RCB ಸೇರಲು ದಿನೇಶ್​ ಕಾರ್ತಿಕ್​​ಗೆ ಕಾಲ್​ ಮಾಡಿದ್ದ ಸ್ಟಾರ್​ ಆಟಗಾರರು; ಸತ್ಯ ಬಿಚ್ಚಿಟ್ಟ ಕೋಚ್​

author-image
Ganesh Nachikethu
Updated On
ಎದುರಾಳಿಗಳಿಗೆ ನಡುಕ; ಆರ್​​​ಸಿಬಿ ತಂಡಕ್ಕೆ ಡೈನಾಮಿಕ್​​ ಬ್ಯಾಟರ್​ ರೀ ಎಂಟ್ರಿ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​
  • ಮೆಗಾ ಆಕ್ಷನ್​ನಲ್ಲಿ ಸ್ಟಾರ್​ ಆಟಗಾರರ ಖರೀದಿಗೆ ಪ್ಲ್ಯಾನ್​​
  • ಆರ್​​ಸಿಬಿ ಹಿಂದಿನ ಮಾಸ್ಟರ್​ ಮೈಂಡ್​ ದಿನೇಶ್​ ಕಾರ್ತಿಕ್​​

ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮೆಗಾ ಆಕ್ಷನ್​​ಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಇದೇ ನವೆಂಬರ್ 24 ಮತ್ತು 25ನೇ ತಾರೀಕು ಸೌದಿ ಅರೇಬಿಯಾದಲ್ಲಿ ನಡೆಯೋ ಈ ಹರಾಜಿನಲ್ಲಿ ಎಲ್ಲರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ರಣತಂತ್ರ ರೂಪಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತೆರೆಮರೆಯಲ್ಲಿ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಂಡಿದೆ. ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದು ಭಾರೀ ಪ್ಲ್ಯಾನ್​ ಹಾಕಿಕೊಂಡಿದೆ. ಇದರ ಭಾಗವಾಗಿ ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟಿದೆ.

ಆರ್​​ಸಿಬಿ ಮೆಗಾ ಪ್ಲ್ಯಾನ್​​?

ಕಳೆದ 18 ಸೀಸನ್​ಗಳಲ್ಲೂ ಆರ್​​ಸಿಬಿ ಮಾಡಿದ ಮಹಾ ಎಡವಟ್ಟು ಎಂದರೆ ಉತ್ತಮ ಬೌಲರ್ಸ್​ ಮತ್ತು ಆಲ್​ರೌಂಡರ್​​ಗಳನ್ನು ಖರೀದಿ ಮಾಡದೇ ಇರುವುದು. ಇದರ ಪರಿಣಾಮ ಟೂರ್ನಿಯಲ್ಲಿ ಏರಿಳಿತಗಳನ್ನು ಕಂಡಿದೆ. ಆರ್‌ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ರೂ ಬೌಲಿಂಗ್ ವಿಭಾಗ ಯಾವಾಗಲೂ ವೀಕ್​ ಇರುತ್ತಿತ್ತು. ಈಗ ಬೌಲಿಂಗ್​​ ವಿಭಾಗವನ್ನು ಬಲಿಷ್ಠಗೊಳಿಸಲು ಆರ್‌ಸಿಬಿ ಕ್ರಿಕೆಟ್‌ ನಿರ್ದೇಶಕ ಮೊ ಬೊಬಾಟ್ ಮತ್ತು ಬ್ಯಾಟಿಂಗ್​ ಕೋಚ್​ ಮತ್ತು ಮೆಂಟರ್​ ದಿನೇಶ್​ ಕಾರ್ತಿಕ್​ ಮುಂದಾಗಿದ್ದಾರೆ. ಮಾಸ್ಟರ್​ ಪ್ಲ್ಯಾನ್​ ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹರಾಜಿಗೆ ಮಹತ್ವದ ಹೆಜ್ಜೆ

ಮೆಗಾ ಹರಾಜಿಗೆ ಮುನ್ನವೇ ಆರ್‌ಸಿಬಿ ದೇಶೀಯ ಯುವ ಆಟಗಾರರನ್ನು ಟ್ರಯಲ್‌ಗೆ ಕರೆದಿತ್ತು. ಈ ಆರ್‌ಸಿಬಿ ಟ್ರಯಲ್‌ ಪ್ರಕ್ರಿಯೆಯಲ್ಲಿ ಸಾಕಷ್ಟು ಯುವ ಆಟಗಾರರು ಭಾಗವಹಿಸಿದ್ರು. ಇದರ ಹಿಂದಿನ ಮಾಸ್ಟರ್​ ಮೈಂಡ್​ ಬೇರೆ ಯಾರು ಅಲ್ಲ, ಬದಲಿಗೆ ದಿನೇಶ್ ಕಾರ್ತಿಕ್. ತಂಡಕ್ಕೆ ಬೇಕಾದ ಕೌಲಿಟಿ ಸ್ಟಾರ್ ಯುವ ಆಟಗಾರರನ್ನು ಆಯ್ಕೆ ಮಾಡುವುದು ಇವರ ಉದ್ದೇಶವಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್, ಮಹಾರಾಜ ಕಪ್, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಸೂಕ್ಷ್ಮ ಗಮನಿಸಿರೋ ದಿನೇಶ್​ ಕಾರ್ತಿಕ್​ಗೆ ಯುವ ಆಟಗಾರರ ಬಗ್ಗೆ ಮಾಹಿತಿ ಇದೆ ಎಂಬುದು ವಿಶೇಷ.

ಆಕ್ಷನ್​ ಪ್ಲ್ಯಾನ್​ ಬಗ್ಗೆ ಏನಂದ್ರು ದಿನೇಶ್​ ಕಾರ್ತಿಕ್​​?

ಆರ್​​ಸಿಬಿ ಬ್ಯಾಟಿಂಗ್​ ಕೋಚ್​​ ಮತ್ತು ಮೆಂಟರ್​ ದಿನೇಶ್​ ಕಾರ್ತಿಕ್​​ ನೇತೃತ್ವದ ಆರ್​​ಸಿಬಿ ತಂಡ ಹರಾಜಿಗಾಗಿ ಈಗಾಗಲೇ ಸೌದಿ ಅರೇಬಿಯಾಗೆ ತೆರಳಿದೆ. ಹರಾಜಿಗೆ ಮುನ್ನ ಮಾತಾಡಿದ ದಿನೇಶ್​ ಕಾರ್ತಿಕ್​​​, ಕಳೆದ ಒಂದು ವಾರದಿಂದ ಕೂತು ಯಾರನ್ನು ಖರೀದಿ ಮಾಡಬೇಕು ಅನ್ನೋ ಲಿಸ್ಟ್​ ಮಾಡಿಕೊಂಡಿದ್ದೇವೆ. ಈ ವಿಚಾರವಾಗಿ ಹೆಡ್​ ಕೋಚ್​​ ಆ್ಯಂಡಿ ಫ್ಲವರ್​ ಜತೆ ಸಾಕಷ್ಟು ಜಗಳ ಆಡಿದ್ದೇನೆ. ನನಗೂ ಸ್ಟಾರ್​​ ಆಟಗಾರರೇ ಕಾಲ್​ ಮಾಡಿ ಆರ್​​ಸಿಬಿಗೆ ಸೇರೋ ಬಯಕೆ ವ್ಯಕ್ತಪಡಿಸಿದ್ರು ಎಂದರು.

ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಮುಂದಿನ ಸೀಸನ್​ ಗೆಲ್ಲಲೇಬೇಕು ಎಂದು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್​​ಸಿಬಿ ಮುಂದಾಗಿದೆ. ನಾಳೆ ನಡೆಯಲಿರೋ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ: RCB ಹಿಂದಿನ ಮಾಸ್ಟರ್​ ಮೈಂಡ್​ DK​; ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment