newsfirstkannada.com

ಶ್ರೀಲಂಕಾ ಸೀತಾಮಾತೆ ದೇವಸ್ಥಾನದಲ್ಲಿ ಐತಿಹಾಸಿಕ ಕುಂಭಾಭಿಷೇಕ; ಶ್ರೀ ಶ್ರೀ ರವಿಶಂಕರ್‌ ಗುರೂಜಿ ಭಾಗಿ

Share :

Published May 22, 2024 at 8:06pm

Update May 22, 2024 at 8:14pm

    ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರಿಗೆ ಶ್ರೀಲಂಕಾ ಸರ್ಕಾರದಿಂದ ಆಹ್ವಾನ

    ಸೀತಾಮಾತೆ ಕುಂಭಾಭಿಷೇಕಕ್ಕೆ ಅಯೋಧ್ಯೆ ಸರಯು ನದಿಯ ಪವಿತ್ರ ನೀರು

    ಭಾರತ, ಶ್ರೀಲಂಕಾ ಹಾಗೂ ನೇಪಾಳದ ಹಲವಾರು ಭಕ್ತರು ಭಾಗವಹಿಸಿದ್ದರು

ಶ್ರೀಲಂಕಾದ ಅಶೋಕ ವಾಟಿಕಾದಲ್ಲಿರುವ ಸೀತಾಮಾತೆಯ ದೇವಾಲಯದಲ್ಲಿ ಐತಿಹಾಸಿಕ ಕುಂಭಾಭಿಷೇಕ ನಡೆಯಿತು. ಶ್ರೀಲಂಕಾ ಸರ್ಕಾರದ ಆಹ್ವಾನದ ಮೇರೆಗೆ ಸೀತಾ ಏಲಿಯಾ ಎಂಬ ಗ್ರಾಮಕ್ಕೆ ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥರು ಜಾಗತಿಕ ಶಾಂತಿದೂತರೂ ಹಾಗೂ ಮಾನವತಾವಾದಿಗಳೂ ಆಗಿರುವ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು ಭೇಟಿ ನೀಡಿ ಕುಂಭಾಭಿಷೇಕವನ್ನು ನೆರವೇರಿಸಿದರು. ಭಾರತ, ಶ್ರೀಲಂಕಾ ಹಾಗೂ ನೇಪಾಳದ ಹಲವಾರು ಭಕ್ತರು ಈ ಕುಂಭಾಭಿಷೇಕದಲ್ಲಿ ಭಾಗವಹಿಸಿದ್ದರು.

ಈ ಬೃಹತ್ ಸಮಾವೇಶವು ಭಾರತ ಹಾಗೂ ಶ್ರೀಲಂಕಾದ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ದೃಢೀಕರಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮಾತನಾಡಿ, ಸೀತಾಮಾತೆಯು ಕರುಣೆ, ಮಾತೃತ್ವ ಹಾಗೂ ಸಹಿಷ್ಣುತೆ ಗುಣಗಳ ಸಾಕಾರ ರೂಪ ಎಂದರು. ಈ ಸಂದರ್ಭದಲ್ಲಿ ಅಯೋಧ್ಯೆಯಿಂದ ಸರಯು ನದಿಯ ಪವಿತ್ರ ನೀರನ್ನು ಕಳುಹಿಸಿಕೊಡಲಾಗಿತ್ತು.

ಇದೇ ಸ್ಥಳದಲ್ಲಿಯೇ ಹನುಮಂತನು ಸೀತಾ ಮಾತೆಯ ಮೊದಲ ದರ್ಶನವನ್ನು ಪಡೆದಿದ್ದ. ಆಗ ಸೀತಾ ಮಾತೆಗೆ ಮತ್ತೆ ಶ್ರೀರಾಮನೊಡನೆ ಮಿಲನವಾಗುವ ಭರವಸೆ ಹುಟ್ಟಿತು. ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯಿಂದ, ಭಗವಾನ್ ರಾಮನ ಜನ್ಮಸ್ಥಾನವಾದ ಅಯೋಧ್ಯೆಯಿಂದ ಮತ್ತು ಹನುಮಂತನ ಜನ್ಮಸ್ಥಾನವಾದ ಕರ್ನಾಟಕದ ಕಿಷ್ಕಿಂಧೆಯಿಂದ ಬಂದಿದ್ದ ಉಡುಗೊರೆಗಳನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದರು.

ಇದನ್ನೂ ಓದಿ: ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ; ಅಮೆರಿಕದಲ್ಲಿ ನಡೆದ ಕಲರ್‌ಫುಲ್ ಕಾರ್ಯಕ್ರಮದ ಟಾಪ್ 10 ಫೋಟೋ ಇಲ್ಲಿವೆ

ನಮ್ಮ ಪ್ರಾಚೀನ ನಾಗರಿಕತೆಗಳ ಸಂಬಂಧವನ್ನು ಇದು ದೃಢೀಕರಿಸುತ್ತದೆ. ಈಗ ನಶಿಸಿ ಹೋಗುತ್ತಿರುವ ಆ ಮೌಲ್ಯಗಳನ್ನೆಲ್ಲಾ ಮತ್ತೆ ತರಬೇಕಾಗಿದೆ. ರಾಮರಾಜ್ಯವೆಂದರೆ ಪ್ರಕೃತಿಗೆ ಅನುಗುಣವಾಗಿ ನಾವು ಜೀವಿಸುವ ಜೀವನ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷದಿಂದ ನಡೆಸುವಂತಹ ಜೀವನ. ಈ ಸ್ಥಳವು ಜಗತ್ತಿನಾದ್ಯಂತದ ಮಹಿಳೆಯರಿಗೆ ಸಂಕಷ್ಟಗಳಿಂದ ಮುಕ್ತವಾಗುವಂತಹ ಜೀವನದ ಆಶಾಕಿರಣವನ್ನು ಮೂಡಿಸಲಿ, ನ್ಯಾಯಯುತವಾದ ಹಾಗೂ ಸಮೃದ್ಧ ಸಮಾಜದ ಆಶಾಕಿರಣವನ್ನು ಮೂಡಿಸಲಿ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಅಂಬ್ಯಾಸಡರ್ಸ್ ಫೋರಂನ ವತಿಯಿಂದ ಜೀವಮಾನಸಾಧನೆಯ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವಶಾಂತಿ ಹಾಗೂ ಮಾನವತೆಯ ಉದ್ಧಾರಕ್ಕಾಗಿ ನಿಮ್ಮ ಇಡೀ ಜೀವನವನ್ನೇ ಬದ್ಧರಾಗಿರಿಸಿದ್ದೀರಿ. ಶ್ರೀಲಂಕಾ ಜನತೆಯು ಎದುರಿಸುತ್ತಿರುವ ಸವಾಲಿನ ಸಮಯವನ್ನು ದಾಟುವ ಧೈರ್ಯ ಹಾಗೂ ಬಲ ನಿಮ್ಮ ಭೇಟಿಯಿಂದ ದೊರೆತಂತಾಗಿದೆ ಎಂದು ಪ್ರಶಸ್ತಿಯಲ್ಲಿ ಬರೆಯಲಾಗಿದೆ.

ಮೇ 18ರಂದು ಬಂಢಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಶ್ರೀಲಂಕಾದ ರಾಜ್ಯಮಂತ್ರಿಗಳಾದ ಶ್ರೀ ಪ್ರೇಮಿತ ಬಂಡಾರ ತೆನ್ನಕೂನ್ ಅವರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀಲಂಕಾ ಪ್ರಧಾನಮಂತ್ರಿಗಳಾದ ಶ್ರೀ ದಿನೇಶ್ ಗುಣವರ್ಧನೆಯವರ ಸ್ನೇಹದ ಆಹ್ವಾನದ ಮೇರೆಗೆ ಗುರೂಜಿ ಅವರು ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದರು.

ಶ್ರೀಲಂಕಾದಾದ್ಯಂತ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 12 ಕುಶಲತಾ ಅಭಿವೃದ್ಧಿ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಕೇಂದ್ರಗಳಲ್ಲಿ 5000 ಯುವಕರಿಗೆ ಕುಶಲತೆಗಳಲ್ಲಿ ತರಬೇತಿ ನೀಡಿ, ಅವರಿಗೆ ಉದ್ಯೋಗವನ್ನು ಪಡೆಯುವ  ಅರ್ಹತೆಯನ್ನು ಕಲ್ಪಿಸಿಕೊಡಲಾಗುತ್ತದೆ.

ಆರ್ಟ್ ಆಫ್ ಲಿವಿಂಗ್ ಮತ್ತು ಶ್ರೀಲಂಕಾದ ತಾಂತ್ರಿಕ ಶಿಕ್ಷಣ ಇಲಾಖೆಯು ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಂಡವು. ಇದರಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ದಿಮೆತನ ಹಾಗೂ ನಾಯಕತ್ವದಲ್ಲಿ ತರಬೇತಿಯನ್ನು ನೀಡಲು ಮತ್ತು ಶಿಕ್ಷಕರಿಗೂ ತರಬೇತಿಯನ್ನು ನೀಡುವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇದರೊಡನೆ ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಗಂಫಹ ವಿಕ್ರಮಮಾರಚ್ಚಿ ವಿಶ್ವವಿದ್ಯಾಲಯದೊಡನೆ ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಸಂಶೋಧನೆ ಹಾಗೂ ನವೀನ ಆವಿಷ್ಕಾರದ ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡುವ ಒಡಂಬಡಿಕೆ ಇದಾಗಿದೆ. ಈ ವಿಶ್ವವಿದ್ಯಾಲಯವು ಶ್ರೀಲಂಕಾದಲ್ಲಿ ಯೋಗದ ಪದವಿಯನ್ನು ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲಂಕಾ ಸೀತಾಮಾತೆ ದೇವಸ್ಥಾನದಲ್ಲಿ ಐತಿಹಾಸಿಕ ಕುಂಭಾಭಿಷೇಕ; ಶ್ರೀ ಶ್ರೀ ರವಿಶಂಕರ್‌ ಗುರೂಜಿ ಭಾಗಿ

https://newsfirstlive.com/wp-content/uploads/2024/05/Ravishankar-Guruji.jpg

    ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರಿಗೆ ಶ್ರೀಲಂಕಾ ಸರ್ಕಾರದಿಂದ ಆಹ್ವಾನ

    ಸೀತಾಮಾತೆ ಕುಂಭಾಭಿಷೇಕಕ್ಕೆ ಅಯೋಧ್ಯೆ ಸರಯು ನದಿಯ ಪವಿತ್ರ ನೀರು

    ಭಾರತ, ಶ್ರೀಲಂಕಾ ಹಾಗೂ ನೇಪಾಳದ ಹಲವಾರು ಭಕ್ತರು ಭಾಗವಹಿಸಿದ್ದರು

ಶ್ರೀಲಂಕಾದ ಅಶೋಕ ವಾಟಿಕಾದಲ್ಲಿರುವ ಸೀತಾಮಾತೆಯ ದೇವಾಲಯದಲ್ಲಿ ಐತಿಹಾಸಿಕ ಕುಂಭಾಭಿಷೇಕ ನಡೆಯಿತು. ಶ್ರೀಲಂಕಾ ಸರ್ಕಾರದ ಆಹ್ವಾನದ ಮೇರೆಗೆ ಸೀತಾ ಏಲಿಯಾ ಎಂಬ ಗ್ರಾಮಕ್ಕೆ ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥರು ಜಾಗತಿಕ ಶಾಂತಿದೂತರೂ ಹಾಗೂ ಮಾನವತಾವಾದಿಗಳೂ ಆಗಿರುವ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು ಭೇಟಿ ನೀಡಿ ಕುಂಭಾಭಿಷೇಕವನ್ನು ನೆರವೇರಿಸಿದರು. ಭಾರತ, ಶ್ರೀಲಂಕಾ ಹಾಗೂ ನೇಪಾಳದ ಹಲವಾರು ಭಕ್ತರು ಈ ಕುಂಭಾಭಿಷೇಕದಲ್ಲಿ ಭಾಗವಹಿಸಿದ್ದರು.

ಈ ಬೃಹತ್ ಸಮಾವೇಶವು ಭಾರತ ಹಾಗೂ ಶ್ರೀಲಂಕಾದ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ದೃಢೀಕರಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮಾತನಾಡಿ, ಸೀತಾಮಾತೆಯು ಕರುಣೆ, ಮಾತೃತ್ವ ಹಾಗೂ ಸಹಿಷ್ಣುತೆ ಗುಣಗಳ ಸಾಕಾರ ರೂಪ ಎಂದರು. ಈ ಸಂದರ್ಭದಲ್ಲಿ ಅಯೋಧ್ಯೆಯಿಂದ ಸರಯು ನದಿಯ ಪವಿತ್ರ ನೀರನ್ನು ಕಳುಹಿಸಿಕೊಡಲಾಗಿತ್ತು.

ಇದೇ ಸ್ಥಳದಲ್ಲಿಯೇ ಹನುಮಂತನು ಸೀತಾ ಮಾತೆಯ ಮೊದಲ ದರ್ಶನವನ್ನು ಪಡೆದಿದ್ದ. ಆಗ ಸೀತಾ ಮಾತೆಗೆ ಮತ್ತೆ ಶ್ರೀರಾಮನೊಡನೆ ಮಿಲನವಾಗುವ ಭರವಸೆ ಹುಟ್ಟಿತು. ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯಿಂದ, ಭಗವಾನ್ ರಾಮನ ಜನ್ಮಸ್ಥಾನವಾದ ಅಯೋಧ್ಯೆಯಿಂದ ಮತ್ತು ಹನುಮಂತನ ಜನ್ಮಸ್ಥಾನವಾದ ಕರ್ನಾಟಕದ ಕಿಷ್ಕಿಂಧೆಯಿಂದ ಬಂದಿದ್ದ ಉಡುಗೊರೆಗಳನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದರು.

ಇದನ್ನೂ ಓದಿ: ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ; ಅಮೆರಿಕದಲ್ಲಿ ನಡೆದ ಕಲರ್‌ಫುಲ್ ಕಾರ್ಯಕ್ರಮದ ಟಾಪ್ 10 ಫೋಟೋ ಇಲ್ಲಿವೆ

ನಮ್ಮ ಪ್ರಾಚೀನ ನಾಗರಿಕತೆಗಳ ಸಂಬಂಧವನ್ನು ಇದು ದೃಢೀಕರಿಸುತ್ತದೆ. ಈಗ ನಶಿಸಿ ಹೋಗುತ್ತಿರುವ ಆ ಮೌಲ್ಯಗಳನ್ನೆಲ್ಲಾ ಮತ್ತೆ ತರಬೇಕಾಗಿದೆ. ರಾಮರಾಜ್ಯವೆಂದರೆ ಪ್ರಕೃತಿಗೆ ಅನುಗುಣವಾಗಿ ನಾವು ಜೀವಿಸುವ ಜೀವನ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷದಿಂದ ನಡೆಸುವಂತಹ ಜೀವನ. ಈ ಸ್ಥಳವು ಜಗತ್ತಿನಾದ್ಯಂತದ ಮಹಿಳೆಯರಿಗೆ ಸಂಕಷ್ಟಗಳಿಂದ ಮುಕ್ತವಾಗುವಂತಹ ಜೀವನದ ಆಶಾಕಿರಣವನ್ನು ಮೂಡಿಸಲಿ, ನ್ಯಾಯಯುತವಾದ ಹಾಗೂ ಸಮೃದ್ಧ ಸಮಾಜದ ಆಶಾಕಿರಣವನ್ನು ಮೂಡಿಸಲಿ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಅಂಬ್ಯಾಸಡರ್ಸ್ ಫೋರಂನ ವತಿಯಿಂದ ಜೀವಮಾನಸಾಧನೆಯ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವಶಾಂತಿ ಹಾಗೂ ಮಾನವತೆಯ ಉದ್ಧಾರಕ್ಕಾಗಿ ನಿಮ್ಮ ಇಡೀ ಜೀವನವನ್ನೇ ಬದ್ಧರಾಗಿರಿಸಿದ್ದೀರಿ. ಶ್ರೀಲಂಕಾ ಜನತೆಯು ಎದುರಿಸುತ್ತಿರುವ ಸವಾಲಿನ ಸಮಯವನ್ನು ದಾಟುವ ಧೈರ್ಯ ಹಾಗೂ ಬಲ ನಿಮ್ಮ ಭೇಟಿಯಿಂದ ದೊರೆತಂತಾಗಿದೆ ಎಂದು ಪ್ರಶಸ್ತಿಯಲ್ಲಿ ಬರೆಯಲಾಗಿದೆ.

ಮೇ 18ರಂದು ಬಂಢಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಶ್ರೀಲಂಕಾದ ರಾಜ್ಯಮಂತ್ರಿಗಳಾದ ಶ್ರೀ ಪ್ರೇಮಿತ ಬಂಡಾರ ತೆನ್ನಕೂನ್ ಅವರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀಲಂಕಾ ಪ್ರಧಾನಮಂತ್ರಿಗಳಾದ ಶ್ರೀ ದಿನೇಶ್ ಗುಣವರ್ಧನೆಯವರ ಸ್ನೇಹದ ಆಹ್ವಾನದ ಮೇರೆಗೆ ಗುರೂಜಿ ಅವರು ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದರು.

ಶ್ರೀಲಂಕಾದಾದ್ಯಂತ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 12 ಕುಶಲತಾ ಅಭಿವೃದ್ಧಿ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಕೇಂದ್ರಗಳಲ್ಲಿ 5000 ಯುವಕರಿಗೆ ಕುಶಲತೆಗಳಲ್ಲಿ ತರಬೇತಿ ನೀಡಿ, ಅವರಿಗೆ ಉದ್ಯೋಗವನ್ನು ಪಡೆಯುವ  ಅರ್ಹತೆಯನ್ನು ಕಲ್ಪಿಸಿಕೊಡಲಾಗುತ್ತದೆ.

ಆರ್ಟ್ ಆಫ್ ಲಿವಿಂಗ್ ಮತ್ತು ಶ್ರೀಲಂಕಾದ ತಾಂತ್ರಿಕ ಶಿಕ್ಷಣ ಇಲಾಖೆಯು ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಂಡವು. ಇದರಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ದಿಮೆತನ ಹಾಗೂ ನಾಯಕತ್ವದಲ್ಲಿ ತರಬೇತಿಯನ್ನು ನೀಡಲು ಮತ್ತು ಶಿಕ್ಷಕರಿಗೂ ತರಬೇತಿಯನ್ನು ನೀಡುವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇದರೊಡನೆ ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಗಂಫಹ ವಿಕ್ರಮಮಾರಚ್ಚಿ ವಿಶ್ವವಿದ್ಯಾಲಯದೊಡನೆ ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಸಂಶೋಧನೆ ಹಾಗೂ ನವೀನ ಆವಿಷ್ಕಾರದ ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡುವ ಒಡಂಬಡಿಕೆ ಇದಾಗಿದೆ. ಈ ವಿಶ್ವವಿದ್ಯಾಲಯವು ಶ್ರೀಲಂಕಾದಲ್ಲಿ ಯೋಗದ ಪದವಿಯನ್ನು ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More