ಬಿಕ್ಲು ಶಿವ ಕೊಲೆ ಕೇಸ್‌: ಕೆ.ಆರ್‌.ಪುರದ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬಂಧನ ಭೀತಿ : ಸಿಗದ ನಿರೀಕ್ಷಣಾ ಜಾಮೀನು

ಬೆಂಗಳೂರಿನ ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬಂಧನದ ಭೀತಿ ಎದುರಾಗಿದೆ. ಹೈಕೋರ್ಟ್ ಭೈರತಿ ಬಸವರಾಜುಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ಪೊಲೀಸರು ಭೈರತಿ ಬಸವರಾಜುರನ್ನು ಬಂಧಿಸಬಹುದು.

author-image
Chandramohan
ರೌಡಿ ಶೀಟರ್‌ ಬಿಕ್ಲು ಶಿವ ಕೊ*ಲೆ ಪ್ರಕರಣ; ಶಾಸಕ ಬೈರತಿ ಬಸವರಾಜ್ ವಿರುದ್ಧ FIR

ಶಾಸಕ ಭೈರತಿ ಬಸವರಾಜು ಮತ್ತು ಕೊಲೆಯಾದ ಬಿಕ್ಲು ಶಿವ

Advertisment
  • ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬಂಧನದ ಭೀತಿ
  • ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಬಂಧನದ ಭೀತಿ
  • ಹೈಕೋರ್ಟ್ ನಲ್ಲಿ ಭೈರತಿ ಬಸವರಾಜುಗೆ ಸಿಗದ ನಿರೀಕ್ಷಣಾ ಜಾಮೀನು

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ  ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬಂಧನದ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಶಾಸಕ ಭೈರತಿ ಬಸವರಾಜು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೇ, ಹೈಕೋರ್ಟ್‌ನ ಜಸ್ಟೀಸ್ ಸುನೀಲ್ ಯಾದವ್ ಅವರ ಪೀಠವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಆದರೇ, ಈ ಕೊಲೆ ಕೇಸ್ ನಲ್ಲಿ ಕೋಕಾ ಕಾಯ್ದೆ ಅನ್ವಯವಾಗುವುದಿಲ್ಲವೆಂದು ಆದೇಶ ನೀಡಿದೆ.   ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸಲು ಭೈರತಿ ಬಸವರಾಜ್ ಗೆ ಹೈಕೋರ್ಟ್  ಸೂಚನೆ ನೀಡಿದೆ.  ಆದರೇ, ಅಲ್ಲಿಯವರೆಗೂ ಭೈರತಿ ಬಸವರಾಜುಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದೆ.  ಹೈಕೋರ್ಟ್ ನ ಈ  ಆದೇಶದಿಂದ  ಭೈರತಿ ಬಸವರಾಜುಗೆ ಬಂಧನದ  ಭೀತಿ ಎದುರಾಗಿದೆ. 

ಆದರೆ ಉಳಿದ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಇದೆ.   ಕೋಕಾ ಕಾಯ್ದೆ ಅನ್ವಯಿಸಿರುವುದು ರದ್ದಾಗಿರುವ ಹಿನ್ನೆಲೆಯಲ್ಲಿ  ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಕೂಡ ಇದೆ. ಇನ್ನೂ ಆರೋಪಪಟ್ಟಿ ದಾಖಲಾಗಿಲ್ಲದೇ ಇರುವುದರಿಂದ  ಜಾಮೀನು ಸಿಗುವ  ಸಾಧ್ಯತೆ ಇದೆ. 

ಬಿಕ್ಲು ಶಿವನ ಕೇಸ್​​ಗೆ ಟ್ವಿಸ್ಟ್​​​.. ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಸಂಕಷ್ಟ







ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP MLA BYRATHI Basavaraju may be arrested by Police in biklu shiva murder case
Advertisment