Advertisment

ಸಿಲಿಂಡರ್ ಸ್ಪೋಟ.. ವೃದ್ಧೆ ಸಾವು, ಮೂವರು ಸ್ಥಿತಿ ಗಂಭೀರ.. ಆಗಿದ್ದಾದರೂ ಏನು..?

ಬೆಂಗಳೂರಿನ ಕೆ.ಆರ್ ಪುರಂ ವ್ಯಾಪ್ತಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಸ್ಪೋಟದ ತೀವ್ರತಗೆ ಹಿಂದಿನ ಮನೆಯ ಮಹಿಳೆಗೂ ಗಾಯಗಳಾಗಿದ್ದು, ಅಕ್ಕ-ಪಕ್ಕದ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ

author-image
Bhimappa
cylinder death 2
Advertisment

ಬೆಂಗಳೂರು:ಬೆಂಗಳೂರಿನ ಕೆ.ಆರ್ ಪುರಂ ವ್ಯಾಪ್ತಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. 

Advertisment

ಕೆ.ಆರ್ ಪುರಂನಲ್ಲಿ ಇಂದು ಬೆಳಗ್ಗೆ 7:15 ರ ಸುಮಾರಿಗೆ ನಡೆದ ದುರ್ಘಟನೆಯಲ್ಲಿ ವೃದ್ಧೆ ಅಕ್ಕಯ್ಯಮ್ಮ (80) ಸಾವನ್ನಪ್ಪಿದ್ದು, ಮನೆ ಸಂಪೂರ್ಣ ಛಿದ್ರವಾಗಿದೆ. ಸ್ಪೋಟದ ತೀವ್ರತಗೆ ಹಿಂದಿನ ಮನೆಯ ಮಹಿಳೆಗೂ ಗಾಯಗಳಾಗಿದ್ದು, ಅಕ್ಕ-ಪಕ್ಕದ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಈ ದುರಂತದಿಂದಾಗಿ ಚಂದನಾ (22), ಶೇಖರ್ (52) ಹಾಗೂ ಕಿರಣ್ ಕುಮಾರ್ (25) ಸ್ಥಿತಿ ಗಂಭೀರವಾಗಿದ್ದು, ಅಸ್ಪತ್ರೆಗೆ ದಾಖಲಿಸಿಲಾಗಿದೆ.

cylinder death 3

ಇನ್ನೂ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವೃದ್ಧೆಯ ಶವವನ್ನು ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೈಟ್​ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಇಂದು ಬೆಳಗ್ಗೆ ನಡೆದ ಘಟನೆಯಲ್ಲಿ ಅಕ್ಕಯಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಇನ್ನುಳಿದ ಮೂವರಿಗೂ ಗಾಯಗಳಾಗಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್​ನಂತೆ ಕಂಡುಬರುತ್ತಿದೆ. ತಜ್ಞರ ಮಾಹಿತಿ ಬಳಿಕ‌ ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ:ಗ್ಯಾಸ್ ಗೀಸರ್ ಸೋರಿಕೆಯಿಂದ ಅಕ್ಕ- ತಂಗಿ ಇಬ್ಬರು ಸಾವು.. ಅಷ್ಟಕ್ಕೂ ಆಗಿದ್ದೇನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Kannada News cylinder blast
Advertisment
Advertisment
Advertisment