Advertisment

7 ಕೋಟಿ ರಾಬರಿ ಕೇಸ್​.. ಪ್ರಕರಣ ಭೇದಿಸಿದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಮಿಷನರ್​..!

ಬೆಂಗಳೂರಿನಲ್ಲಿ ನಡೆದ 7 ಕೋಟಿ ರಾಬರಿ ಪ್ರಕರಣವು ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದಾರೆ. ಬೆನ್ನಲ್ಲೇ ದರೋಡೆಕೋರರ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೇಗೆ ನಡೆಯಿತು ಅನ್ನೋದ್ರ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನ್ ಸುದ್ದಿಗೋಷ್ಟಿ ಮಾಹಿತಿ ನೀಡಿದರು.

author-image
Ganesh Kerekuli
police commissioner (1)
Advertisment

ಬೆಂಗಳೂರಿನಲ್ಲಿ ನಡೆದ 7 ಕೋಟಿ ರಾಬರಿ ಪ್ರಕರಣವು ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದಾರೆ. ಬೆನ್ನಲ್ಲೇ ದರೋಡೆಕೋರರ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೇಗೆ ನಡೆಯಿತು ಅನ್ನೋದ್ರ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನ್ ಸುದ್ದಿಗೋಷ್ಟಿ ಮಾಹಿತಿ ನೀಡಿದರು. 

Advertisment

ಅದರ ವಿವರ ಹೀಗಿದೆ.. 

ನವೆಂಬರ್ 19 ರಂದು ನಡೆದ ಎಟಿಎಂ ನಗದು ವಾಹನ ದರೋಡೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಲಾಗಿದೆ. ಮೊದಲೆ ನಿಖರವಾಗಿ ಯೋಚಿಸಲಾದ ಮತ್ತು ಮಾಹಿತಿ ಆಧಾರಿತ ದರೋಡೆ ಎಂದು  ತೋರುತ್ತಿದ್ದ ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನು ಪತ್ತೆಮಾಡಲಾಗಿದೆ. ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ಅವರುಗಳಿಂದ 5.76 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಘಟನೆ:

08:19.11.2025 ರಂದು ಮಧ್ಯಾಹ್ನ 1.20 ಸುಮಾರಿಗೆ 7.11 ಕೋಟಿ ಹೊತ್ತೊಯ್ಯುತ್ತಿದ್ದ ವಾಹನವನ್ನು ಹೈಜಾಕ್ ಮಾಡಿದ್ದರು. ಡಿ.ಜೆ ಹಳ್ಳಿಯ ಬಳಿ ಅಪರಿಚಿತರು RBI ನಿಯಂತ್ರಣಾಧಿಕಾರಿಗಳಂತೆ ನಟಿಸಿ ಹಣ ಹೊಯ್ಯುತ್ತಿದ್ದ ವ್ಯಾನ್‌ನ್ನು ಅಪಹರಿಸಿರುವ ಬಗ್ಗೆ CMS ಸಂಘಟನೆಯಿಂದ ವರದಿ ಬಂದಿತ್ತು. ನಂತರದ ತನಿಖೆಯಲ್ಲಿ, ಈ ಘಟನೆ 12:48 ಗಂಟೆಗಳ ಸಮಯದಲ್ಲಿ ಅಶೋಕ ಪಿಲ್ಲರ್-ಜಯನಗರ-ಡೇರಿ ಸರ್ಕಲ್‌ನಲ್ಲಿ ನಡೆದಿರುವುದು ದೃಢಪಟ್ಟಿರುತ್ತದೆ.

ಅಪರಾಧಿಗಳು ವ್ಯಾನ್ ಅನ್ನು ತಡೆದು, ಶಸ್ತ್ರ ತೋರಿಸಿ, ಬೆದರಿಸಿದ್ದಾರೆ. ನಗದು ತುಂಬಿದ್ದ ಪೆಟ್ಟಿಗೆಗಳನ್ನು ತೆಗೆದುಕೊಂಡು ಮಧ್ಯಾಹ್ನ 13:16 ಗಂಟೆಗೆ ವಾಹನವನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಸವಾಲುಗಳು

  1. ಈ ದರೋಡೆ ನಿಖರವಾದ ಪೂರ್ವ ಯೋಜಿತವಾಗಿದ್ದು, ಪ್ರಾಥಮಿಕ ಸುಳಿವುಗಳು ಅತ್ಯಲ್ಪವಾಗಿದ್ದವು.
  2. ಅಪರಾಧಿಗಳು ಅನೇಕ CCTV ಕಾಣದ ಪ್ರದೇಶಗಳಲ್ಲಿ ನಿಖರ ನಿಲುಗಡೆಗಳನ್ನು ಮಾಡಿದ್ದರು.
  3. ಕಾರ್ಯಾಚರಣೆ ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಲಾಗಲಿಲ್ಲ.
  4. ತನಿಖೆ ದಿಕ್ಕು ತಪ್ಪಿಸಿಕೊಳ್ಳಲು ಹಲವು ಭಾಷೆಗಳಲ್ಲಿ ಸಂವಹನ ನಡೆಸಲಾಗಿತ್ತು.
  5. ಅನೇಕ ವಾಹನಗಳನ್ನು ಬಳಸಲಾಗಿದ್ದು, ಅವುಗಳ ನಂಬರ್ ಪ್ಲೇಟ್‌ಗಳನ್ನು ಪದೇ ಪದೇ ಬದಲಾಯಿಸಲಾಯಿತು.
  6. ದರೋಡೆ ಮಾಡಿದ ನೋಟುಗಳು ಸರಣಿ ಸಂಖ್ಯೆಗಳ ದಾಖಲಾತಿ ಇರದ ಕಾರಣ ಗುರುತಿಸುವುದು ಕಷ್ಟವಾಯಿತು.
  7. ಅಧಿಕೃತವಲ್ಲದ ಮಾಧ್ಯಮ ವರದಿಗಳು ಆರಂಭಿಕ ತನಿಖೆಯ ಸಂವೇದನಾಶೀಲ ಹಂತಗಳಿಗೆ ಆಡಚಣೆ ತಂದವು.
  8. ಈ ಎಲ್ಲಾ ಸವಾಲುಗಳ ನಡುವೆಯೂ ತಾಂತ್ರಿಕ ವಿಶ್ಲೇಷಣೆ ಮತ್ತು ತಂಡದ ಸಂಯೋಜಿತ ಕಾರ್ಯದಿಂದ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಲಾಗಿದೆ.
  9. ಪಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರು.
  10. ದಕ್ಷಿಣ ವಿಭಾಗದ 11 ಪಿಐಗಳು ಮತ್ತು 2 ಎಸಿಪಗಳೊಂದಿಗೆ ಹಾಗೂ ಸಿಸಿಬಿ ವಿಭಾಗದ 6 ಪಿಐಗಳು ಜೊತೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರು. 
  11. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸುಳಿವುಗಳನ್ನು ಹಿಂಬಾಲಿಸಲಾಯಿತು. (ಕೆಲವು ತಂಡಗಳು ಗೋವಾಗೆ ಕೂಡ ಹೋಗಿ ಬಂದಿವೆ)
  12. 30 ಕ್ಕಿಂತ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದೆ.
  13. CCTV, ವಾಹನ ಚಲನವಲನ ಮತ್ತು ಸ್ಥಳೀಯ ಗುಪ್ತಚರ ಮಾಹಿತಿ ನಿರಂತರವಾಗಿ ವಿಶ್ಲೇಷಿಸಲಾಯಿತು.
  14. ಮೊದಲ 24 ಗಂಟೆಯಲ್ಲಿಯೇ ಆರೋಪಿಗಳು ಬಳಸಿದ ವಾಹನಗಳ ಬಗ್ಗೆ ಪ್ರಮುಖ ಸುಳಿವುಗಳು ಸಿಕ್ಕಿವೆ

ತನಿಖೆಯ ಪ್ರಗತಿ

  • 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಯಿತು.
  • 60 ಗಂಟೆಯೊಳಗೆ 5.76 ಕೋಟಿ ವಶಪಡಿಸಿಕೊಳ್ಳಲಾಗಿದೆ
  • ಕೃತ್ಯಕ್ಕೆ ಬಳಸಿದ್ದ 01 ವಾಹನವನ್ನು ವಶಪಡಿಸಿಕೊಳ್ಳಲಾಯಿತು
  • ಒಟ್ಟು 6 ರಿಂದ 8 ಜನರ ಗುಂಪು ಈ ಕೃತ್ಯದಲ್ಲಿ ಭಾಗಿಯಾಗಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robbery in Bangalore 7 crore Robbery Robbery
Advertisment
Advertisment
Advertisment