/newsfirstlive-kannada/media/post_attachments/wp-content/uploads/2025/04/sri-raghavendra-mahathme-1.jpg)
ಶ್ರೀ ರಾಘವೇಂದ್ರ ಮಹಾತ್ಮೆ.. ರಾಯರ ಪವಾಡಗಳ ಕಥೆ ಹೇಳುವಂತಹ ಅದ್ಭುತವಾದ ಧಾರಾವಾಹಿ. ಜೀ ವಾಹಿನಿಯ ಕನಸಿನ ಕೂಸು ಈ ಪ್ರಾಜೆಕ್ಟ್. ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ, ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರು ಸಾರ್ವಭೌಮರ ಕತೆಯಾಗಿದೆ.
ಅಣ್ಣಯ್ಯ ಧಾರಾವಾಹಿ ಲಾಂಚಿಂಗ್ ಟೈಮ್ನಲ್ಲೇ ವಾಹಿನಿ ರಾಯರ ಕುರಿತಾದ ಧಾರಾವಾಹಿ ಬಗ್ಗೆ ಮಾಹಿತಿ ನೀಡಿತ್ತು. ವರ್ಷದಿಂದ ಈ ಪ್ರಾಜೆಕ್ಟ್ಗೆ ಕೆಲಸ ನಡಿತಿದೆ.
ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
ಪ್ರತಿ ಗುರುವಾರ ಚಿಕ್ಕ ಚಿಕ್ಕ ಟೀಸರ್ ಬಿಡುಗಡೆ ಮಾಡ್ತಾ ಬಂದಿತ್ತು ತಂಡ. ಯಾವಾಗ ಬರುತ್ತೆ ಧಾರಾವಾಹಿ? ವರ್ಷ ಉರಳಿದ್ರು ಪ್ರೋಮೋನೇ ಬಿಟ್ಟಿಲ್ವಲ್ಲಾ ಅಂತ ಅಭಿಮಾನಿಗಳು ಕಾಯ್ತಾ ಇದ್ರು. ಈಗ ಅದಕ್ಕೆ ಕಾಲ ಕೂಡಿಬಂದಿದೆ.
ಸಿನಿಮಾ ಟ್ರೈಲರ್ ಮಾದರಿಯಲ್ಲಿ ಪ್ರೋಮೋವನ್ನು ರಿಲೀಸ್ ಮಾಡಿದೆ ವಾಹಿನಿ. ಟ್ರೇಲರ್ ನೋಡಿದ್ರೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವಂತಿದೆ. ರಾಯರ ಭಕ್ತರಿಗೆ ಆರಾಧಕರಿಗೆ ಅದ್ಭುತ ಅನುಭವ ನೀಡೋದರಲ್ಲಿ ಯಾವುದೇ ಅನುಮಾನ ಇಲ್ಲ.
ವಿಶೇಷ ಅಂದ್ರೇ ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ರಾಯರ ಪಾತ್ರ ಮಾಡಿದ್ದ ನಟ ಪರೀಕ್ಷಿತ್ ಜೀ ಧಾರಾವಾಹಿಯಲ್ಲೂ ಮುಂದುವರೆಯುತ್ತಿದ್ದಾರೆ.
ರಾಯರ ಪಾತ್ರದಲ್ಲಿ ಅಲ್ಲ, ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಧಾರಾವಾಹಿ ತೆರೆಗೆ ಬರಲಿದೆ ಗುರುರಾಯರ ಪಾತ್ರ ಯಾರು ಮಾಡ್ತಾರೆ ಅನ್ನೋದು ಸದ್ಯದ ಕೂತುಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ