ನಟಿ ಸುಧಾರಾಣಿ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್; ಮುಕ್ತಾಯದ ಹಂತದಲ್ಲಿ ಇದ್ಯಾ ಶ್ರೀರಸ್ತು ಶುಭಮಸ್ತು!

author-image
Veena Gangani
Updated On
ನಟಿ ಸುಧಾರಾಣಿ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್; ಮುಕ್ತಾಯದ ಹಂತದಲ್ಲಿ ಇದ್ಯಾ ಶ್ರೀರಸ್ತು ಶುಭಮಸ್ತು!
Advertisment
  • ಕೇಕ್​ ಕಟ್​ ಸೀರಿಯಲ್​ ತಂಡ ಸೆಲೆಬ್ರೇಟ್ ಮಾಡಿದ್ದೇಕೆ ಗೊತ್ತಾ?
  • ಎಲ್ಲವನ್ನೂ ಮರೆತು ಮತ್ತೆ ಒಂದಾದ ದೀಪಿಕಾ ಹಾಗೂ ಪೂರ್ಣಿ
  • ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗುತ್ತಿರೋದು ನಿಜಾನಾ?

ಶ್ರೀರಸ್ತು ಶುಭಮಸ್ತು ಒಂದೋಳ್ಳೆ ಕೌಟಂಬಿಕ ಸ್ಟೋರಿ. ತುಳಿಸಿ ಮಾಧವನ ಕುಟುಂಬ ಒಗ್ಗಟ್ಟನಿಂದ ಸಾಗ್ತಿದೆ. ಮಕ್ಕಳ ನಡುವೆ ಸೌಹಾರ್ದತೆ ಮೂಡಿದ್ದು, ದೀಪಿಕಾ ಹಾಗೂ ಪೂರ್ಣಿ ಕೂಡ ಒಂದಾಗಿದ್ದಾರೆ. ಈ ತುಂಬು ಕುಟುಂಬಕ್ಕೆ ಹೊಸ ಅತಿಥಿ ಬಂದಿರೋ ನಿಮಗೆ ಗೊತ್ತೇ ಇದೆ. ಅದೇ ತುಳಿಸಿ ಮಗು.

ಇದನ್ನೂ ಓದಿ:ರಕ್ಷಕ್​ಗೆ ಕಪ್ಪು ಮಸಿ ಹಾಕ್ತೀವಿ.. ಹಿಂದೂ ಮುಖಂಡ ಖಡಕ್​ ಎಚ್ಚರಿಕೆ!

publive-image

ಮಗು ಬಂದ್ಮೇಲೆ ಪ್ರತಿ ದೃಶ್ಯಗಳು ಲವಿಲವಿಕೆಯಿಂದ ಕೂಡಿವೆ. ಮಗು ಮನೆಗೆ ನಗು ತರುತ್ತೆ ಅನ್ನೋದು ಖಂಡಿತ ಸತ್ಯ. ತೆರೆಮೇಲೆ ಹೇಗೆ ಸಂಭ್ರಮಿಸ್ತಿದ್ದಾರೋ.. ಅಷ್ಟೇ ಖುಷಿ, ಸಂಭ್ರಮ ಶೂಟಿಂಗ್​ ವೇಳೆ ನಡೀತಿರುತ್ತೆ. ಮಗು ಜೊತೆ ಆಟ ಆಡೋದೇ ಫುಲ್​ ಟೈಮ್​ ಡ್ಯುಟಿ ಆಗಿದೆ.

publive-image

ಮಗು ಬಂದಿರೋ ಖುಷಿ ಜೊತೆಗೆ ಶ್ರೀರಸ್ತು ಶುಭಮಸ್ತು 700 ಸಂಚಿಕೆಗಳನ್ನ ಪೂರೈಸಿದೆ. ಕೇಕ್​ ಕಟ್​ ಮಾಡೋ ಮೂಲಕ ಇಡೀ ತಂಡ ಸೆಲೆಬ್ರೇಟ್ ಮಾಡಿದೆ. ನೆಗೆಟಿವ್​ ಪಾತ್ರಗಳಲ್ಲೇ ಒಳ್ಳೆಯವರಾಗಿ ಬದಲಾಗಿವೆ. ಇನ್ನು ಉಳಿದಿರೋದು ಶ್ರಾವರಿ ಮಾತ್ರ. ಈ ಪಾತ್ರದ ಮುಖವಾಡ ಕಳಚಿತಿನಿ ಅಂತ ತುಳಿಸಿ ಸವಾಲ್​ ಹಾಕಿದ್ದಾಳೆ. ಸದ್ಯದಲ್ಲೇ ಶ್ರಾವರಿ ಬಣ್ಣ ಬಯಲಾಗಲಿದೆ ಅಂದಂಗಾಯ್ತು.

publive-image

ಇದೇಲ್ಲಾ ನೋಡ್ತಿದ್ರೇ ಇನ್ನೊಂದು ಡೌಟ್​ ಶುರುವಾಗುತ್ತೆ ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗಲಿದ್ಯಾ? ಇದಕ್ಕೆ ಪುಷ್ಟಿ ಕೊಡುವಂತೆ ಹೊಸ ಧಾರಾವಾಹಿಗಳು ಬರೋದಕ್ಕೆ ಸಜ್ಜಾಗಿವೆ. ಕಿರಣ್​ ರಾಜ್​ ಅಭಿನಯದ ಕರ್ಣ ರೆಡಿಯಾಗ್ತಿದೆ. ಅದೇ ರೀತಿ ರಾಯರ ಪವಾಡಗಳ ಕಥೆ ಹೊಂದಿರೋ ಶ್ರೀ ರಾಘವೇಂದ್ರ ವೈಭವ ಕೂಡ ಅನೌನ್ಸ್ ಆಗಿದೆ.

publive-image

ಹೀಗಾಗಿ ಶ್ರೀರಸ್ತು ಶುಭಮಸ್ತು ಮುಕ್ತಾಯ ಕಾಣಬಹುದು ಎನ್ನಲಾಗ್ತಿದೆ. ಒಟ್ಟಿನಲ್ಲಿ ಮಗು ಇರೋ ಸಂಚಿಕೆಗಳು ವೀಕ್ಷಕರಿಗೆ ಖುಷಿ ಕೊಟ್ಟಿವೆ. ಜೊತೆಗೆ ಹೈ ಕಾಂಪಿಟೇಶನ್​ ಇರೋ ಪರಿಸ್ಥಿತಿಯಲ್ಲಿ 700 ಸಂಚಿಕೆ ಪೊರೈಸಿರೋದು ಸಾಮಾನ್ಯದ ಮಾತಲ್ಲ. ನಮ್ಮ ಕಡೆಯಿಂದ ಇಡಿ ತಂಡಕ್ಕೆ ಅಭಿನಂದನೆಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment