Advertisment

ಬೆಂಗಳೂರಿನ ಬಾಗಲೂರಿನಲ್ಲಿ ನಾಯಿ ಕೊಂದ ಪುಷ್ಪಲತಾ ವಿರುದ್ಧ ಮತ್ತೊಂದು ಕೇಸ್ ದಾಖಲು : ಹೊಸ ಕೇಸ್ ಯಾವುದು ಗೊತ್ತಾ?

ಮೊನ್ನೆಯಷ್ಟೇ ಬೆಂಗಳೂರಿನ ಬಾಗಲೂರಿನಲ್ಲಿ ಲಿಫ್ಟ್ ನಲ್ಲಿ ಸಾಕು ನಾಯಿ ಕೊಂದ ಪುಷ್ಪಲತಾ ವಿರುದ್ಧ ಕೇಸ್ ದಾಖಲಾಗಿತ್ತು. ಈಗ ಅದೇ ಪುಷ್ಪಲತಾ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣವನ್ನು ಕದ್ದಿದ್ದಾಳೆ. ಚಿನ್ನ ಕದ್ದಿದ್ದಾಗಿ ಒಪ್ಪಿಕೊಂಡಿದ್ದಾಳೆ.

author-image
Chandramohan
Pet Dog killer arrested

ಸಾಕು ನಾಯಿ ಕೊಂದಿದ್ದ ಪುಷ್ಪಲತಾ ವಿರುದ್ಧ 2ನೇ ಕೇಸ್ ದಾಖಲು

Advertisment
  • ಸಾಕು ನಾಯಿ ಕೊಂದಿದ್ದ ಪುಷ್ಪಲತಾ ವಿರುದ್ಧ 2ನೇ ಕೇಸ್ ದಾಖಲು
  • ಕೆಲಸ ಮಾಡುತ್ತಿದ್ದ ಮನೆಯ ಚಿನ್ನ ಕದ್ದ ಆರೋಪದಲ್ಲಿ ಮತ್ತೊಂದು ಕೇಸ್ ದಾಖಲು
  • ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಪುಷ್ಪಲತಾ

ಬೆಂಗಳೂರಿನ  ಬಾಗಲೂರಿನಲ್ಲಿ ಲಿಫ್ಟ್ ನಲ್ಲಿ ನಾಯಿ ಮೇಲೆ ಹಲ್ಲೆ ಮಾಡಿ ಕೊಂದ ಪ್ರಕರಣದ ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.  ಚಿನ್ನಾಭರಣ ಕಳ್ಳತನ ಆರೋಪವೂ  ಮನೆಕೆಲಸದಾಕೆ  ಪುಷ್ಪಲತಾ  ವಿರುದ್ಧ  ಬಂದಿದೆ.  ಮನೆಯ ಚಿನ್ನಾಭರಣ ಕದ್ದು  ಆರೋಪದಡಿ ಮತ್ತೊಂದು ಕೇಸ್ ದಾಖಲಾಗಿದೆ.

Advertisment

ನಾಯಿಮರಿಯನ್ನ ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಪುಷ್ಪಲತಾ ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.  ಇದೀಗ  ಬಾಗಲೂರು ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.  ರಾಶಿಕ ನೀಡಿದ ದೂರಿನ ಮೇರೆಗೆ ಪುಷ್ಟಲತಾ ಮೇಲೆ ಎಫ್ಎಆರ್ ದಾಖಲಾಗಿದೆ. ನವಂಬರ್ 2 ರಂದು ಮನೆಯ ವಾರ್ಡ್ ರೋಬ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಾಣೆಯಾಗಿದೆ.. ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ, ಒಂದು ಉಂಗುರ ಹಾಗೂ ಒಂದು ವಜ್ರದ ಉಂಗುರ ಕಾಣೆಯಾಗಿದೆ..
ಮನೆಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ  ಪೊಲೀಸರು  ವಿಚಾರಣೆ ನಡೆಸಿದ್ದರು. ಪುಷ್ಪಲತಾ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.  ಹೀಗಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕದ್ದ ಚಿನ್ನವನ್ನು   ಅದೇ ಮನೆಯಲ್ಲಿ ಬಚ್ಚಿಟ್ಟಿದ್ದಾಗಿ  ಮನೆಕೆಲಸದಾಕೆ ಪುಷ್ಪಲತಾ ಹೇಳಿದ್ದಾಳೆ.  ಯುವತಿ ಕಾಲೇಜಿಗೆ ಹೋದಾಗ ಆರೋಪಿ ಪುಷ್ಪಾ  ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.  ಈ ವೇಳೆ ಡ್ರಾಯರ್ ನಲ್ಲಿಟ್ಟಿದ್ದ ಚಿನ್ನಾಭರಣ ಕದ್ದು ತಾನು ಮಲಗಿಕೊಳ್ಳುವ ಮಂಚದ ಕೆಳಗೆ ಬಚ್ಚಿಟ್ಟಿದ್ದಳು.  ಕಳ್ಳತನವೆಸಗಿ ಬಳಿಕ ಮನೆಯಲ್ಲಿದ್ದ ನಾಯಿಮರಿಯನ್ನ  ಪುಷ್ಪಲತಾ ಸಾಯಿಸಿದ್ದಳು.

Pet Dog killer arrested02
ಆರೋಪಿ ಪುಷ್ಪಲತಾ ಹಾಗೂ ಮನೆ ಮಾಲಕಿ ರಾಶಿ

ಬಾಗಲೂರು ಪೊಲೀಸ್ ಠಾಣೆಯಲ್ಲಿ  ಪುಷ್ಪಲತಾ ವಿರುದ್ಧ  ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. 

Pet dog beaten to death
Advertisment
Advertisment
Advertisment