/newsfirstlive-kannada/media/media_files/2025/08/27/darshan-kanaka-durgamma-2025-08-27-16-11-28.jpg)
ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆರೋಪಿ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಕನಕ ದರ್ಗಮ್ಮ ದೇಗುಲದಲ್ಲಿ ಹರಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು
ಅದರಂತೆ ನಾಲ್ಕು ಬಾರಿ ಕನಕ ದುರ್ಗಮ್ಮ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ ಬಳಿಕ ದರ್ಶನ್ಗೆ ಜಾಮೀನು ಮಂಜೂರು ಆಗಿತ್ತು. ಆದ್ರೆ, ದರ್ಶನ್ ಬಿಡುಗಡೆ ಬಳಿಕ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಗೆ ಬಾರದೇ ಇದ್ದಿದ್ರಿಂದ ದರ್ಶನ್ಗೆ ಮತ್ತೆ ಸಂಕಷ್ಟ ಶುರುವಾಗಿದೆ.
ದರ್ಶನ್ ಬಿಡುಗಡೆಯಾದ್ರೆ ಕನಕ ದುರ್ಗಮ್ಮ ದೇಲಗುಕ್ಕೆ ಭೇಟಿ ನೀಡಿ ಹರಕೆ ತೀರಿಸೋದಾಗಿ ವಿಜಯಲಕ್ಷ್ಮೀ ಹೇಳಿಕೊಂಡಿದ್ರು. ಆದ್ರೆ ದರ್ಶನ್ ಬಿಡುಗಡೆ ಬಳಿಕ ವಿಜಯಲಕ್ಷ್ಮೀ ದೇವಾಲಯಕ್ಕೆ ಬಾರದೇ ಇದ್ದಿದ್ರಿಂದ ಮತ್ತೊಮ್ಮೆ ದರ್ಶನ್ಗೆ ಸಂಕಷ್ಟ ಎದುರಾಗಿದೆ ಎನ್ನಲಾಗ್ತಿದೆ.
ಇನ್ನೂ, ಈ ಬಗ್ಗೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಪ್ರಧಾನ ಅರ್ಚಕ, ವಿಜಯಲಕ್ಷ್ಮೀ ಅವರು ಎರಡು ಸಲ ಬಂದಿದ್ದರು. ಬಿಡುಗಡೆಯಾದ ಮೇಲೆ ಒಂದು ಸಲ ಬಂದಿದ್ದರು. ಆದರೆ ಇನ್ನೊಂದು ಸಾರಿ ಬಂದು ಪೂಜೆ ಮಾಡಿಸಿ ಎಂದು ಹೇಳಲಾಗಿತ್ತು. ಆದರೆ ದರ್ಶನ್ ಬಿಡುಗಡೆ ಆದ ಮೇಲೆ ವಿಜಯಲಕ್ಷ್ಮಿ ಅವರು ಬಂದಿಲ್ಲ. ದುರ್ಗಮ್ಮನಿಗೆ ಹರಕೆ ತೀರಿಸಿದರೆ ಎಲ್ಲವೂ ಪರಿಹಾರ ಆಗುತ್ತೆ ಅನ್ನೋದು ಎಲ್ಲರ ನಂಬಿಕೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ