Advertisment

ಬೆಂಗಳೂರು ಕೋರ್ಟ್ ನಲ್ಲಿ ನಟ ದರ್ಶನ್ ಕೇಸ್ ವಿಚಾರಣೆ : ಸಮಯ ಕೇಳಿದ ವಕೀಲರು, ವಿಚಾರಣೆ ಮುಂದೂಡಿಕೆ

ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ನಡೆದಿದೆ. ಈಗಾಗಲೇ ಆರೋಪಿಗಳ ವಿರುದ್ಧ ದೋಷಾರೋಪಣೆ ಹೊರಿಸಿರುವುದರಿಂದ ಕೋರ್ಟ್ ಈಗ ಸಾಕ್ಷಿ ನೋಟೀಸ್ ನೀಡಿ ವಿಚಾರಣೆಗೆ ಕರೆಯಬೇಕು. ಆದರೇ, ಇಂದು ಸಾಕ್ಷಿಗಳಿಗೆ ನೋಟೀಸ್ ನೀಡಿಲ್ಲ. ಕಾರಣವೇನು ಗೊತ್ತಾ?

author-image
Chandramohan
Darshan and Pavitra Gowda (1)

ಕೋರ್ಟ್ ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ

Advertisment
  • ಕೋರ್ಟ್ ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ
  • ಮತ್ತೆ ವಿಚಾರಣೆಗೆ ಸಿದ್ದರಾಗಲು ಸಮಯ ಕೇಳಿದ ಆರೋಪಿ ಪರ ವಕೀಲರು
  • ಇದರಿಂದಾಗಿ ವಿಚಾರಣೆ, ನವಂಬರ್ 19ಕ್ಕೆ ಮುಂದೂಡಿಕೆ


ಬೆಂಗಳೂರಿನ 64ನೇ ಸಿಸಿಎಚ್‌ ಕೋರ್ಟ್ ನಲ್ಲಿ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ನಡೆದಿದೆ.  ಕಳೆದ ವಿಚಾರಣೆ ವೇಳೆ ಕೋರ್ಟ್ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ದ ದೋಷಾರೋಪಣೆ ಹೊರಿಸಿತ್ತು. 
ಇಂದು ಸಾಕ್ಷಿಗಳಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯಬೇಕಾಗಿತ್ತು. ಆದರೇ, ಇಂದು ವಿಚಾರಣೆ ಆರಂಭವಾದಾಗ, ಆರೋಪಿಗಳ ಪರ ವಕೀಲರು ಈ ಕೇಸ್ ನಲ್ಲಿ 5 ಸಾವಿರ ಪುಟಗಳ ದಾಖಲೆಗಳಿವೆ.  ಇವುಗಳನ್ನೆಲ್ಲಾ ಅಧ್ಯಯನ ಮಾಡಿ, ವಿಚಾರಣೆಗೆ ಸಿದ್ದರಾಗಲು ತಮಗೆ ಕಾಲಾವಕಾಶ ಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ತಮಗೆ ವಿಚಾರಣೆಗೆ ಸಿದ್ದರಾಗಿ ವಾದ ಮಂಡಿಸಲು 15 ದಿನ ಕಾಲಾವಕಾಶ ಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು.
 ಇದರಿಂದಾಗಿ 64 ನೇ CCH ಕೋರ್ಟ್ ವಿಚಾರಣೆಯನ್ನು ನವಂಬರ್ 19 ಕ್ಕೆ ಮುಂದೂಡಿದೆ. 
ಈಗಾಗಲೇ ಪ್ರಾಸಿಕ್ಯೂಷನ್ ಪರ ವಕೀಲ ಪ್ರಸನ್ನ ಕುಮಾರ್ ಅವರು ಆರೋಪಿಗಳು ಹಾಗೂ ಆರೋಪಿಗಳ ಪರ ವಕೀಲರು ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ 6 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಹೇಳಿದೆ ಎಂದು 64 ನೇ ಸಿಸಿಎಚ್ ಕೋರ್ಟ್ ಗೆ ಮೆಮೊ ಸಲ್ಲಿಸಿದ್ದರು. 
ಇದಾದ ಬಳಿಕ ಕೋರ್ಟ್ ಕಳೆದ ವಾರ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಈಗ ಕೊಲೆ ಕೇಸ್ ನ ವಿಚಾರಣೆಯನ್ನು ಆರಂಭಿಸುವುದು ಬಾಕಿ ಇದೆ. ಸಾಕ್ಷಿಗಳಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕೋರ್ಟ್ ಗೆ ಹಾಜರಾಗಲು ಸೂಚಿಸಬೇಕು. ಆದರೇ, ಆರೋಪಿಗಳ ಪರ ವಕೀಲರು ಮತ್ತೆ ವಾದ ಮಂಡನೆಗೆ, ದಾಖಲೆಗಳ ಅಧ್ಯಯನಕ್ಕೆ ಸಮಯಾವಕಾಶ ಕೇಳಿದ್ದಾರೆ. ಇದರಿಂದಾಗಿ ಕೋರ್ಟ್ ನವಂಬರ್ 19 ಕ್ಕೆ ವಿಚಾರಣೆ ಮುಂದೂಡಿದೆ. 

Advertisment

Bangalore city civil court


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan case accused delay the trial
Advertisment
Advertisment
Advertisment