ಯಲಹಂಕ ಬಳಿ ಜೀವವೈವಿಧ್ಯ ಉದ್ಯಾನ ನಿರ್ಮಾಣ : ಬೈಯ್ಯಪ್ಪನಹಳ್ಳಿ ಎನ್‌ಜಿಇಎಫ್ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ

ಬೆಂಗಳೂರಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಎರಡು ಪಾರ್ಕ್ ಗಳು ಜನರಿಗಾಗಿ ತಲೆ ಎತ್ತಲಿವೆ. ಉತ್ತರ ಭಾಗದಲ್ಲಿ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ಬಸವಣ್ಣ ಜೀವವೈವಿಧ್ಯ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇನ್ನೂ ಬಯ್ಯಪ್ಪನಹಳ್ಳಿಯ ಎನ್‌ಜಿಇಎಫ್ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುತ್ತಿದೆ.

author-image
Chandramohan
Biological park and tree park set up in bangalore

ಬೆಂಗಳೂರಿನಲ್ಲಿ 2 ಪಾರ್ಕ್ ನಿರ್ಮಾಣ

Advertisment
  • ಬೆಂಗಳೂರಿನಲ್ಲಿ 2 ಪಾರ್ಕ್ ನಿರ್ಮಾಣ
  • ಅರಣ್ಯ ಇಲಾಖೆಯಿಂದ ಮಾದಪ್ಪನಹಳ್ಳಿಯಲ್ಲಿ ಜೀವವೈವಿಧ್ಯ ಪಾರ್ಕ್ ನಿರ್ಮಾಣ
  • ಕೈಗಾರಿಕಾ ಇಲಾಖೆಯಿಂದ NGEF ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣ

ಬೆಂಗಳೂರು ನಗರದಲ್ಲಿ ಸದ್ಯ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಎಂಬ ಎರಡು ದೊಡ್ಡ ಉದ್ಯಾನವನಗಳೂ ಇವೆ. ಇವೆರಡೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ದೊಡ್ಡ ಉದ್ಯಾನವನಗಳು. ಬೆಂಗಳೂರು ಮಹಾನಗರಕ್ಕೆ   ಈ ಪಾರ್ಕ್ ಗಳೇ ಹಸಿರು ಶ್ವಾಸಕೋಸದಂತೆ ಇವೆ. ಈಗ ಮೂರನೇ ಅತಿ ದೊಡ್ಡ ಪಾರ್ಕ್ ಅನ್ನು ನಿರ್ಮಿಸಲು ರಾಜ್ಯ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆಯ ವಿಶಾಲ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ  ಜೀವವೈವಿಧ್ಯ ಉದ್ಯಾನವನ್ನು ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ಇದು ಬೆಂಗಳೂರು ನಗರಕ್ಕೆ ಮತ್ತೊಂದು ಐತಿಹಾಸಿಕ ಕೊಡುಗೆ ಆಗಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಬೆಂಗಳೂರಿನ ಉತ್ತರ  ಹೋಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯೇ ಈ ಹಿಂದೆ ಅರಣ್ಯ  ಅಭಿವೃದ್ದಿ ನಿಗಮಕ್ಕೆ ನೀಡಿತ್ತು. ಈಗ ಆ ಪ್ರದೇಶವನ್ನು ಮತ್ತೆ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲೇ ಬಸವಣ್ಣ ಜೀವವೈವಿಧ್ಯ ಪಾರ್ಕ್ ನಿರ್ಮಿಸಲಾಗುತ್ತೆ.

1760ರಲ್ಲಿ ನಿರ್ಮಾಣವಾದ ಲಾಲ್‌ಬಾಗ್ ಮತ್ತು 1870ರ ಕಬ್ಬನ್ ಪಾರ್ಕ್ ನಂತರ, ಬಹುತೇಕ ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತಸದ ವಿಚಾರ. ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ ಅಭಿವೃದ್ಧಿಯಾಗಲಿರುವ ಈ ಉದ್ಯಾನವು ರಾಜ್ಯ ರಾಜಧಾನಿಯ ಮೂರನೇ ಅತಿದೊಡ್ಡ ಉದ್ಯಾನವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. 
ಜೀವ ವೈವಿಧ್ಯ ಉದ್ಯಾನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು 50 ಕೋಟಿ ರೂಪಾಯಿ ಅನುದಾನ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.




ಇನ್ನೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಬೈಯ್ಯಪ್ಪನಹಳ್ಳಿಯ ಎನ್‌ಜಿಇಎಫ್ ಫ್ಯಾಕ್ಟರಿ ಜಾಗದಲ್ಲಿ 105 ಎಕರೆ ಜಾಗದಲ್ಲಿ ಮೊದಲ ಟ್ರೀ ಪಾರ್ಕ್ ನಿರ್ಮಿಸಲು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಿರ್ಧರಿಸಿದ್ದಾರೆ. ಎನ್‌ಜಿಇಎಫ್ ಫ್ಯಾಕ್ಟರಿ ಜಾಗಕ್ಕೆ ಇಂದು ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
NGEF ಜಾಗದ ಪೈಕಿ 65 ಎಕರೆ ಜಾಗದಲ್ಲಿ ಬೋಟಾನಿಕಲ್ ಗಾರ್ಡನ್ ಮಾದರಿಯಲ್ಲಿ ವಿವಿಧ ಮರಗಳನ್ನು ಬೆಳೆಸಲಾಗುತ್ತೆ.  ನಾಲ್ಕು ಹಂತದಲ್ಲಿ ಎನ್‌ಜಿಇಎಫ್ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುತ್ತೆ. ಮೊದಲ ಹಂತದಲ್ಲಿ 11.5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತೆ. ಹಂತ-1, 1ಎ, 1ಬಿ, ಮತ್ತು 2 ಹಂತಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತೆ. ಇನ್ನೂ ಎನ್‌ಜಿಇಎಫ್ ಜಾಗದಲ್ಲಿ ಈಗಾಗಲೇ 8,500 ಮರಗಳಿದ್ದು, ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತೆ. ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇನ್ನೂ ಫ್ಯಾಕ್ಟರಿ ಜಾಗದಲ್ಲಿ ನೀಲಗಿರಿ ಮರಗಳೂ ಸಹ ಇದ್ದು, ಇವುಗಳ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುತ್ತೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹೇಳಿದ್ದಾರೆ. 

Biological park and tree park set up in bangalore (1)





NGEF ಆವರಣದಲ್ಲಿರುವ ಆಡಳಿತ ಕಟ್ಟಡಗಳು ಮತ್ತು ಕೈಗಾರಿಕಾ ಶೆಡ್‌ಗಳು ರಚನಾತ್ಮಕವಾಗಿ ಸುರಕ್ಷಿತವಾಗಿವೆ ಎಂದು ಪಾಟೀಲ್ ಹೇಳಿದರು, IISc ವಿಜ್ಞಾನಿಗಳು ಅವುಗಳ ಸಾಮರ್ಥ್ಯವನ್ನು ಪ್ರಮಾಣೀಕರಿಸುತ್ತಾರೆ .  ಅವುಗಳನ್ನು ನವೀಕರಿಸಲಾಗುತ್ತದೆ ಮತ್ತು ಮರುಬಳಕೆ ಮಾಡಲಾಗುತ್ತದೆ. 5,000-7,000 ವಾಹನಗಳಿಗೆ ಬಹುಮಹಡಿ ಪಾರ್ಕಿಂಗ್ ಸೌಲಭ್ಯವನ್ನು ನಿರ್ಮಿಸಲು ಕಾಂಪೌಂಡ್‌ನ ಹೊರಗೆ 4.5 ಎಕರೆ ಭೂಮಿಯನ್ನು ಬಳಸಲಾಗುವುದು ಎಂದು ಅವರು ಹೇಳಿದರು. ಸಮ್ಮೇಳನಗಳು, ಸಮಾರಂಭಗಳು, ಸೆಮಿನಾರ್‌ಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಮೋಟಾರ್ ಶೆಡ್‌ಗಳಲ್ಲಿ ಕನಿಷ್ಠ 15,000 ಆಸನ ಸಾಮರ್ಥ್ಯವಿರುವ ಎರಡು ಸಮಾವೇಶ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.

ಇದಲ್ಲದೆ, ಸರ್ಕಾರದ ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿ (KITS) 'ಇನ್ನೋವರ್ಸ್' ಎಂಬ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಕೇಂದ್ರವನ್ನು ಸ್ಥಾಪಿಸಲಿದೆ. ಐಟಿ-ಬಿಟಿ ಇಲಾಖೆಯು ₹100 ಕೋಟಿ ಅಂದಾಜು ವೆಚ್ಚದಲ್ಲಿ ತಂತ್ರಜ್ಞಾನ ನಾವೀನ್ಯತೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಿದೆ"  ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 
ಆರ್ಬೊರೇಟಂ ವಿಶ್ವ ದರ್ಜೆಯ ಶಿಲ್ಪ ಉದ್ಯಾನ, NGEF ವಸ್ತುಸಂಗ್ರಹಾಲಯ ಮತ್ತು ಆಂಫಿಥಿಯೇಟರ್ ಅನ್ನು ಒಳಗೊಂಡಿರುತ್ತದೆ, ಆವರಣದಲ್ಲಿ ಯಾವುದೇ ಮಾಲ್ ಅನ್ನು ಯೋಜಿಸಲಾಗಿಲ್ಲ. ಈ ಯೋಜನೆಯು ಪೂರ್ವ ಬೆಂಗಳೂರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ಗಿಂತ ಉತ್ತಮವಾದ ಹಸಿರು ಸ್ಥಳವಾಗಿ ಅಭಿವೃದ್ಧಿಪಡಿಸುತ್ತದೆ. ಪ್ರವೇಶದ್ವಾರಕ್ಕೆ ಅಗತ್ಯವಿರುವ ಭೂಮಿಯ ಒಂದು ಸಣ್ಣ ಭಾಗ ಮಾತ್ರ ನಮ್ಮ ಮೆಟ್ರೋ ವ್ಯಾಪ್ತಿಗೆ ಬರುತ್ತದೆ.  ಅದನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಯಾವುದೇ ಮರಗಳನ್ನು ಕತ್ತರಿಸಲಾಗುವುದಿಲ್ಲ ಮತ್ತು ಸ್ಥಳವನ್ನು ಅಂತರರಾಷ್ಟ್ರೀಯ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ"  ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Park construction
Advertisment