/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಮೆಗಾ ಹರಾಜಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ಲಾನ್​ ಮಾಡುತ್ತಿದೆ. ಯಾರನ್ನು ರಿಲೀಸ್​ ಮಾಡಬೇಕು? ರೀಟೈನ್​ ಮಾಡಿಕೊಳ್ಳಬೇಕು? ಅನ್ನೋ ಗಾಢ ಚಿಂತೆಯಲ್ಲಿ ತೊಡಗಿದೆ. ಇದರ ಮಧ್ಯೆ ಸ್ಟಾರ್​ ಕನ್ನಡಿಗ ಆರ್​​​ಸಿಬಿ ಕದ ತಟ್ಟಿದ್ದಾರೆ.
ಸದ್ಯ ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್​​ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್​​ ಪಡಿಕ್ಕಲ್​​ ಮಿಂಚಿದ್ದಾರೆ.
/newsfirstlive-kannada/media/post_attachments/wp-content/uploads/2024/09/Devdutt-Padikkal-RCB.jpg)
ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್​ ಆಸರೆಯಾದ್ರು. ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯ ಬ್ಯಾಟಿಂಗ್​ ಮಾಡಿದ್ರು.
ಇಂಡಿಯಾ ಎ ಬೌಲರ್​ಗಳ ಬೆಂಡೆತ್ತಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಪಡಿಕ್ಕಲ್​ 124 ಬಾಲ್​ನಲ್ಲಿ 92 ರನ್​ ಚಚ್ಚಿ ಶತಕ ವಂಚಿತರಾದ್ರು. ಬರೋಬ್ಬರಿ 15 ಫೋರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​​ 75ಕ್ಕೂ ಹೆಚ್ಚಿತ್ತು.
ಆರ್​​​ಸಿಬಿಗೆ ಪಡಿಕ್ಕಲ್​ ಎಂಟ್ರಿ ಫಿಕ್ಸ್​
ಸಖತ್​ ಫಾರ್ಮ್​​ನಲ್ಲಿರೋ ದೇವದತ್​ ಪಡಿಕ್ಕಲ್​ ಅವರನ್ನು ಆರ್​​ಸಿಬಿ ಖರೀದಿ ಮಾಡುವುದು ಪಕ್ಕಾ ಆಗಿದೆ. ಕಳೆದ ಸೀಸನ್​​ನಲ್ಲಿ ರಾಜಸ್ಥಾನ್​ ರಾಯಲ್ಸ್​ ಪರ ಕಳಪೆ ಪ್ರದರ್ಶನ ನೀಡಿದ್ದ ಪಡಿಕ್ಕಲ್​ ಅವರನ್ನು ರಿಲೀಸ್​ ಮಾಡುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ಕಡಿಮೆ ಹಣದಲ್ಲಿ ಆರ್​​ಸಿಬಿ ಇವರನ್ನು ಖರೀದಿ ಮಾಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us