/newsfirstlive-kannada/media/post_attachments/wp-content/uploads/2025/04/sri-raghavendra-mahathme-1.jpg)
ಶ್ರೀ ರಾಘವೇಂದ್ರ ಮಹಾತ್ಮೆ.. ರಾಯರ ಪವಾಡಗಳ ಕಥೆ ಹೇಳುವಂತಹ ಅದ್ಭುತವಾದ ಧಾರಾವಾಹಿ. ಜೀ ವಾಹಿನಿಯ ಕನಸಿನ ಕೂಸು ಈ ಪ್ರಾಜೆಕ್ಟ್​. ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ, ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರು ಸಾರ್ವಭೌಮರ ಕತೆಯಾಗಿದೆ.
/newsfirstlive-kannada/media/post_attachments/wp-content/uploads/2025/04/sri-raghavendra-mahathme4.jpg)
ಅಣ್ಣಯ್ಯ ಧಾರಾವಾಹಿ ಲಾಂಚಿಂಗ್​ ಟೈಮ್​ನಲ್ಲೇ ವಾಹಿನಿ ರಾಯರ ಕುರಿತಾದ ಧಾರಾವಾಹಿ ಬಗ್ಗೆ ಮಾಹಿತಿ ನೀಡಿತ್ತು. ವರ್ಷದಿಂದ ಈ ಪ್ರಾಜೆಕ್ಟ್​​ಗೆ ಕೆಲಸ ನಡಿತಿದೆ.
ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
ಪ್ರತಿ ಗುರುವಾರ ಚಿಕ್ಕ ಚಿಕ್ಕ ಟೀಸರ್​ ಬಿಡುಗಡೆ ಮಾಡ್ತಾ ಬಂದಿತ್ತು ತಂಡ. ಯಾವಾಗ ಬರುತ್ತೆ ಧಾರಾವಾಹಿ? ವರ್ಷ ಉರಳಿದ್ರು ಪ್ರೋಮೋನೇ ಬಿಟ್ಟಿಲ್ವಲ್ಲಾ ಅಂತ ಅಭಿಮಾನಿಗಳು ಕಾಯ್ತಾ ಇದ್ರು. ಈಗ ಅದಕ್ಕೆ ಕಾಲ ಕೂಡಿಬಂದಿದೆ.
/newsfirstlive-kannada/media/post_attachments/wp-content/uploads/2025/04/sri-raghavendra-mahathme1.jpg)
ಸಿನಿಮಾ ಟ್ರೈಲರ್ ಮಾದರಿಯಲ್ಲಿ ಪ್ರೋಮೋವನ್ನು ರಿಲೀಸ್ ಮಾಡಿದೆ ವಾಹಿನಿ. ಟ್ರೇಲರ್​ ನೋಡಿದ್ರೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವಂತಿದೆ. ರಾಯರ ಭಕ್ತರಿಗೆ ಆರಾಧಕರಿಗೆ ಅದ್ಭುತ ಅನುಭವ ನೀಡೋದರಲ್ಲಿ ಯಾವುದೇ ಅನುಮಾನ ಇಲ್ಲ.
/newsfirstlive-kannada/media/post_attachments/wp-content/uploads/2025/04/sri-raghavendra-mahathme2.jpg)
ವಿಶೇಷ ಅಂದ್ರೇ ದಶಕಗಳ ಹಿಂದೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ರಾಯರ ಪಾತ್ರ ಮಾಡಿದ್ದ ನಟ ಪರೀಕ್ಷಿತ್​ ಜೀ ಧಾರಾವಾಹಿಯಲ್ಲೂ ಮುಂದುವರೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/04/sri-raghavendra-mahathme3.jpg)
ರಾಯರ ಪಾತ್ರದಲ್ಲಿ ಅಲ್ಲ, ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಧಾರಾವಾಹಿ ತೆರೆಗೆ ಬರಲಿದೆ ಗುರುರಾಯರ ಪಾತ್ರ ಯಾರು ಮಾಡ್ತಾರೆ ಅನ್ನೋದು ಸದ್ಯದ ಕೂತುಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us