ಬಳ್ಳಾರಿ ಐಜಿಪಿ ಆಗಿ ಡಾ.ಪಿ.ಎಸ್‌. ಹರ್ಷ , ಎಸ್‌.ಪಿ. ಆಗಿ ಸುಮನ್ ಡಿ ಪನ್ನೇಕರ್ ನೇಮಕ

ಬಳ್ಳಾರಿಯಲ್ಲಿ ಜನವರಿ 1 ರಂದು ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಬಳ್ಳಾರಿ ವಲಯ ಐಜಿಪಿ ಹಾಗೂ ಎಸ್‌ಪಿ ಆಗಿ ದಕ್ಷ ಅಧಿಕಾರಿಗಳನ್ನು ರಾಜ್ಯ ಸರ್ಕಾರ ನೇಮಿಸಿದೆ. ಬಳ್ಳಾರಿ ವಲಯ ಐಜಿಪಿ ಆಗಿ ಹರ್ಷಾ ಗುಪ್ತಾ, ಎಸ್‌ಪಿ ಆಗಿ ಸುಮನ್ ಡಿ ಪನ್ನೇಕರ್ ಅವರನ್ನು ನೇಮಿಸಲಾಗಿದೆ.

author-image
Chandramohan
BALLARY NEW IGP AND SP APPOINTMENT

ಬಳ್ಳಾರಿ ವಲಯ ಐಜಿಪಿ ಆಗಿ ಡಾ.ಪಿ.ಎಸ್. ಹರ್ಷ ನೇಮಕ

Advertisment
  • ಬಳ್ಳಾರಿ ವಲಯ ಐಜಿಪಿ ಆಗಿ ಡಾ.ಪಿ.ಎಸ್. ಹರ್ಷ ನೇಮಕ
  • ಬಳ್ಳಾರಿಗೆ ನೂತನ ಎಸ್‌.ಪಿ. ಆಗಿ ಸುಮನ್ ಡಿ ಪನ್ನೇಕರ್ ನೇಮಕ

ಬಳ್ಳಾರಿ ವಲಯಕ್ಕೆ ನೂತನ ಐಜಿಪಿ ಹಾಗೂ ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ನೇಮಕ ಮಾಡಲಾಗಿದೆ. ಬಳ್ಳಾರಿ ವಲಯ  ಐಜಿಪಿಯಾಗಿ  ಹರ್ಷ ಗುಪ್ತಾ ನೇಮಕ ಮಾಡಲಾಗಿದೆ.  ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ಆಗಿ ಡಾ. ಸುಮನ್ ಡಿ ಪೆನ್ನೇಕರ್ ನೇಮಕ ಮಾಡಲಾಗಿದೆ. 

BALLARY NEW IGP AND SP APPOINTMENT (1)



ರಾಜಕೀಯವಾಗಿ ಸೂಕ್ಷ್ಮ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಜನವರಿ  1 ರಂದು ರಾಜಕೀಯ ಘರ್ಷಣೆ ನಡೆದಿದೆ. ಬಿಜೆಪಿ  ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ನಡುವೆ ನಡೆದ ಘರ್ಷಣೆಯಲ್ಲಿ ರಾಜಶೇಖರ್ ರೆಡ್ಡಿ ಎಂಬ ಕಾರ್ಯಕರ್ತನ ಹತ್ಯೆಯಾಗಿದೆ. 
ಹೀಗಾಗಿ ಸರ್ಕಾರ ಬಳ್ಳಾರಿ ವಲಯ ಐಜಿಪಿ ಹಾಗೂ ಎಸ್‌.ಪಿ. ಆಗಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿದೆ.  ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.  ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಅಧಿಕಾರಿಗಳನ್ನು  ನೇಮಕ ಮಾಡಿದೆ. ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರು ಅಮಾನತ್ತಿನ ಬಳಿಕ ನೂತನ ಎಸ್ಪಿ ಆಗಿ ಸುಮನ್ ಡಿ ಪನ್ನೇಕರ್ ರನ್ನು ನೇಮಿಸಿದೆ. 
ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆಯಾದ ಬಳಿಕ ಜನವರಿ 2 ರಂದೇ ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಈಗ ಆ ಸ್ಥಾನಕ್ಕೆ ಸುಮನ್ ಡಿ ಪನ್ನೇಕರ್  ಅವರನ್ನು ನೇಮಿಸಲಾಗಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bellary SP and iGP APPOINTMENT
Advertisment