ಏರ್ ಪೋರ್ಟ್ ನಿಂದ ಸಿಐಡಿ ಕಚೇರಿಯತ್ತ ಭೈರತಿ ಬಸವರಾಜು ಕರೆದೊಯ್ದು ಪೊಲೀಸರು: ನಾಳೆ ಕೋರ್ಟ್ ಗೆ ಹಾಜರುಪಡಿಸಿ ಪೊಲೀಸ್ ವಶಕ್ಕೆ

ರೌಡಿ ಷೀಟರ್ ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಕೊನೆಗೂ ಕೆ.ಆರ್.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜು ಬಂಧನವಾಗಿದೆ. ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂಧಿಸಿ ಸಿಐಡಿ ಕಚೇರಿಗೆ ಭೈರತಿ ಬಸವರಾಜುರನ್ನು ಪೊಲೀಸರು ಕರೆದೊಯ್ದಿದ್ದಾರೆ. ನಾಳೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತೆ.

author-image
Chandramohan
Byrathi basavaraj arrested by police

ಬೆಂಗಳೂರು ಏರ್ ಪೋರ್ಟ್ ನಿಂದ ಹೊರ ಬಂದ ಭೈರತಿ ಬಸವರಾಜು

Advertisment
  • ಬೆಂಗಳೂರು ಏರ್ ಪೋರ್ಟ್ ನಿಂದ ಹೊರ ಬಂದ ಭೈರತಿ ಬಸವರಾಜು
  • ತಾನೇ ಹೋಗಿ ಪೊಲೀಸ್ ಜೀಪ್ ನಲ್ಲಿ ಕುಳಿತ ಶಾಸಕ ಭೈರತಿ ಬಸವರಾಜು

ಗುಜರಾತ್ ರಾಜ್ಯದ ಅಹಮದಾಬಾದ್ ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ಬಿಜೆಪಿ ಶಾಸಕ ಭೈರತಿ ಬಸವರಾಜುರನ್ನು ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದೆ. ಭಾರತಿನಗರ ರೌಡಿ ಷೀಟರ್ ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜುರನ್ನು ಬಂಧಿಸಲಾಗಿದೆ.  ಏರ್ ಪೋರ್ಟ್ ನಲ್ಲಿ ಸಿಐಡಿ ಡಿವೈಎಸ್ಪಿ ಪಿ.ಗೌತಮ್ ಬಂಧಿಸಿ ಕರೆದೊಯ್ಯುತ್ತಿದ್ದಾರೆ. 

ಬಿಜೆಪಿ ಶಾಸಕ ಬೈರತಿ ಬಸವರಾಜ್ ರನ್ನು ಬಂಧಿಸಿ ಸಿಐಡಿ ಪೊಲೀಸರು ಈಗ ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಕರೆ ತರುತ್ತಿದ್ದಾರೆ.  ಇಂದು ಶಾಸಕ ಭೈರತಿ ಬಸವರಾಜ್ ರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು  ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತೆ. ಸಿಐಡಿ ಕಚೇರಿಯಲ್ಲಿ ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತೆ.  ಕಾನೂನಿನಲ್ಲಿ ಬಂಧಿಸಿದ 24 ಗಂಟೆ ಒಳಗೆ ಮ್ಯಾಜೀಸ್ಟ್ರೇಟ್ ಮುಂದೆ ಹಾಜರುಪಡಿಸ ಬೇಕು ಎಂದು ಹೇಳಲಾಗಿದೆ. ಹೀಗಾಗಿ   ಬಹುತೇಕ ನಾಳೆ ನ್ಯಾಯಾಧೀಶರ ಎದುರು ಪೊಲೀಸರು  ಹಾಜರು ಪಡಿಸಲಿದ್ದಾರೆ.  ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ಎದುರು ರಿಮ್ಯಾಂಡ್ ಅಪ್ಲಿಕೇಷನ್  ಅನ್ನು ಪೊಲೀಸರು ಸಲ್ಲಿಸುವರು.  ರಿಮ್ಯಾಂಡ್ ಅಪ್ಲಿಕೇಶನ್ ನಲ್ಲಿ ಪ್ರಕರಣದಲ್ಲಿ ಆರೋಪಿ ಬೈರತಿ ಬಸವರಾಜ್ ಪಾತ್ರವೇನು? ಬೈರತಿ ಬಸವರಾಜ್ ಮೇಲಿನ ಆರೋಪಗಳ ಕುರಿತ ಮಾಹಿತಿ ನೀಡುವರು.   ಕೇಸ್ ಗೆ  ಸಂಬಂಧಿಸಿದ ಸಾಕ್ಷ್ಯ ಮತ್ತು ಆರೋಪಗಳ ಸಂಬಂಧಿಸಿದ ಹೇಳಿಕೆಗಳನ್ನು ಒಳಗೊಂಡ ರಿಮ್ಯಾಂಡ್ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸಲಾಗುತ್ತೆ.  ರಿಮ್ಯಾಂಡ್ ಅರ್ಜಿ ಸಲ್ಲಿಸಿ ಪೊಲೀಸ್ ವಶಕ್ಕೆ  ಪಡೆದು ವಿಚಾರಣೆ ಮಾಡಲು ಪೊಲೀಸ್ ಕಸ್ಟಡಿಗೆ ಆರೋಪಿಯನ್ನು ನೀಡಬೇಕೆಂದು ಪೊಲೀಸರು ಮನವಿ ಮಾಡುವರು.  ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕ ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಎಲ್ಲ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಇಟ್ಟು ಪೊಲೀಸ್ ವಶಕ್ಕೆ ನೀಡುವಂತೆ ಕೋರ್ಟ್ ಗೆ ಪ್ರಾಸಿಕ್ಯೂಷನ್ ಪರ ವಕೀಲರು ಮನವಿ ಮಾಡುವರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Byrathi Basavaraj MLA BYRATHI BASAVARAJ ARREST IN MURDER CASE
Advertisment