newsfirstkannada.com

‘ರೋಹಿತ್​​ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ’- ಮೆಗಾ ಟ್ವಿಸ್ಟ್​​ ಕೊಟ್ಟ ಮಾಜಿ ಕ್ರಿಕೆಟರ್​​​​

Share :

Published April 5, 2024 at 4:11pm

    ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

    ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈಗೆ ಹೀನಾಯ ಸೋಲು

    ರೋಹಿತ್​ ಶರ್ಮಾ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟರ್​​​

ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಶುರುವಾಗಿದೆ. ​ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್​ ಟು ಬ್ಯಾಕ್​ ಮೂರು ಪಂದ್ಯ ಸೋತಿದೆ. ಹೀಗಾಗಿ ಸ್ವತಃ ಅಭಿಮಾನಿಗಳೇ ಹಾರ್ದಿಕ್​​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಸಂಘರ್ಷ ಇಲ್ಲ. ರೋಹಿತ್ ಶರ್ಮಾ ಈ ಸೀಸನ್​​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ ಎಂದಿದ್ದಾರೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​ ಎಸ್ ಶ್ರೀಶಾಂತ್.

ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರೇ ಮಹಿ ಭಾಯ್ ನಾಯಕತ್ವದಲ್ಲಿ ಆಡಿದ್ದರು. 2011ರ ಏಕದಿನ ವಿಶ್ವಕಪ್ ಕೂಡ ಗೆದ್ದರು. ಈಗ ಹಾರ್ದಿಕ್ ನಾಯಕತ್ವದಲ್ಲಿ ರೋಹಿತ್ ಆಡುವ ಬಗ್ಗೆ ಸಾಕಷ್ಟು ಕಥೆಗಳು ಹೇಳಲಾಗುತ್ತಿದೆ. ಆದರೆ, ರೋಹಿತ್ ಶರ್ಮಾ ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ ಎಂದರು.

ರೋಹಿತ್ ಯಾವುದೇ ಕ್ಯಾಪ್ಟನ್ಸಿ ಒತ್ತಡ ಇಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತಾರೆ. ಈ ಸೀಸನ್​​ನಲ್ಲಿ ಆರೆಂಜ್ ಕ್ಯಾಪ್ ಸಹ ತೆಗೆದುಕೊಳ್ಳುತ್ತಾರೆ. ಇದು ರೋಹಿತ್​ಗೆ ಬೆಸ್ಟ್​ ಸೀರೀಸ್​ ಆಗಿರಲಿದೆ. ಮುಂದಿನಿಂದ ಮುನ್ನಡೆಸಿದ್ದ ರೋಹಿತ್​ ಇನ್ಮುಂದೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿನಿಂದ ಮುನ್ನಡೆಸಲಿದ್ದಾರೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ರೋಹಿತ್​​ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ’- ಮೆಗಾ ಟ್ವಿಸ್ಟ್​​ ಕೊಟ್ಟ ಮಾಜಿ ಕ್ರಿಕೆಟರ್​​​​

https://newsfirstlive.com/wp-content/uploads/2024/04/Surya_Rohit.jpg

    ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

    ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈಗೆ ಹೀನಾಯ ಸೋಲು

    ರೋಹಿತ್​ ಶರ್ಮಾ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟರ್​​​

ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಶುರುವಾಗಿದೆ. ​ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್​ ಟು ಬ್ಯಾಕ್​ ಮೂರು ಪಂದ್ಯ ಸೋತಿದೆ. ಹೀಗಾಗಿ ಸ್ವತಃ ಅಭಿಮಾನಿಗಳೇ ಹಾರ್ದಿಕ್​​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಸಂಘರ್ಷ ಇಲ್ಲ. ರೋಹಿತ್ ಶರ್ಮಾ ಈ ಸೀಸನ್​​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ ಎಂದಿದ್ದಾರೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​ ಎಸ್ ಶ್ರೀಶಾಂತ್.

ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರೇ ಮಹಿ ಭಾಯ್ ನಾಯಕತ್ವದಲ್ಲಿ ಆಡಿದ್ದರು. 2011ರ ಏಕದಿನ ವಿಶ್ವಕಪ್ ಕೂಡ ಗೆದ್ದರು. ಈಗ ಹಾರ್ದಿಕ್ ನಾಯಕತ್ವದಲ್ಲಿ ರೋಹಿತ್ ಆಡುವ ಬಗ್ಗೆ ಸಾಕಷ್ಟು ಕಥೆಗಳು ಹೇಳಲಾಗುತ್ತಿದೆ. ಆದರೆ, ರೋಹಿತ್ ಶರ್ಮಾ ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ ಎಂದರು.

ರೋಹಿತ್ ಯಾವುದೇ ಕ್ಯಾಪ್ಟನ್ಸಿ ಒತ್ತಡ ಇಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತಾರೆ. ಈ ಸೀಸನ್​​ನಲ್ಲಿ ಆರೆಂಜ್ ಕ್ಯಾಪ್ ಸಹ ತೆಗೆದುಕೊಳ್ಳುತ್ತಾರೆ. ಇದು ರೋಹಿತ್​ಗೆ ಬೆಸ್ಟ್​ ಸೀರೀಸ್​ ಆಗಿರಲಿದೆ. ಮುಂದಿನಿಂದ ಮುನ್ನಡೆಸಿದ್ದ ರೋಹಿತ್​ ಇನ್ಮುಂದೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿನಿಂದ ಮುನ್ನಡೆಸಲಿದ್ದಾರೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More