್ಠ ಯುವ ಪಡೆ ಕಟ್ಟಲು ನೂರಾರು ಲೆಕ್ಕಾಚಾರ ಮಾಡಲಾಗುತ್ತಿದೆ. ಆದರೂ, ಮಹತ್ವದ ಇಂಗ್ಲೆಂಡ್​​ ಪ್ರವಾಸಕ್ಕೂ ಮುನ್ನ ಅನಾನುಭವಿ ಗಿಲ್​ಗೆ ಪಟ್ಟ ಕಟ್ಟಿದ್ದು ತೀವ್ರ ಚರ್ಚೆಯಾಗಿತ್ತು. ಆ ಪ್ರವಾಸದಲ್ಲಿ ಸಕ್ಸಸ್​ ಕಂಡಿದ್ದಾರೆ. ಗಿಲ್​ಗೆ ಆಫರ್​ ಮೇಲೆ ಆಫರ್​​ ಬರುತ್ತಿವೆ.

author-image
Bhimappa
shubman_gill (4)
Advertisment

ಏಷ್ಯಾಕಪ್​ಗೂ ಮುನ್ನ ಬಿಸಿಸಿಐ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ಟೀಮ್​ ಸೆಲೆಕ್ಷನ್​​ನ ಚರ್ಚೆಗಳು ಜೋರಾಗಿದ್ದು, ಟೆಸ್ಟ್​ ನಾಯಕನಾಗಿ ಸಕ್ಸಸ್​​ ಕಂಡ ಗಿಲ್​ಗೆ ಭರ್ಜರಿ ಗಿಪ್ಟ್​​ ಕೊಡಲು ಪ್ಲಾನ್​ ನಡೆಯುತ್ತಿದೆ. ಭವಿಷ್ಯದ ಟೀಮ್​ ಇಂಡಿಯಾ ಬಗ್ಗೆ ಯೋಚಿಸಿರೋ ಬಾಸ್​​ಗಳು ಹೊಸ ದಾಳ ಉರುಳಿಸಿದ್ದಾರೆ. ಯುವರಾಜ ಶುಭ್​ಮನ್ ಗಿಲ್​ನ ಟೀಮ್​ ಇಂಡಿಯಾ ರಾಜನನ್ನಾಗಿ ಮಾಡಲು ಪರ್ಫೆಕ್ಟ್​ ಪ್ಲಾನ್​ ರೆಡಿಯಾಗಿದೆ. 

ಈ ಯುವ ಆಟಗಾರ ನಾಯಕತ್ವಕ್ಕೆ ಸಮರ್ಥನಾ? ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಹೀಗೊಂದು ಪ್ರಶ್ನೆ ಕ್ರಿಕೆಟ್​​ ಲೋಕದಲ್ಲಿ ತೀವ್ರ ಚರ್ಚೆಯಾಗಿತ್ತು. ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ, ಮ್ಯಾನೇಜ್​ಮೆಂಟ್​ ರೋಹಿತ್​ ಶರ್ಮಾ ನಿವೃತ್ತಿ ಬಳಿಕ ಯುವ ಶುಭ್​ಮನ್​ ಗಿಲ್​ಗೆ ಪಟ್ಟ ಕಟ್ತು. ಟೀಮ್​ ಇಂಡಿಯಾದ ಭವಿಷ್ಯ, ಯುವ ಪಡೆಯನ್ನ ಕಟ್ಟೋ ಲೆಕ್ಕಾಚಾರ ಈ ನಿರ್ಧಾರದ ಹಿಂದಿದ್ವು. ಆದ್ರೂ, ಮಹತ್ವದ ಇಂಗ್ಲೆಂಡ್​​ ಪ್ರವಾಸಕ್ಕೂ ಮುನ್ನ ಅನಾನುಭವಿ ಗಿಲ್​ಗೆ ಪಟ್ಟ ಕಟ್ಟಿದ್ದು ತೀವ್ರ ಚರ್ಚೆಯಾಗಿತ್ತು. ಈಗ ಆ ಪ್ರವಾಸ ಅಂತ್ಯ ಕಂಡಿದೆ. ಗಿಲ್​ಗೆ ಆಫರ್​ ಮೇಲೆ ಆಫರ್​​ ಬರ್ತಿವೆ.

shubman_gill_bat

ಸಕ್ಸಸ್​​ ಕಂಡ​ ಗಿಲ್​ಗೆ ಬಂಪರ್​​ ಬಹುಮಾನ​​.!

ಫಸ್ಟ್​​ ಟಾಸ್ಕ್​​​ನಲ್ಲೇ ಯಶಸ್ಸು ಕಂಡ ಟೀಮ್​ ಇಂಡಿಯಾವನ್ನ ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರದ್ದೇ ನಾಡಲ್ಲಿ ಇಂಗ್ಲೆಂಡ್​ ತಂಡವನ್ನ ಹಿಮ್ಮೆಟ್ಟಿಸಿ ಅನಾನುಭವಿ ನಾಯಕ ಎನಿಸಿಕೊಂಡಿದ್ದ ನನ್ನ ಕೆಪಾಸಿಟಿ ಏನು ಅನ್ನೋದನ್ನ ಪ್ರೂವ್​ ಮಾಡಿದ್ದಾರೆ. 25 ವರ್ಷಕ್ಕೆ ಜಗಮೆಚ್ಚಿದ ಸಾಧನೆ ಮಾಡಿದ ಗಿಲ್​​​ಗೆ ಇದೀಗ ಭರ್ಜರಿ ಉಡುಗೊರೆ ರೆಡಿಯಾಗಿದೆ. ‘ಪ್ರಿನ್ಸ್’​ ಪಟ್ಟಾಭಿಷೇಕಕ್ಕೆ ಸದ್ದಿಲ್ಲದೇ ಸಿದ್ಧತೆಗಳು ಆರಂಭವಾಗಿವೆ. ಹೊಸ ಆಟ ಶುರುವಿಟ್ಟುಕೊಂಡಿರೋ ಬಿಸಿಸಿಐ ಬಾಸ್​​ಗಳು ಹೊಸ ದಾಳ ಉರುಳಿಸಿದ್ದಾರೆ. 

ಗಿಲ್​ ಟಿ20 ಕಮ್​ಬ್ಯಾಕ್​ಗೆ​ ಮಹೂರ್ತ ಫಿಕ್ಸ್​.!

ಜಲೈ 30 2024 ಶುಭ್​ಮನ್​ ಗಿಲ್​ ಕೊನೆಯದಾಗಿ ಟಿ20 ಪಂದ್ಯವನ್ನಾಡಿದ್ದು. ಆ ಬಳಿಕ ಟಿ20 ಫಾರ್ಮೆಟ್​ನಿಂದ ಶುಭ್​ಮನ್​ ಗಿಲ್​ ಸೈಡ್​​ಲೈನ್​ ಮಾಡಲಾಗಿತ್ತು. ಶುಭ್​​ಮನ್​ ಟಿ20 ಕರಿಯರ್​ ಖತಂ ಎಂದೇ ಎಲ್ರೂ ಭಾವಿಸಿದ್ರು. ಆದ್ರೀಗ ಇಂಗ್ಲೆಂಡ್​ ಪ್ರವಾಸದ ಸಕ್ಸಸ್​​ ಶುಭ್​ಮನ್​ ಟಿ20 ಕರಿಯರ್​​ಗೆ ಪುನರ್ಜನ್ಮ ನೀಡಿದೆ. ಏಷ್ಯಾಕಪ್​​ನೊಂದಿಗೆ ಗಿಲ್​ ಕಮ್​ಬ್ಯಾಕ್​ಗೆ ಮಹೂರ್ತ ಫಿಕ್ಸ್​ ಆಗಿದೆ. ಇಷ್ಟೇ ಅಲ್ಲ, ಪ್ರಿನ್ಸ್​ ಶುಭ್​ಮನ್​ ಗಿಲ್​ಗೆ ವೈಸ್​ ಕ್ಯಾಪ್ಟನ್​ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿ ರೆಡಿಯಾಗಿದೆ. 

ಏಕದಿನ ತಂಡಕ್ಕೂ ಶುಭ್​ಮನ್​ ಗಿಲ್​ ನಾಯಕ.!

ಸದ್ಯ ಟಿ20 ತಂಡದಲ್ಲಿ ಶುಭ್​​ಮನ್​ ಗಿಲ್​ಗೆ ಉಪನಾಯಕನ ಪಟ್ಟ ಕಟ್ಟಲು ಚರ್ಚೆ ನಡೀತಿವೆ. ಆದ್ರೆ, ಟೀಮ್​ ಇಂಡಿಯಾ ಇಂಗ್ಲೆಂಡ್​ ಪ್ರವಾಸದಲ್ಲಿದ್ದಾಗಲೇ ಬಿಸಿಸಿಐ ವಲಯದಿಂದ ಹೊರ ಬಿದ್ದ ಮತ್ತೊಂದು ಸುದ್ದಿ ನಿಮಗೆ ಗೊತ್ತಿರಬಹುದು. ರೋಹಿತ್​ ಶರ್ಮಾನ ಕೆಳಗಿಳಿಸಿ ಶುಭ್​ಮನ್​ ಗಿಲ್​ಗೆ ಪಟ್ಟಕಟ್ಟಲು ಬಿಸಿಸಿಐ ರೆಡಿಯಾಗಿದೆ ಅನ್ನೋದು. 2027ರ ವಿಶ್ವಕಪ್ ಟೂರ್ನಿಯನ್ನ ಟಾರ್ಗೆಟ್​​ ಮಾಡಿರುವ ಬಿಸಿಸಿಐ ಯುವ ನಾಯಕನ ಸಾರಥ್ಯದಲ್ಲಿ ಅಖಾಡಕ್ಕಿಳಿಯೋ ಪ್ಲಾನ್​ ಹೊಂದಿದೆ. ಹಾಗಾಗಿ ಮುಂದಿನ ಆಸ್ಟ್ರೇಲಿಯಾ ಸರಣಿಯಿಂದಲೇ ಗಿಲ್​ನ ಒನ್​ಡೇ ಟೀಮ್​ ಕ್ಯಾಪ್ಟನ್​ ಮಾಡೋ ಬಿಸಿಸಿಐ ವಲಯದಲ್ಲಿ ಗಂಭೀರ ಚಿಂತನೆ ನಡೆದಿದೆ. ಕೋಚ್​ ಗಂಭೀರ್​, ಸೆಲೆಕ್ಟರ್ಸ್​ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಇದನ್ನೂ ಓದಿ:ಬೆಂಗಳೂರು ಜನರಿಗೆ ಗುಡ್​ನ್ಯೂಸ್​.. ಉದ್ಯಾನ ನಗರಿಯಲ್ಲಿ ತಲೆ ಎತ್ತಲಿದೆ ಬೃಹತ್ ಸ್ಟೇಡಿಯಂ

shubman_gill_batting

ಟೆಸ್ಟ್​​ ನಾಯಕ ಗಿಲ್​ಗೆ, ಸದ್ಯ ಏಕದಿನ ತಂಡದ ಸಾರಥ್ಯವನ್ನೂ ವಹಿಸೋಕೆ ಮುಂದಾಗಿದೆ. 2026ರಲ್ಲಿ ಟಿ20 ವಿಶ್ವಕಪ್​ ಇರೋದ್ರಿಂದ ಎಚ್ಚರಿಕೆಯ ಹೆಜ್ಜೆ ಇಡ್ತಾ ಇರೋ ಬಾಸ್​​ಗಳು, ಸದ್ಯ ಗಿಲ್​​ನ ಉಪನಾಯಕನನ್ನಾಗಿ ಮಾತ್ರ ನೇಮಿಸಿ ವಿಶ್ವಕಪ್​ ಅಂತ್ಯವಾದ ಬಳಿಕ ಗಿಲ್​ ಟಿ20ಗೂ ನಾಯಕನನ್ನಾಗಿ ಮಾಡೋ ಯೋಜನೆ ಹಾಕಿಕೊಂಡಿದ್ದಾರೆ.

ಟೀಮ್​ ಇಂಡಿಯಾದ ಭವಿಷ್ಯದ ಬಗ್ಗೆ ಸ್ಪಷ್ಟವಾದ ಪ್ಲಾನ್​ ರೂಪಿಸಿಕೊಂಡಿರೋ ಬಿಸಿಸಿಐ ಬಾಸ್​​ಗಳು ಗಿಲ್​​ಗೆ ಪಟ್ಟ ಕಟ್ಟಲು ಕಸರತ್ತು ನಡೆಸ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಗಿಲ್ ಶೀಘ್ರದಲ್ಲೇ​ ಟೀಮ್​ ಇಂಡಿಯಾದ ಆಲ್​​ಫಾರ್ಮೆಟ್​ ಕ್ಯಾಪ್ಟನ್​ ಆಗಲಿದ್ದಾರೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Shubman Gill Captaincy Suryakumar Yadav profile
Advertisment