/newsfirstlive-kannada/media/post_attachments/wp-content/uploads/2025/06/Kavya_Maran-1.jpg)
2024ರಲ್ಲಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ, ಈ ಬಾರಿ ಲೀಗ್ ಹಂತದಲ್ಲಿ ಐಪಿಎಲ್ನಿಂದ ಹೊರ ಬಂದಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸನ್ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್ ಅವರ ತಂದೆ ಸನ್ ನೆಟ್ವರ್ಕ್ನ ಮಾಲೀಕ ಕಲಾನಿಧಿ ಮಾರನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದ ದಯಾನಿಧಿ ಮಾರನ್ ಅವರು ತನ್ನ ಸಹೋದರ ಕಲಾನಿಧಿ ಮಾರನ್ ಮೇಲೆ ಆರ್ಥಿಕ ಅಪರಾಧಗಳ ಆರೋಪ ಮಾಡಿದ್ದಾರೆ. ಸನ್ ಟಿವಿ ಹಾಗೂ ಇದಕ್ಕೆ ಸಂಬಂಧಿಸಿದ ಕಂಪನಿಗಳ ಸಂಪೂರ್ಣ ಷೇರುಗಳನ್ನು ಮೂಲ ಸ್ಥಿತಿಗೆ ಮರುಸ್ಥಾಪಿಸಬೇಕು. ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
2003ಕ್ಕಿಂತಲೂ ಮೊದಲು ಸನ್ ನೆಟ್ವರ್ಕ್ನಲ್ಲಿ ಮಾರನ್ ಹಾಗೂ ಕರುಣಾನಿಧಿ ಕುಟುಂಬ ಸಮವಾಗಿ ಷೇರುಗಳನ್ನು ಹಂಚಿಕೊಂಡಿದ್ದರು. ಸದ್ಯ ಈಗ ಈ ಷೇರುಗಳ ಬಗ್ಗೆ ವಿವಾದ ಎದ್ದಿದೆ. 2003ರ ನಂತರ ಸನ್ ಡೈರೆಕ್ಟ್ ಟಿವಿ, ಸನ್ ಪಿಕ್ಚರ್ಸ್, ಎಫ್ಎಂ ಚಾನೆಲ್ ಹಾಗೂ ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ನಂತಹ ಉದ್ಯಮಗಳನ್ನು ಪ್ರಾರಂಭಿಸಲು ಕಂಪನಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಸನ್ಟಿವಿ ಸ್ವಾಧೀನಪಡಿಸಿಕೊಳ್ಳುವಾಗ ಸಹೋದರ ಕಲಾನಿಧಿ ಸಂಘಟಿತ ಆರ್ಥಿಕ ವಂಚನೆ ಮಾಡಿದ್ದಾರೆ. ಇದರಲ್ಲಿ ಮೋಸವಾಗಿದೆ ಎಂದು ದಯಾನಿಧಿ ಮಾರನ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?
ಸನ್ನೆಟ್ವರ್ಕ್ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಟಿವಿ ನೆಟ್ವರ್ಕ್ ಆಗಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಇದೆ. ಇದೇ ನೆಟ್ವರ್ಕ್ ಭಾರತದಾದ್ಯಂತ ಎಫ್ಎಂ ರೇಡಿಯೋ ಕೇಂದ್ರಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ಹಾಗೂ ದಕ್ಷಿಣ ಆಫ್ರಿಕಾದ T20 ಲೀಗ್ನ ತಂಡವಾದ ಸನ್ರೈಸರ್ಸ್ ಈಸ್ಟರ್ನ್ ಕೇಪ್ನ ಒಡೆತನ ಇವರದ್ದೇ ಆಗಿವೆ.
ಒಂದು ವೇಳೆ ದಯಾನಿಧಿ ಮಾರನ್ ಮಾಡಿದ ಈ ಎಲ್ಲ ಆರೋಪಗಳು ಸಾಬೀತಾದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾವ್ಯಾ ಮಾರನ್ ಹಾಗೂ ಅವರ ಐಪಿಎಲ್ ಟೀಮ್ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ