/newsfirstlive-kannada/media/post_attachments/wp-content/uploads/2024/09/RCB_TEAM.jpg)
ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಇದೇ ನವೆಂಬರ್ 24 ಮತ್ತು 25ನೇ ತಾರೀಕು ಸೌದಿ ಅರೇಬಿಯಾದಲ್ಲಿ ನಡೆಯೋ ಈ ಹರಾಜಿನಲ್ಲಿ ಎಲ್ಲರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ರಣತಂತ್ರ ರೂಪಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತೆರೆಮರೆಯಲ್ಲಿ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಂಡಿದೆ. ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದು ಭಾರೀ ಪ್ಲ್ಯಾನ್ ಹಾಕಿಕೊಂಡಿದೆ. ಇದರ ಭಾಗವಾಗಿ ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟಿದೆ.
ಆರ್ಸಿಬಿ ಮೆಗಾ ಪ್ಲ್ಯಾನ್?
ಕಳೆದ 18 ಸೀಸನ್ಗಳಲ್ಲೂ ಆರ್ಸಿಬಿ ಮಾಡಿದ ಮಹಾ ಎಡವಟ್ಟು ಎಂದರೆ ಉತ್ತಮ ಬೌಲರ್ಸ್ ಮತ್ತು ಆಲ್ರೌಂಡರ್ಗಳನ್ನು ಖರೀದಿ ಮಾಡದೇ ಇರುವುದು. ಇದರ ಪರಿಣಾಮ ಟೂರ್ನಿಯಲ್ಲಿ ಏರಿಳಿತಗಳನ್ನು ಕಂಡಿದೆ. ಆರ್ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ರೂ ಬೌಲಿಂಗ್ ವಿಭಾಗ ಯಾವಾಗಲೂ ವೀಕ್ ಇರುತ್ತಿತ್ತು. ಈಗ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಮತ್ತು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಮುಂದಾಗಿದ್ದಾರೆ. ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹರಾಜಿಗೆ ಮಹತ್ವದ ಹೆಜ್ಜೆ
ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿ ದೇಶೀಯ ಯುವ ಆಟಗಾರರನ್ನು ಟ್ರಯಲ್ಗೆ ಕರೆದಿತ್ತು. ಈ ಆರ್ಸಿಬಿ ಟ್ರಯಲ್ ಪ್ರಕ್ರಿಯೆಯಲ್ಲಿ ಸಾಕಷ್ಟು ಯುವ ಆಟಗಾರರು ಭಾಗವಹಿಸಿದ್ರು. ಇದರ ಹಿಂದಿನ ಮಾಸ್ಟರ್ ಮೈಂಡ್ ಬೇರೆ ಯಾರು ಅಲ್ಲ, ಬದಲಿಗೆ ದಿನೇಶ್ ಕಾರ್ತಿಕ್. ತಂಡಕ್ಕೆ ಬೇಕಾದ ಕೌಲಿಟಿ ಸ್ಟಾರ್ ಯುವ ಆಟಗಾರರನ್ನು ಆಯ್ಕೆ ಮಾಡುವುದು ಇವರ ಉದ್ದೇಶವಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್, ಮಹಾರಾಜ ಕಪ್, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಸೂಕ್ಷ್ಮ ಗಮನಿಸಿರೋ ದಿನೇಶ್ ಕಾರ್ತಿಕ್ಗೆ ಯುವ ಆಟಗಾರರ ಬಗ್ಗೆ ಮಾಹಿತಿ ಇದೆ ಎಂಬುದು ವಿಶೇಷ.
ಆಕ್ಷನ್ ಪ್ಲ್ಯಾನ್ ಬಗ್ಗೆ ಏನಂದ್ರು ದಿನೇಶ್ ಕಾರ್ತಿಕ್?
ಆರ್ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ನೇತೃತ್ವದ ಆರ್ಸಿಬಿ ತಂಡ ಹರಾಜಿಗಾಗಿ ಈಗಾಗಲೇ ಸೌದಿ ಅರೇಬಿಯಾಗೆ ತೆರಳಿದೆ. ಹರಾಜಿಗೆ ಮುನ್ನ ಮಾತಾಡಿದ ದಿನೇಶ್ ಕಾರ್ತಿಕ್, ಕಳೆದ ಒಂದು ವಾರದಿಂದ ಕೂತು ಯಾರನ್ನು ಖರೀದಿ ಮಾಡಬೇಕು ಅನ್ನೋ ಲಿಸ್ಟ್ ಮಾಡಿಕೊಂಡಿದ್ದೇವೆ. ಈ ವಿಚಾರವಾಗಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ಜತೆ ಸಾಕಷ್ಟು ಜಗಳ ಆಡಿದ್ದೇನೆ. ನನಗೂ ಸ್ಟಾರ್ ಆಟಗಾರರೇ ಕಾಲ್ ಮಾಡಿ ಆರ್ಸಿಬಿಗೆ ಸೇರೋ ಬಯಕೆ ವ್ಯಕ್ತಪಡಿಸಿದ್ರು ಎಂದರು.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಮುಂದಿನ ಸೀಸನ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್ಸಿಬಿ ಮುಂದಾಗಿದೆ. ನಾಳೆ ನಡೆಯಲಿರೋ ಹರಾಜಿನಲ್ಲಿ ಆರ್ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿ: RCB ಹಿಂದಿನ ಮಾಸ್ಟರ್ ಮೈಂಡ್ DK; ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ