/newsfirstlive-kannada/media/post_attachments/wp-content/uploads/2025/06/RAVI-SHANKAR-GURUJI.jpg)
ಎಲ್ಲ ಅಭಿವೃದ್ಧಿಯ ಉದ್ದೇಶ ಜೀವನವನ್ನು ಬೆಂಬಲಿಸುವುದು ಮತ್ತು ಉಳಿಸಿಕೊಳ್ಳುವುದಾಗಿರಬೇಕು. ಅಭಿವೃದ್ಧಿ ಅನಿವಾರ್ಯ, ಆದರೆ ದೂರದೃಷ್ಟಿಯಿಲ್ಲದ ಅಭಿವೃದ್ಧಿ ವಿನಾಶಕ್ಕೆ ದಾರಿ ತೋರಿಸುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರೂ, ಜಾಗತಿಕ ಆಧ್ಯಾತ್ಮಿಕ ಗುರುಗಳಾಗಿರುವ ಶ್ರೀ ಶ್ರೀ ರವಿಶಂಕರ ಗುರೂಜಿ ಕಳವಳ ವ್ಯಕ್ತಪಡಿಸಿದ್ದಾರೆ.
ರವಿಶಂಕರ ಗುರೂಜಿ ಹೇಳಿದ್ದೇನು..?
ಎಲ್ಲಾ ರೂಪದ ಜೀವಿಗಳನ್ನು ಗೌರವಿಸದ ಅಭಿವೃದ್ಧಿಯು ನಿಜವಾದ ಅಭಿವೃದ್ಧಿಯಲ್ಲ. ಪ್ರಕೃತಿಯ ಮೇಲಿನ ಕಾಳಜಿ ಮತ್ತು ಸಹಾನುಭೂತಿ ಅಭಿವೃದ್ಧಿಯ ದೃಷ್ಟಿಕೋನದ ಭಾಗವಾಗಬೇಕು. ಆಗ ಮಾತ್ರ ಪ್ರಗತಿ ಸಮಗ್ರವಾಗಿಯೂ ಸಮಾನವಾಗಿ ಎಲ್ಲರ ಪಾಲಾಗಿಯೂ ನಡೆಯುತ್ತದೆ. ಐತಿಹಾಸಿಕವಾಗಿ, ಅನೇಕ ಪ್ರಾಚೀನ ಸಂಸ್ಕೃತಿಗಳಲ್ಲಿ ಪ್ರಕೃತಿಯನ್ನು ಆರಾಧಿಸುತ್ತಿದ್ದರು. ಪ್ರಕೃತಿಯನ್ನು ನಮ್ಮಿಂದ ಪ್ರತ್ಯೇಕವೆಂದು ಎಂದೂ ಪರಿಗಣಿಸಲಾಗುತ್ತಿರಲಿಲ್ಲ. ನದಿಗಳು, ಪರ್ವತಗಳು, ಮರಗಳು, ಗಾಳಿ, ಸೂರ್ಯ ಮತ್ತು ಚಂದ್ರ ಇವುಗಳನ್ನು ಆಳವಾದ ನಂಟಿನಿಂದ ಪೂಜಿಸಲಾಗುತ್ತಿತ್ತು. ಈ ಗೌರವ ಕಳೆದುಹೋದಾಗಲೇ ಶೋಷಣೆ ಆರಂಭವಾಗುತ್ತದೆ.
ಇದನ್ನೂ ಓದಿ: ಆರ್ಸಿಬಿ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯವೂ ಕಾರಣ.. ಆರ್ಸಿಬಿ ಮಾಡಿದ 8 ತಪ್ಪುಗಳು..!
ನಿಜವಾಗಿ, ಮಾನವನ ದುರಾಸೆಯೇ ಭೂಮಿಗೆ ಹೆಚ್ಚಿನ ಹಾನಿ ತಂದಿದೆ. ದುರಾಸೆ ಮನುಷ್ಯನನ್ನು ಪರಿಸರದ ಬಗ್ಗೆ ಅಸಂವೇದನಾಶೀಲನನ್ನಾಗಿ ಮಾಡುತ್ತದೆ. ಕ್ಷಣಿಕ ಲಾಭಗಳಿಗಾಗಿ ದುರಾಸೆಗೆ ಒಳಗಾದಾಗ, ಪರಿಸರದ ಬಗ್ಗೆ ಕಾಳಜಿ ಮತ್ತು ಸಂರಕ್ಷಣೆ ಹಿಂದಕ್ಕೆ ಸಳೆಯುತ್ತವೆ. ದುರಾಸೆಯಿಂದ ತುಂಬಿರುವ ಮನಸ್ಸು ಭೂಮಿಯೊಂದಿಗೆ ಮತ್ತು ಜೀವಿಯೊಂದಿಗೆ ತನ್ನ ನಂಟನ್ನು ಕಳೆದುಕೊಳ್ಳುತ್ತದೆ.
ದುರಾಸೆ, ಅಸಂವೇದನಾಶೀಲತೆ ಮತ್ತು ಅತಿಯಾದ ಗ್ರಾಹಕ ಮನೋಭಾವನೆ ಇವುಗಳಿಂದ ಪರಿಸರ ಹಾಳಾಗುತ್ತಿದೆ. ಇವುಗಳನ್ನು ಮೀರಿ ಹೋಗಲು ನಾವು ನಮ್ಮೊಳಗೆ ನೋಡಬೇಕು. ಒತ್ತಡ ಮತ್ತು ಹಿಂಸೆಯಿಂದ ತುಂಬಿರುವ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ಒತ್ತಡ, ಆಕ್ರಮಣ ಮತ್ತು ಪೂರ್ವಗ್ರಹಗಳಿಂದ ತುಂಬಿರುವ ಮನಸ್ಸು ಪರಿಸರದ ಬಗ್ಗೆ ಕಾಳಜಿ ವಹಿಸಲು ಅಸಾಧ್ಯ. ಆದರೆ ಶಾಂತಿ ಮತ್ತು ತೃಪ್ತಿಯಿಂದ ತುಂಬಿರುವ ಹೃದಯವು ಸಹಜವಾಗಿ ಬಾಹ್ಯಜಗತ್ತನ್ನು ಪ್ರೀತಿಯಿಂದ ನೋಡುತ್ತದೆ.
ಅಂತರ್ಮೌನ ಎಂದರೆ ದೂರ ಉಳಿಯುವುದು ಅಲ್ಲ
ಅಂತರ್ಮೌನ ಎಂದರೆ ದೂರ ಉಳಿಯುವುದು ಅಲ್ಲ; ಅದು ಬದುಕಿನೊಂದಿಗೆ ಇನ್ನಷ್ಟು ಆಳವಾದ ನಂಟನ್ನು ತರುತ್ತದೆ. ಈ ಗೌರವವನ್ನು ಮತ್ತೆ ಬೆಳೆಸಬೇಕಾಗಿದೆ. ನೀವು ನದಿಯನ್ನು ಪವಿತ್ರವೆಂದು ಕಂಡರೆ, ಅದನ್ನು ಮಾಲಿನ್ಯಗೊಳಿಸಲಾರಿರಿ. ನೀವು ಮರವನ್ನು ಪವಿತ್ರವೆಂದು ಭಾವಿಸಿದರೆ, ಅದನ್ನು ಕಡಿಯಲಾರಿರಿ. ನೀವು ಯಾವುದನ್ನೇ ಪವಿತ್ರವೆಂದು ಪರಿಗಣಿಸುತ್ತೀರೋ, ಅದನ್ನು ನಿಮ್ಮ ಜೀವದಿಂದಲೂ ರಕ್ಷಿಸುತ್ತೀರಿ. ಪವಿತ್ರವೆನಿಸಿದ್ದನ್ನು ನೀವು ನಾಶಮಾಡಲಾರಿರಿ. ಪವಿತ್ರವೆಂದು ಭಾಸವಾಗುವುದನ್ನು ಹೆಚ್ಚಿನ ಜಾಗೃತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತೀರಿ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ನಂತರ ಮೋದಿ ಫಸ್ಟ್ ಟೈಂ ಕಾಶ್ಮೀರ ಭೇಟಿ.. ಕಣಿವೆ ನಾಡಿನಲ್ಲಿ ನಾಳೆ ಪ್ರಮುಖ 6 ಬೆಳವಣಿಗೆಗಳು..!
ಈ ಜಾಗೃತಿಯ ಕೊರತೆಯಿಂದಲೇ, ಕಡಿಮೆ ಸಮಯದ ಲಾಭಕ್ಕಾಗಿ ವ್ಯಾಪಕ ಅರಣ್ಯ ನಾಶವಾಗಿದೆ. ಮರಗಳು ಕೇವಲ ಪರಿಸರದ ಭಾಗವಲ್ಲ, ಅವು ನಮ್ಮ ವಿಸ್ತರಿತ ಶ್ವಾಸಕೋಶಗಳೆ. ಅವುಗಳಿಗೆ ಹಾನಿ ಮಾಡುವುದರಿಂದ, ನಾವು ನಮ್ಮದೇ ಉಸಿರನ್ನು ತಡೆದುಕೊಳ್ಳುತ್ತಿರುವಂತಾಗುತ್ತದೆ. ಆದ್ದರಿಂದ ನಾವು ಎಲ್ಲರಿಗೂ ಹೆಚ್ಚು ಗಿಡಗಳನ್ನು ನೆಡುವಂತೆ ಪ್ರೋತ್ಸಾಹಿಸುತ್ತೇವೆ. ನಮ್ಮ ಸ್ವಯಂಸೇವಕರು ಜಗತ್ತಾದ್ಯಂತ ಈಗಾಗಲೇ 100 ಮಿಲಿಯನ್ಗಿಂತ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಎಲ್ಲಿಯಾದರೂ ಒಂದು ಮರವನ್ನು ಕಡಿಯಲಾಗಿದ್ದರೆ, ಅದರ ಬದಲಾಗಿ ಐದು ಮರಗಳನ್ನು ನೆಡಬೇಕು.
ನಿಸರ್ಗವು ಸಹಬಾಳ್ವೆಯ ಪಾಠ ಕಲಿಸುತ್ತದೆ..
ನಿಸರ್ಗವು ಸಹಬಾಳ್ವೆಯ ಪಾಠ ಕಲಿಸುತ್ತದೆ. ಅರಣ್ಯದಲ್ಲಿ ಯಾವುದೇ ತ್ಯಾಜ್ಯವಿಲ್ಲ. ಎಲ್ಲವೂ ಮರುಬಳಕೆಯಾಗುತ್ತದೆ, ಪುನಃ ಜನ್ಮ ತಾಳುತ್ತದೆ. ಪ್ರಾಣಿ ಮತ್ತು ಅದರ ಆಹಾರದ ನಡುವೆಯೂ ಸಹಜ ಸಮತೋಲನವಿದೆ. ಜೇನುಹುಳು ಅಥವಾ ಮಣ್ಣಿನ ಹುಳುವನ್ನು ನೋಡಿ — ತ್ಯಾಜ್ಯವನ್ನು ಜೀರ್ಣಿಸಿ, ಉಪಯುಕ್ತವಾಗುವಷ್ಟು ಸರಳವಾಗಿ ಮರುಪೂರಕ ಜೀವಿಯನ್ನಾಗಿ ಪರಿಣಮಿಸುತ್ತದೆ.
ಇದನ್ನೂ ಓದಿ: ಆರ್ಸಿಬಿಗೆ ಸಂಕಷ್ಟಗಳು ಹೆಚ್ಚಾಗಲಿವೆ.. ಹೈಕೋರ್ಟ್ ಕಟಕಟೆಯಲ್ಲಿ ಇಂದು ಏನಾಯ್ತು..?
ಅದೆಯೇ ರೀತಿಯಲ್ಲಿ, ನಾಗರಿಕ ಸಮಾಜವಾಗಿ ನಾವು ತ್ಯಾಜ್ಯ ಮರುಬಳಕೆಗೆ ನವಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ನಮ್ಮ ಬೇರುಗಳಿಗೆ ಹಿಂದಿರುಗಬೇಕು. ಪ್ರಾಚೀನ ವೇದಕಾಲದ ಕೃಷಿ ತಂತ್ರಗಳು — ಇಂದಿನ "ಸಹಜ ಕೃಷಿ" ಎಂಬ ಹೆಸರು ಪಡೆದಿರುವವು — ತ್ಯಾಜ್ಯವನ್ನು ಗೊಬ್ಬರ ಹಾಗೂ ಇತರ ಕೃಷಿ ಪದಾರ್ಥಗಳಾಗಿ ಪರಿವರ್ತಿಸುತ್ತವೆ. ಉದಾಹರಣೆಗೆ, ಹೊಲದಲ್ಲಿ ಜೇನು ಅಥವಾ ಹುಲ್ಲನ್ನು ಸುಡುವ ಬದಲು, ಅದನ್ನು ಮುಚ್ಚಳವಾಗಿ ಬಳಸುವುದು. ಇದು ರೈತನ ಹಣ ಉಳಿಸುತ್ತದೆ, ಉತ್ತಮ ಇಳುವರಿ ನೀಡುತ್ತದೆ ಮತ್ತು ಪರಿಸರಕ್ಕೂ ಒಳ್ಳೆಯದು.
ನಮ್ಮ ಜೀವನದ ಸರಾಸರಿ ಅವಧಿ ಕೇವಲ 80-90 ವರ್ಷಗಳಷ್ಟೆ. ಈ ಜೀವನದಲ್ಲಿ ನಾವು ಭೂಮಿಯನ್ನು ಎಷ್ಟು ಶೋಷಿಸುತ್ತೇವೆ ಮತ್ತು ಎಷ್ಟು ಉಳಿಸುತ್ತೇವೆ ಎಂಬುದನ್ನು ಗಮನಿಸಬೇಕು. ನಾವು ಈ ಭೂಮಿಯನ್ನು ಕೇವಲ ತನ್ನ ಸಂಪತ್ತು ತೆಗೆದುಕೊಳ್ಳಲು ಬಳಸಬೇಕೆ, ಅಥವಾ ಅದನ್ನು ಉಳಿಸಲು ಕೊಡುಗೆ ನೀಡಬೇಕೆ ಎಂಬ ಪ್ರಶ್ನೆಯನ್ನು ನಾವು ನಮ್ಮದೇ ಮನಸ್ಸಿನಲ್ಲಿ ಕೇಳಿಕೊಳ್ಳಬೇಕು.
ಇದನ್ನೂ ಓದಿ: ವಯಸ್ಸು 50 ಆದರೆ ಏನಂತೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿವಾದಿತ ಸಂಸದೆ ಮೌಹಾ ಮೊಯಿತ್ರಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ