KL ರಾಹುಲ್​​ ಅಲ್ಲ; ಟೀಮ್​ ಇಂಡಿಯಾಗೆ ಸ್ಟಾರ್​ ಕನ್ನಡಿಗ ಎಂಟ್ರಿ; ಬಿಸಿಸಿಐ ಕದ ತಟ್ಟಿದ ಕೊಹ್ಲಿ ಆಪ್ತ!

author-image
Ganesh Nachikethu
Updated On
2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!
Advertisment
  • ಇದೇ ತಿಂಗಳು 19ನೇ ತಾರೀಕಿನಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ..!
  • ಬಾಂಗ್ಲಾ ವಿರುದ್ಧ ಟೆಸ್ಟ್‌ ಸರಣಿಗೆ ಇನ್ನೇನು ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ
  • ಟೀಮ್​ ಇಂಡಿಯಾ ಪ್ರಕಟಕ್ಕೆ ಮುನ್ನವೇ ಬಿಸಿಸಿಐ ಕದ ತಟ್ಟಿದ ಸ್ಟಾರ್​ ಕನ್ನಡಿಗ

ಇದೇ ತಿಂಗಳು 19ನೇ ತಾರೀಕಿನಿಂದ ನಡೆಯಲಿರೋ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಇನ್ನೇನು ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಬೇಕಿದೆ. ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ದುಲೀಪ್‌ ಟ್ರೋಫಿಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಬಿಸಿಸಿಐ ಸೆಲೆಕ್ಷನ್​​ ಕಮಿಟಿ ಮಣೆ ಹಾಕುವ ಸಾಧ್ಯತೆ ಇದೆ.

ಬಿಸಿಸಿಐ ಕದ ತಟ್ಟಿದ ಆರ್​​​ಸಿಬಿ ಮಾಜಿ ಪ್ಲೇಯರ್​!

ದುಲೀಪ್‌ ಟ್ರೋಫಿಯಲ್ಲಿ ಭಾರತ ಡಿ ತಂಡದ ಪರ ಬ್ಯಾಟ್ ಬೀಸಿದ್ದ ದೇವದತ್‌ ಪಡಿಕ್ಕಲ್‌ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಆದರೆ, 2ನೇ ಇನಿಂಗ್ಸ್‌ನಲ್ಲಿ ದೇವದತ್‌ ಸಖತ್​ ಬ್ಯಾಟಿಂಗ್​ ಮಾಡಿದ್ರು.

publive-image

ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟ

ಶ್ರೇಯಸ್ ಅಯ್ಯರ್‌ 2ನೇ ಇನಿಂಗ್ಸ್‌ನಲ್ಲಿ 44 ಬಾಲ್​ನಲ್ಲಿ 9 ಬೌಂಡರಿ, 1 ಸಿಕ್ಸರ್‌ ಸಮೇತ 54 ರನ್‌ ಸಿಡಿಸಿದರು. ಇವರಿಗೆ ಸಾಥ್​ ನೀಡಿದ ದೇವದತ್ ಪಡಿಕ್ಕಲ್‌ 70 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 56 ರನ್‌ ಬಾರಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಫೇಲ್ಯೂರ್​ ಆಗಿದ್ದ ದೇವದತ್ ಟೀಕೆಗೆ ಗುರಿಯಾಗಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ತನ್ನನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಪರಿಗಣಿಸಿ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ.

ಇದನ್ನೂ ಓದಿ:ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​; ಆರ್​​ಸಿಬಿ ತಂಡಕ್ಕೆ ಕೆ.ಎಲ್​ ರಾಹುಲ್​ ಎಂಟ್ರಿಗೆ ಸ್ಫೋಟಕ ಟ್ವಿಸ್ಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment