ಸಿದ್ದರಾಮಯ್ಯಗೆ ಅಭಿನಂದನೆ, ಆದರೂ ಡಿಕೆಶಿ ಸಿಎಂ ಗಾದಿಗೇರಬೇಕೆಂಬ ಬಯಕೆ ಇದೆ ಎಂದ ಶಾಸಕ ಇಕ್ಬಾಲ್ ಹುಸೇನ್‌

ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಕಳೆದ ತಿಂಗಳು ಜನವರಿ 6 ಅಥವಾ 9 ರಂದು ಡಿಕೆಶಿ ರಾಜ್ಯದ ಸಿಎಂ ಆಗ್ತಾರೆ ಎಂದು ಹೇಳಿದ್ದರು. ಆದರೇ, ಈಗ ಜನವರಿ 9ರವರೆಗೆ ಕಾದು ನೋಡೋಣ ಎನ್ನುತ್ತಿದ್ದಾರೆ. ಅದೇ ವೇಳೆ ಸಿದ್ದರಾಮಯ್ಯಗೆ ಅಭಿನಂದಿಸಿದ್ದಾರೆ.

author-image
Chandramohan
iqbal hussain
Advertisment


ಸಿಎಂ ಸಿದ್ದರಾಮಯ್ಯ, ದೇವರಾಜ ಅರಸು ದಾಖಲೆ ಸರಿಗಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ. ನೆಚ್ಚಿನ ನಾಯಕರು, ಅಲ್ಪಸಂಖ್ಯಾತರ ಮೇಲೆ ಕಾಳಜಿ ಇರುವ ನಾಯಕರು ಸಿದ್ದರಾಮಯ್ಯ. ಅತಿಹೆಚ್ಚು ಅವಧಿ ಸಿಎಂ ಆಗಿ ಕೆಲಸ ಮಾಡಿದ್ದಾರೆ.ದೇವರಾಜ ಅರಸುರವರ ದಾಖಲೆ ಮುರಿದಿದ್ದಾರೆ. ನನ್ನ ಕ್ಷೇತ್ರದ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದುಳಿದ ವರ್ಗದ ಬಗ್ಗೆ ಹೆಚ್ಚು ಚಿಂತನೆ ಮಾಡುವ ನಾಯಕ. ನಮ್ಮ ಪಕ್ಷದ ಆಸ್ತಿಯಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲಾ ಶೋಷಿತ ವರ್ಗದ ಮೇಲೆ ವಿಶೇಷ ಕಾಳಜಿಯಿಂದ ಆಡಳಿತ ಮಾಡ್ತಿದ್ದಾರೆ.  ದೇವರು ಅವರಿಗೆ ಆಯಸ್ಸು, ಆರೋಗ್ಯ ನೀಡಲಿ ಎಂದು ಪ್ರಾರ್ಥನೆ ಮಾಡ್ತೇನೆ ಎಂದು ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ  ಇಕ್ಬಾಲ್ ಹುಸೇನ್ ಹೇಳಿದ್ದಾರೆ. 
ಜನವರಿ  6 ಕ್ಕೆ‌ ಡಿಕೆಶಿಗೆ  ಸಿಎಂ ಆಗುವ  ಅವಕಾಶ ಸಿಗುತ್ತೆ ಎಂದು ಕಳೆದ ತಿಂಗಳು ಇದೇ ಇಕ್ಬಾಲ್ ಹುಸೇನ್ ಹೇಳಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್‌,  ನನ್ನದು ಎರಡು ಡೇಟ್ ಇದೆ, ಒಂದು ಜನವರಿ  6 ಇನ್ನೊಂದು ಜನವರಿ  9 .  ಈಗ ಜನವರಿ  6 ಮುಗಿದಿದೆ, ಇನ್ನೂ  ಜನವರಿ 9 ನೇ ತಾರೀಖು ಬಾಕಿ ಇದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತೆ.  ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ.  ಈಗಾಗಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ .  ಜನವರಿ 9ರ ವರೆಗೆ ಕಾದು ನೋಡೊಣ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ. 

ಪೂರ್ಣಾವಧಿ ಸಿಎಂ ಆಗಬೇಕು ಎಂದು ಸಿದ್ದರಾಮಯ್ಯ ಬಯಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್,  ಎಲ್ಲರಿಗೂ ಆಸೆ ಇರುತ್ತೆ, ಅದರಲ್ಲಿ ತಪ್ಪೇನು ಇಲ್ಲ. ನಮಗೂ ಒಂದು ಆಸೆ ಇದೆ, ಡಿಕೆಶಿ  ಅವರಿಗೆ ಅವಕಾಶ ಸಿಗಬೇಕು ಎಂಬುದು.  ಡಿ.ಕೆ.ಶಿವಕುಮಾರ್ ಕೂಡ ಸಿಎಂ ಸ್ಥಾನದಲ್ಲಿ ಕೂತು, ಒಳ್ಳೆಯ ಆಡಳಿತ ನೀಡಬೇಕು ಎಂಬ ಬಯಕೆ ಇದೆ. ಡಿಕೆಶಿ ಸಿಎಂ ಆಗೇ ಆಗ್ತಾರೆ, ನಾನು ನನ್ನ ಮಾತಿಗೆ ಈಗಲೂ ಬದ್ಧ ಎಂದು ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. 

iqbal hussain
Advertisment