newsfirstkannada.com

ಸ್ಟಾರ್​​ ಕ್ರಿಕೆಟರ್​​​​ ಚಲಿಸುತ್ತಿದ್ದ ಕಾರ್​ಗೆ ಭೀಕರ ಅಪಘಾತ; ಆಸ್ಪತ್ರೆಗೆ ದಾಖಲು!

Share :

Published March 14, 2024 at 5:02pm

    ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದ ಘಟನೆ

    ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು

    ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಲಹಿರು ತಿರಿಮನ್ನೆ

ಶ್ರೀಲಂಕಾದ ಮಾಜಿ ಸ್ಟಾರ್​ ಆಟಗಾರ ಲಹಿರು ತಿರಿಮನ್ನೆ ಕಾರು ಅಪಘಾತಕ್ಕೀಡಾಗಿದ ಘಟನೆ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಗಾಯಗೊಂಡ ಲಹಿರು ತಿರಿಮನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ತುಕಾಲಿ ಸಂತೋಷ್​ ಕಾರಿಗೆ ಡಿಕ್ಕಿ ಹೊಡೆದ ಪ್ರಕರಣ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ಎದುರಿನಿಂದ ಬರುತ್ತಿದ್ದ ಲಹಿರು ತಿರಿಮನ್ನೆ ಕುಳಿತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಮುಂಭಾಗ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಅದೃಷ್ಟವಶಾತ್​ ಈ ಅಪಘಾತದಲ್ಲಿ ಲಹಿರು ತಿರಿಮನ್ನೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಸಣ್ಣ ಪುಟ್ಟ ಗಾಯಗಳಾದ ಲಹಿರು ತಿರಿಮನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾರು ಅಪಘಾತದ ಫೋಟೋಗಳು ವೈರಲ್​ ಆಗುತ್ತಿದ್ದು, ಭೀಕರ ಅಪಘಾತ ನೋಡಿದ ನೆಟ್ಟಿಗರು ಆಟಗಾರ ಉಳಿದಿರುವುದೇ ಪುಣ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ರಿಷಭ್​ ಪಂತ್​ ಅವರಿಗೂ ಕೂಡ ಹೀಗೆ ಅಪಘಾತಕ್ಕೀಡಾಗಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ ಕ್ರಿಕೆಟ್ ಟ್ರೋಫಿಯಲ್ಲಿ ತಿರಿಮನ್ನೆ ನ್ಯೂಯಾರ್ಕ್ ಸೂಪರ್‌ಸ್ಟಾರ್ ಸ್ಟ್ರೈಕರ್ಸ್ ಪರ ಆಡುತ್ತಿದ್ದಾರೆ. ಸೂಪರ್‌ಸ್ಟಾರ್ ಸ್ಟ್ರೈಕರ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಿರಿಮನ್ನೆ ಅವರು ಸುರಕ್ಷಿತವಾಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​​ ಕ್ರಿಕೆಟರ್​​​​ ಚಲಿಸುತ್ತಿದ್ದ ಕಾರ್​ಗೆ ಭೀಕರ ಅಪಘಾತ; ಆಸ್ಪತ್ರೆಗೆ ದಾಖಲು!

https://newsfirstlive.com/wp-content/uploads/2024/03/lahiru.jpg

    ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದ ಘಟನೆ

    ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು

    ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಲಹಿರು ತಿರಿಮನ್ನೆ

ಶ್ರೀಲಂಕಾದ ಮಾಜಿ ಸ್ಟಾರ್​ ಆಟಗಾರ ಲಹಿರು ತಿರಿಮನ್ನೆ ಕಾರು ಅಪಘಾತಕ್ಕೀಡಾಗಿದ ಘಟನೆ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಗಾಯಗೊಂಡ ಲಹಿರು ತಿರಿಮನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ತುಕಾಲಿ ಸಂತೋಷ್​ ಕಾರಿಗೆ ಡಿಕ್ಕಿ ಹೊಡೆದ ಪ್ರಕರಣ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ಎದುರಿನಿಂದ ಬರುತ್ತಿದ್ದ ಲಹಿರು ತಿರಿಮನ್ನೆ ಕುಳಿತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಮುಂಭಾಗ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಅದೃಷ್ಟವಶಾತ್​ ಈ ಅಪಘಾತದಲ್ಲಿ ಲಹಿರು ತಿರಿಮನ್ನೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಸಣ್ಣ ಪುಟ್ಟ ಗಾಯಗಳಾದ ಲಹಿರು ತಿರಿಮನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾರು ಅಪಘಾತದ ಫೋಟೋಗಳು ವೈರಲ್​ ಆಗುತ್ತಿದ್ದು, ಭೀಕರ ಅಪಘಾತ ನೋಡಿದ ನೆಟ್ಟಿಗರು ಆಟಗಾರ ಉಳಿದಿರುವುದೇ ಪುಣ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ರಿಷಭ್​ ಪಂತ್​ ಅವರಿಗೂ ಕೂಡ ಹೀಗೆ ಅಪಘಾತಕ್ಕೀಡಾಗಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ ಕ್ರಿಕೆಟ್ ಟ್ರೋಫಿಯಲ್ಲಿ ತಿರಿಮನ್ನೆ ನ್ಯೂಯಾರ್ಕ್ ಸೂಪರ್‌ಸ್ಟಾರ್ ಸ್ಟ್ರೈಕರ್ಸ್ ಪರ ಆಡುತ್ತಿದ್ದಾರೆ. ಸೂಪರ್‌ಸ್ಟಾರ್ ಸ್ಟ್ರೈಕರ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಿರಿಮನ್ನೆ ಅವರು ಸುರಕ್ಷಿತವಾಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More