ಅಕ್ಕನನ್ನು ಪ್ರೀತಿಸಿದ ಹುಡುಗನನ್ನೇ ಹತ್ಯೆಗೈದ ಅಪ್ರಾಪ್ತ ಬಾಲಕ!

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆ ಭೀಕರ ಘಟನೆಯೊಂದು ನಡೆದು ಹೋಗಿದೆ. ತನ್ನ ಅಕ್ಕನನ್ನು ಪ್ರೀತಿಸುತ್ತಿದ್ದ ಮಂಜುನಾಥ್ ಸುಭಾಷ್ ಎಣ್ಣಿ ಎಂಬಾತನನ್ನು ಯುವತಿಯ ಅಪ್ರಾಪ್ತ ಸೋದರ ಹತ್ಯೆಗೈದ್ದಿದ್ದಾನೆ. ಅಕ್ಕ ಹಾಗೂ ಮಂಜುನಾಥನ ಪ್ರೀತಿಗೆ ಅಪ್ರಾಪ್ತ ಸೋದರ ವಿರೋಧಿಸಿದ್ದ.

author-image
Chandramohan
MINOR MURDER BOY AT GHATAPRABHA

ಯುವತಿಯ ಅಪ್ರಾಪ್ತ ಸೋದರನಿಂದ ಹತ್ಯೆಯಾದ ಮಂಜುನಾಥ್

Advertisment
  • ಯುವತಿಯ ಅಪ್ರಾಪ್ತ ಸೋದರನಿಂದ ಹತ್ಯೆಯಾದ ಮಂಜುನಾಥ್
  • ರಾಜಾಪುರ ಗ್ರಾಮದಲ್ಲಿ ದೇವಸ್ಥಾನದ ಪೂಜಾರಿಯಾಗಿದ್ದ ಮಂಜುನಾಥ್

ಅಕ್ಕನ ಮೇಲಿನ ಪ್ರೀತಿಗೋ.. ಅಕ್ಕನ ಜೀವನ ಹಾಳಾಗುತ್ತೆ ಅನ್ನೋ ಕೋಪವೋ ಗೊತ್ತಿಲ್ಲ. ಒಂದು ಕ್ಷಣ ಯೋಚನೆ ಮಾಡದೇ ಅಪ್ರಾಪ್ತ ಬಾಲಕ ಎರಡು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದ್ದಾನೆ. ತನ್ನ ಭವಿಷ್ಯದ ಬಗ್ಗೆ ಕಿಂಚಿತ್ತು ಯೋಚನೆ ಮಾಡಿದ್ರೆ ಆತನ ಬದುಕು ಹೂವಿನ ಹಾದಿಯಲ್ಲಿ ಸಾಗುತ್ತಿತ್ತು. ಆದ್ರೆ ಈಗ ಕೋಪದ ಕೈನಲ್ಲಿ ಬುದ್ದಿ ಕೊಟ್ಟ ಬಾಲಕನ ಬದುಕು ಕತ್ತಲತ್ತ ಸಾಗಿದೆ. 
ರಕ್ತದ ಮಡುವಿನಲ್ಲಿ ಯುವಕನ ಮೃತದೇಹವೊಂದು ಬಿದ್ದಿದೆ.. ಇತ್ತ ಮಹಿಳೆಯರು ಗುಂಪಲ್ಲಿ ಕೂತು ಕಣ್ಣೀರು ಇಡ್ತಿದ್ದಾರೆ. ಇನ್ನು ನಮ್ಮನೆ ಹುಡುಗ ಇಲ್ವಲ್ಲಾ ಅಂತ ಆಕ್ರಂದಿಸ್ತಾ ಇರೋ ಈ ದೃಶ್ಯಗಳು ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ.

MINOR MURDER BOY AT GHATAPRABHA (1)

 ಈ ಮೇಲಿನ ಪೋಟೋದಲ್ಲಿ ಇರುವ  ಈತನ ಹೆಸರು ಮಂಜುನಾಥ ಸುಭಾಷ್ ಎಣ್ಣಿ. ವಯಸ್ಸು ಕೇವಲ 23. ಊರಿನ ಚೂನಮ್ಮ ದೇವಸ್ತಾನದ ಪೂಜಾರಿಯಾಗಿದ್ದ ಈತ ಈಗ  ಶವವಾಗಿರೋದಕ್ಕೆ ಕಾರಣ ಈತನ ಪ್ರೀತಿ. 

ಅಕ್ಕನನ್ನ ಪ್ರೀತಿಸಿದಾತನಿಗೆ ಮುಹೂರ್ತ ಇಟ್ಟ ತಮ್ಮ !
ಅಕ್ಕನ ಪ್ರೀತಿಸಿದ್ದಕ್ಕೆ ತಮ್ಮನಿಂದ ಹತ್ಯೆ

ಅಕ್ಕನನ್ನ ಪ್ರೀತಿಸುತ್ತಿದ್ದ ಹುಡುಗನನ್ನೇ ಹತ್ಯೆಗೈದ ಅಪ್ರಾಪ್ತ ಬಾಲಕ
ಹಲವು ವರ್ಷಗಳಿಂದ ಅಪ್ರಾಪ್ತನ ಸಹೋದರಿ ಜೊತೆ ಪ್ರೇಮಾಂಕುರ
ಮಂಜುನಾಥಗೆ ಹಲವು ಬಾರಿ ವಾರ್ನ್ ಮಾಡಿದ್ದ ಅಪ್ರಾಪ್ತ ಬಾಲಕ
ಆದರೂ ಆಕೆಯ ಜೊತೆ ಫೋನ್‌ನಲ್ಲಿ ಮಾತಾಡ್ತಿದ್ದ ಮಂಜುನಾಥ
ಬೆಳಗ್ಗೆ ‌ಚೂನಮ್ಮ ದೇವರ ಪೂಜೆ ಮಾಡಲು ಬಂದಾಗ ಕೊಲೆಗೆ ಸಂಚು
ಯಾರೂ ಇಲ್ಲದಾಗ ಮಂಜುನಾಥ ತಲೆಗೆ ಕಬ್ಬಿಣದ ರಾಡ್​​​ನಿಂದ ಹಲ್ಲೆ
ತೀವ್ರ ರಕ್ತಸ್ರಾವದಿಂದ ದೇವಸ್ಥಾನದ ಆವರಣದಲ್ಲೇ ಮಂಜುನಾಥ ಸಾವು
ಘಟನಾ ಸ್ಥಳಕ್ಕೆ ಘಟಪ್ರಭಾ ಠಾಣೆಯ ಪೊಲೀಸರ ಭೇಟಿ, ಪರಿಶೀಲನೆ

ಅಕ್ಕನನ್ನ ಪ್ರೀತಿಸುತ್ತಿದ್ದ ಹುಡುಗನನ್ನ ಅಪ್ರಾಪ್ತ ಬಾಲಕ ಹತ್ಯೆಗೈದಿದ್ದಾನೆ. ಹಲವು ವರ್ಷಗಳಿಂದ ಅಪ್ರಾಪ್ತನ ಸಹೋದರಿಯನ್ನ ಮೃತ ಮಂಜುನಾಥ್​ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿ ಒಪ್ಪದ ಅಪ್ರಾಪ್ತ ಸೋದರ,  ಮಂಜುನಾಥಗೆ ಹಲವು ಬಾರಿ ವಾರ್ನ್ ಮಾಡಿದ್ದ. ಆದರೂ ಮಂಜುನಾಥ್​ ಆಕೆಯ ಜೊತೆ ಫೋನ್‌ನಲ್ಲಿ ಮಾತಾಡ್ತಿದ್ದ. ಇದರ ಬಗ್ಗೆ ಗೊತ್ತಾಗ್ತಿದ್ದಂತರೆ ಮಂಜುನಾಥ್​ ಎಂದಿನಂತೆ ಬೆಳಗ್ಗೆ ‌ಚೂನಮ್ಮ ದೇವರಿಗೆ ಪೂಜೆ ಮಾಡಲು ಬಂದಾಗ ಅಪ್ರಾಪ್ತ ಬಾಲಕ, ಮಂಜುನಾಥನ ತಲೆಗೆ ಕಬ್ಬಿಣದ ರಾಡ್​​​ನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಸ್ಥಾನದ ಆವರಣದಲ್ಲೇ ಮಂಜುನಾಥ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಘಟಪ್ರಭಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಘಟಪ್ರಭಾ ಠಾಣೆಯ ಪೊಲೀಸರು ಆರೋಪಿ ಬಾಲಕನ ಬಂಧಿಸಿದ್ದಾರೆ. ಅದೇನೇ ಇರಲಿ ಅಕ್ಕನ ಪ್ರೀತಿಗೆ ಒಲ್ಲೆ ಅಂದವನು ಒಂದು ಕೊಲೆ ಮಾಡಿ ರಿಮ್ಯಾಂಡ್ ಹೋಮ್  ಸೇರಿದ್ದಾನೆ. ಅತ್ತ ಅಕ್ಕನ ಭವಿಷ್ಯ ಮತ್ತು ತನ್ನ ಭವಿಷ್ಯ ಎರಡನ್ನೂ ಬೀದಿಗೆ ತಂದು ನಿಲ್ಲಿಸಿದ್ದು ವಿಪರ್ಯಾಸ. 


ಶ್ರೀಕಾಂತ್​ ಕುಬಕಡ್ಡಿ ನ್ಯೂಸ್​ ಫಸ್ಟ್​ ಬೆಳಗಾವಿ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

belagavi, murder, khanapura, police investigation. Belagavi news
Advertisment