ಮೆಗಾ ಫೈನಲ್ನಲ್ಲಿ KKR-SRH ಮುಖಾಮುಖಿ
8 ವರ್ಷಗಳ ನಂತ್ರ ಟ್ರೋಫಿ ಕನವರಿಕೆಯಲ್ಲಿ SRH ತಂಡ
ಚೆಪಾಕ್ ಮೈದಾನದಲ್ಲಿ ಟ್ರೋಫಿ ಗೆಲ್ಲೋಕೆ ಕಾವ್ಯ ಮಾರನ್ ಪ್ಲಾನ್
2024ನೇ ಐಪಿಎಲ್ ಅಧಿಪತಿ ಯಾರು ? ಈ ಸಿಂಹಾಸನ ಪಟ್ಟಕ್ಕೆ ಇಂದು ಚೆಪಾಕ್ನಲ್ಲಿ ಬಿಗ್ ಫೈಟ್ ನಡೆಯಲಿದೆ. ಕೆಕೆಆರ್ ಕಪ್ ನಮ್ದೆ ಅಂತ ಆತ್ಮವಿಶ್ವಾಸದಲ್ಲಿದೆ. ಆದ್ರೆ ಹೈದರಾಬಾದ್ ಒಂದು ಕೈ ನೋಡೆ ಬಿಡೋಣ ಅಂತಿದೆ. 2016 ರಿಂದ ಇದ್ರೂ ಇಲ್ಲದಂತಿದ್ದ ಆರೆಂಜ್ ಆರ್ಮಿ, ಈ ಸಲ ಫೈನಲ್ ರೇಸ್ಗೆ ಎಂಟ್ರಿಕೊಟ್ಟಿದ್ದೇಗೆ ? ಅದಕ್ಕೆ ಕಾರಣಗಳೇನು ? ಬನ್ನಿ ನೋಡೋಣ.
ಐಪಿಎಲ್ ಅಧಿಪತಿ ಪಟ್ಟಕ್ಕೆ ಏರಲು ಉಳಿದಿರೋದು, ಇನ್ನು ಒಂದೇ ಒಂದು ಹೆಜ್ಜೆ. ಇಂದು ನಡೆಯುವ ಫೈನಲ್ ಹಂಗಾಮದಲ್ಲಿ, ಡೇಂಜರಸ್ ಹೈದರಾಬಾದ್ ತಂಡ ಕೆಕೆಆರ್ ಅನ್ನ ಎದುರಿಸಲಿದೆ. 2016ರ ನಂತರ ಆರೆಂಜ್ ಆರ್ಮಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. 8 ವರ್ಷಗಳಿಂದ ಆಘಾತ ಮೇಲೆ ಆಘಾತ ಕಂಡಿದ್ದ ಹೈದ್ರಾಬಾದ್, ಈ ಸಲ ಕಪ್ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ಹಾಗಾದ್ರೆ ಫ್ಯಾನ್ಸ್ ಕಮಿನ್ಸ್ ಬಳಗದ ಫೈನಲ್ಗೆ ಎಂಟ್ರಿಕೊಡಲು ಕಾರಣಗಳೇನು ಅನ್ನೋದನ್ನ ತಿಳಿಯೋಣ.
ಹೆಡ್-ಅಭಿಷೇಕ್ ಶರ್ಮಾ ಭರ್ಜರಿ ಜೊತೆಯಾಟ
ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ರ ಸ್ಫೋಟಕ ಆಟವೇ, ಹೈದ್ರಾಬಾದ್ಗೆ ಟ್ರೋಫಿ ಆಸೆ ಚಿಗುರಿಸಿದೆ. ಉಭಯ ಜೋಡಿ ಟೂರ್ನಿಯಲ್ಲಿ ವಿಧ್ವಂಸಕ ಆಟವಾಡ್ತಿದೆ. 15 ಇನ್ನಿಂಗ್ಸ್ಗಳಿಂದ ಇಬ್ಬರೂ ಆರಂಭಿಕರಾಗಿ, 482 ರನ್ ಚಚ್ಚಿದ್ದಾರೆ. 3 ಬಾರಿ ಅರ್ಧಶತಕದ ಆಟವಾಡಿದ್ದು, ಫೈನಲ್ ಬ್ಯಾಟಲ್ನಲ್ಲು ಇವರ ಮೇಲೆ ಭಾರೀ ನಿರೀಕ್ಷೆ ಇದೆ.
ಮಿಡಲ್ ಆರ್ಡರ್ನಲ್ಲಿ ಕ್ಲಾಸೆನ್ ಆರ್ಭಟ
ಹೆನ್ರಿಚ್ ಕ್ಲಾಸೆನ್, ಹೈದ್ರಾಬಾದ್ನ ಬಿಗ್ಗೆಸ್ಟ್ ಬ್ಯಾಟಿಂಗ್ ವೆಪನ್. ಮಧ್ಯಮ ಕ್ರಮಾಂಕದಲ್ಲಿ ಬೌಲರ್ಗಳಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಎಲ್ಲಾ ಸನ್ನಿವೇಶದಲ್ಲೂ ನಿರ್ಭೀತಿ ಆಟವಾಡ್ತಿರೋ ಕ್ಲಾಸೆನ್, ಈವರೆಗೆ 207.75 ಸ್ಟ್ರೈಕ್ರೇಟ್ನಲ್ಲಿ 463 ರನ್ ಗಳಿಸಿದ್ದಾರೆ. ಇಂದು ಕೂಡ ಕ್ಲಾಸೆನ್ ಕಟ್ಟಿಹಾಕುವುದು, ಕೆಕೆಆರ್ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ.
ನಿತೀಶ್ ರೆಡ್ಡಿ, ಶಹಬಾಜ್, ಸಮದ್ ಕಾಣಿಕೆ
ಹೈದ್ರಾಬಾದ್ ಫೈನಲ್ ತಲುಪಲು, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್ ಹಾಗೂ ಅಬ್ದುಲ್ ಸಮಾದ್ ಪಾತ್ರ ದೊಡ್ಡದಿದೆ. ನಿತೀಶ್ ಕುಮಾರ್ 290 ರನ್ ಜೊತೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗ್ತಿದ್ದಾರೆ. ಶಹಬಾಜ್ ಮತ್ತು ಸಮಾದ್ ಕೂಡ ಸ್ಲಾಗ್ ಓವರ್ಗಳಲ್ಲಿ ಆರ್ಭಟಿಸಿ, ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ.
ಎಡಗೈ ವೇಗಿ ನಟರಾಜನ್ ಸೂಪರ್ ಸ್ಪೆಲ್
ಟಿ ನಟರಾಜನ್. ಪ್ರಸಕ್ತ ಐಪಿಎಲ್ನಲ್ಲಿ ಅದ್ಭುತ ದಾಳಿ ನಡೆಸ್ತಿದ್ದಾರೆ. ಬ್ಯಾಟರ್ಗಳನ್ನ ಕಂಗೆಡಿಸುವ ನಟರಾಜನ್, 19 ವಿಕೆಟ್ ಬೇಟೆಯಾಡಿದ್ದಾರೆ. ಹೈದ್ರಾಬಾದ್ ಪರ ಇವರೇ ಟಾಪ್ ವಿಕೆಟ್ ಟೇಕರ್. ಇಂದು ತವರಿನ ಚೆಪಾಕ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ನಟ್ಟು ಇನ್ನಷ್ಟು ಡೇಂಜರಸ್ ಆಗಿ ಪರಿಣಮಿಸಬಲ್ಲರು.
ಪ್ಯಾಟ್ ಕಮ್ಮಿನ್ಸ್ ಅತ್ಯಾದ್ಭುತ ನಾಯಕತ್ವ
ಪ್ಯಾಟ್ ಕಮಿನ್ಸ್ ಹೈದರಾಬಾದ್ ಚುಕ್ಕಾಣಿ ಹಿಡಿದ ಬಳಿಕ, ತಂಡದ ಚರಿಷ್ಮವೇ ಬದಲಾಗಿದೆ. ಆರಂಭದಲ್ಲೆ ಹೇಳಿದಂತೆ, ಇಡೀ ತಂಡ ಅಗ್ರೆಸ್ಸಿವ್ ಅಪ್ರೋಚ್ ತೋರಿಸ್ತಿದೆ. ಆನ್ಫೀಲ್ಡ್ನಲ್ಲಿ ಕಮಿನ್ಸ್ ಕ್ಯಾಪ್ಟನ್ಸಿ ಅದ್ಭುತ. ಎದುರಾಳಿ ತಂಡದ ವೀಕ್ನೆಸ್ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸ್ತಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕಮಿನ್ಸ್, 8 ವರ್ಷಗಳ ಬಳಿಕ ಹೈದ್ರಾಬಾದ್ ತಂಡವನ್ನ ಚಾಂಪಿಯನ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: KKR: ಈ ಬೌಲರ್ಸ್ ಭಾರೀ ಡೇಂಜರ್ಸ್ ಗುರೂ.. ಇವ್ರು ಸಿಡಿದೆದ್ರೆ SRH ತಂಡಕ್ಕೆ ಸೋಲು ಗ್ಯಾರೆಂಟಿ!
ಒಟ್ಟಿನಲ್ಲಿ ಬಲಾಢ್ಯ ಕೆಕೆಆರ್ಗೆ ಫೈನಲ್ನಲ್ಲಿ ಬಲಿಷ್ಠ ಹೈದ್ರಾಬಾದ್ ಎದುರಾಳಿಯಾಗಿದೆ. ಆಕ್ರಮಣಕಾರಿ ಆಟ ತಂಡದ ಬಿಗ್ಗೆಸ್ಟ್ ಸ್ಟ್ರೆಂಥ್. ಈ ತಂತ್ರ ಫೈನಲ್ನಲ್ಲಿ ವರ್ಕ್ ಆಗುತ್ತಾ? 8 ವರ್ಷಗಳ ನಂತರ ಎಸ್ಆರ್ಎಚ್ ಟ್ರೋಫಿ ಎತ್ತಿ ಹಿಡಿಯುತ್ತಾ? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮೆಗಾ ಫೈನಲ್ನಲ್ಲಿ KKR-SRH ಮುಖಾಮುಖಿ
8 ವರ್ಷಗಳ ನಂತ್ರ ಟ್ರೋಫಿ ಕನವರಿಕೆಯಲ್ಲಿ SRH ತಂಡ
ಚೆಪಾಕ್ ಮೈದಾನದಲ್ಲಿ ಟ್ರೋಫಿ ಗೆಲ್ಲೋಕೆ ಕಾವ್ಯ ಮಾರನ್ ಪ್ಲಾನ್
2024ನೇ ಐಪಿಎಲ್ ಅಧಿಪತಿ ಯಾರು ? ಈ ಸಿಂಹಾಸನ ಪಟ್ಟಕ್ಕೆ ಇಂದು ಚೆಪಾಕ್ನಲ್ಲಿ ಬಿಗ್ ಫೈಟ್ ನಡೆಯಲಿದೆ. ಕೆಕೆಆರ್ ಕಪ್ ನಮ್ದೆ ಅಂತ ಆತ್ಮವಿಶ್ವಾಸದಲ್ಲಿದೆ. ಆದ್ರೆ ಹೈದರಾಬಾದ್ ಒಂದು ಕೈ ನೋಡೆ ಬಿಡೋಣ ಅಂತಿದೆ. 2016 ರಿಂದ ಇದ್ರೂ ಇಲ್ಲದಂತಿದ್ದ ಆರೆಂಜ್ ಆರ್ಮಿ, ಈ ಸಲ ಫೈನಲ್ ರೇಸ್ಗೆ ಎಂಟ್ರಿಕೊಟ್ಟಿದ್ದೇಗೆ ? ಅದಕ್ಕೆ ಕಾರಣಗಳೇನು ? ಬನ್ನಿ ನೋಡೋಣ.
ಐಪಿಎಲ್ ಅಧಿಪತಿ ಪಟ್ಟಕ್ಕೆ ಏರಲು ಉಳಿದಿರೋದು, ಇನ್ನು ಒಂದೇ ಒಂದು ಹೆಜ್ಜೆ. ಇಂದು ನಡೆಯುವ ಫೈನಲ್ ಹಂಗಾಮದಲ್ಲಿ, ಡೇಂಜರಸ್ ಹೈದರಾಬಾದ್ ತಂಡ ಕೆಕೆಆರ್ ಅನ್ನ ಎದುರಿಸಲಿದೆ. 2016ರ ನಂತರ ಆರೆಂಜ್ ಆರ್ಮಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. 8 ವರ್ಷಗಳಿಂದ ಆಘಾತ ಮೇಲೆ ಆಘಾತ ಕಂಡಿದ್ದ ಹೈದ್ರಾಬಾದ್, ಈ ಸಲ ಕಪ್ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ಹಾಗಾದ್ರೆ ಫ್ಯಾನ್ಸ್ ಕಮಿನ್ಸ್ ಬಳಗದ ಫೈನಲ್ಗೆ ಎಂಟ್ರಿಕೊಡಲು ಕಾರಣಗಳೇನು ಅನ್ನೋದನ್ನ ತಿಳಿಯೋಣ.
ಹೆಡ್-ಅಭಿಷೇಕ್ ಶರ್ಮಾ ಭರ್ಜರಿ ಜೊತೆಯಾಟ
ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ರ ಸ್ಫೋಟಕ ಆಟವೇ, ಹೈದ್ರಾಬಾದ್ಗೆ ಟ್ರೋಫಿ ಆಸೆ ಚಿಗುರಿಸಿದೆ. ಉಭಯ ಜೋಡಿ ಟೂರ್ನಿಯಲ್ಲಿ ವಿಧ್ವಂಸಕ ಆಟವಾಡ್ತಿದೆ. 15 ಇನ್ನಿಂಗ್ಸ್ಗಳಿಂದ ಇಬ್ಬರೂ ಆರಂಭಿಕರಾಗಿ, 482 ರನ್ ಚಚ್ಚಿದ್ದಾರೆ. 3 ಬಾರಿ ಅರ್ಧಶತಕದ ಆಟವಾಡಿದ್ದು, ಫೈನಲ್ ಬ್ಯಾಟಲ್ನಲ್ಲು ಇವರ ಮೇಲೆ ಭಾರೀ ನಿರೀಕ್ಷೆ ಇದೆ.
ಮಿಡಲ್ ಆರ್ಡರ್ನಲ್ಲಿ ಕ್ಲಾಸೆನ್ ಆರ್ಭಟ
ಹೆನ್ರಿಚ್ ಕ್ಲಾಸೆನ್, ಹೈದ್ರಾಬಾದ್ನ ಬಿಗ್ಗೆಸ್ಟ್ ಬ್ಯಾಟಿಂಗ್ ವೆಪನ್. ಮಧ್ಯಮ ಕ್ರಮಾಂಕದಲ್ಲಿ ಬೌಲರ್ಗಳಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಎಲ್ಲಾ ಸನ್ನಿವೇಶದಲ್ಲೂ ನಿರ್ಭೀತಿ ಆಟವಾಡ್ತಿರೋ ಕ್ಲಾಸೆನ್, ಈವರೆಗೆ 207.75 ಸ್ಟ್ರೈಕ್ರೇಟ್ನಲ್ಲಿ 463 ರನ್ ಗಳಿಸಿದ್ದಾರೆ. ಇಂದು ಕೂಡ ಕ್ಲಾಸೆನ್ ಕಟ್ಟಿಹಾಕುವುದು, ಕೆಕೆಆರ್ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ.
ನಿತೀಶ್ ರೆಡ್ಡಿ, ಶಹಬಾಜ್, ಸಮದ್ ಕಾಣಿಕೆ
ಹೈದ್ರಾಬಾದ್ ಫೈನಲ್ ತಲುಪಲು, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್ ಹಾಗೂ ಅಬ್ದುಲ್ ಸಮಾದ್ ಪಾತ್ರ ದೊಡ್ಡದಿದೆ. ನಿತೀಶ್ ಕುಮಾರ್ 290 ರನ್ ಜೊತೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗ್ತಿದ್ದಾರೆ. ಶಹಬಾಜ್ ಮತ್ತು ಸಮಾದ್ ಕೂಡ ಸ್ಲಾಗ್ ಓವರ್ಗಳಲ್ಲಿ ಆರ್ಭಟಿಸಿ, ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ.
ಎಡಗೈ ವೇಗಿ ನಟರಾಜನ್ ಸೂಪರ್ ಸ್ಪೆಲ್
ಟಿ ನಟರಾಜನ್. ಪ್ರಸಕ್ತ ಐಪಿಎಲ್ನಲ್ಲಿ ಅದ್ಭುತ ದಾಳಿ ನಡೆಸ್ತಿದ್ದಾರೆ. ಬ್ಯಾಟರ್ಗಳನ್ನ ಕಂಗೆಡಿಸುವ ನಟರಾಜನ್, 19 ವಿಕೆಟ್ ಬೇಟೆಯಾಡಿದ್ದಾರೆ. ಹೈದ್ರಾಬಾದ್ ಪರ ಇವರೇ ಟಾಪ್ ವಿಕೆಟ್ ಟೇಕರ್. ಇಂದು ತವರಿನ ಚೆಪಾಕ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ನಟ್ಟು ಇನ್ನಷ್ಟು ಡೇಂಜರಸ್ ಆಗಿ ಪರಿಣಮಿಸಬಲ್ಲರು.
ಪ್ಯಾಟ್ ಕಮ್ಮಿನ್ಸ್ ಅತ್ಯಾದ್ಭುತ ನಾಯಕತ್ವ
ಪ್ಯಾಟ್ ಕಮಿನ್ಸ್ ಹೈದರಾಬಾದ್ ಚುಕ್ಕಾಣಿ ಹಿಡಿದ ಬಳಿಕ, ತಂಡದ ಚರಿಷ್ಮವೇ ಬದಲಾಗಿದೆ. ಆರಂಭದಲ್ಲೆ ಹೇಳಿದಂತೆ, ಇಡೀ ತಂಡ ಅಗ್ರೆಸ್ಸಿವ್ ಅಪ್ರೋಚ್ ತೋರಿಸ್ತಿದೆ. ಆನ್ಫೀಲ್ಡ್ನಲ್ಲಿ ಕಮಿನ್ಸ್ ಕ್ಯಾಪ್ಟನ್ಸಿ ಅದ್ಭುತ. ಎದುರಾಳಿ ತಂಡದ ವೀಕ್ನೆಸ್ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸ್ತಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕಮಿನ್ಸ್, 8 ವರ್ಷಗಳ ಬಳಿಕ ಹೈದ್ರಾಬಾದ್ ತಂಡವನ್ನ ಚಾಂಪಿಯನ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: KKR: ಈ ಬೌಲರ್ಸ್ ಭಾರೀ ಡೇಂಜರ್ಸ್ ಗುರೂ.. ಇವ್ರು ಸಿಡಿದೆದ್ರೆ SRH ತಂಡಕ್ಕೆ ಸೋಲು ಗ್ಯಾರೆಂಟಿ!
ಒಟ್ಟಿನಲ್ಲಿ ಬಲಾಢ್ಯ ಕೆಕೆಆರ್ಗೆ ಫೈನಲ್ನಲ್ಲಿ ಬಲಿಷ್ಠ ಹೈದ್ರಾಬಾದ್ ಎದುರಾಳಿಯಾಗಿದೆ. ಆಕ್ರಮಣಕಾರಿ ಆಟ ತಂಡದ ಬಿಗ್ಗೆಸ್ಟ್ ಸ್ಟ್ರೆಂಥ್. ಈ ತಂತ್ರ ಫೈನಲ್ನಲ್ಲಿ ವರ್ಕ್ ಆಗುತ್ತಾ? 8 ವರ್ಷಗಳ ನಂತರ ಎಸ್ಆರ್ಎಚ್ ಟ್ರೋಫಿ ಎತ್ತಿ ಹಿಡಿಯುತ್ತಾ? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ