ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲ್‌, ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಕೈ ಕೈ ಮಿಲಾಯಿಸಿ ಜಗಳ!

ಬೀದರ್ ಜಿಲ್ಲಾ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಧ್ಯೆ ಜೋರು ಜಗಳ ನಡೆದಿದೆ. ಬಳಿಕ ಭೀಮರಾವ್ ಪಾಟೀಲ್ ಸೀದಾ ಹೋಗಿ ಸಿದ್ದು ಪಾಟೀಲ್ ಜೊತೆ ಕೈ ಕೈ ಮಿಲಾಯಿಸಿದ್ದಾರೆ.

author-image
Chandramohan
BIDAR ZP KDP MEETING FIGHT (1)
Advertisment

ಬೀದರ್ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ MLA &MLC ನಡುವೆ ಗಲಾಟೆ ನಡೆದಿದೆ.  ಬೀದರ್ ಜಿಲ್ಲೆಯ ಹುಮಾನಾಬಾದ್  ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ಪರಿಷತ್ ಸದಸ್ ಭೀಮರಾವ್ ಪಾಟೀಲ್ ಮಧ್ಯೆ ವಾಗ್ವಾದ ನಡೆದು ಅದು ವಿಕೋಪಕ್ಕೆ ಹೋಗಿದೆ. ಭೀಮರಾವ್ ಪಾಟೀಲ್ ತಮ್ಮ ಕುರ್ಚಿಯಿಂದ ಎದ್ದು ಸೀದಾ ಸಿದ್ದು ಪಾಟೀಲ್ ಕಡೆಗೆ ಹೋಗಿ ತಳ್ಳಾಡಿದ್ದಾರೆ. ಲೇಔಟ್  ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. 
ಭೀಮರಾವ್ ಪಾಟೀಲ್ ಹಾಗು ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ನಡುವೆ ವಾಗ್ವಾದದ ವೇಳೆ ಮತ್ತೊಬ್ಬ  ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ಮಧ್ಯೆಪ್ರವೇಶ ಮಾಡಿದ್ದರು. ಚಂದ್ರಶೇಖರ್ ಪಾಟೀಲ್  ಹಾಗೂ ಭೀಮರಾವ್ ಪಾಟೀಲ್ ಇಬ್ಬರೂ ಸೋದರರು. 
ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಕೂಡ ನಡೆಯಿತು.  ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ  ಕೆಡಿಪಿ ಸಭೆ ಶಾಸಕರು ಹಾಗೂ ಪರಿಷತ್ ಸದಸ್ಯರ ನಡುವೆ ಜಗಳಕ್ಕೆ ವೇದಿಕೆಯಾಯಿತು. ಸಭೆಯಲ್ಲಿ ಸಚಿವ ರಹೀಂ ಖಾನ್, ಡಿಸಿ ಶಿಲ್ಪಾ ಶರ್ಮಾ, ಸಿಇಓ ಗಿರೀಶ್ ಬೋಧಲೆ, ಎಸ್ಪಿ ಪ್ರದೀಪ್ ಗುಂಟೆ ಭಾಗಿಯಾಗಿದ್ದರು.  ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. 
ಇಂದಿನ ಕೆಡಿಪಿ ಸಭೆಯಲ್ಲಿ  ಹುಮಾನಾಬಾದ್ ಕ್ಷೇತ್ರದ  ಅರಣ್ಯ ಜಮೀನಿನ ಕುರಿತು ಚರ್ಚೆ ನಡೆಯುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಇಬ್ಬರೂ ಮಾತನಾಡುತ್ತಿದ್ದರು.  ಈ ವೇಳೆ ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪ, ಟೀಕೆ- ಟಿಪ್ಪಣಿ ಮಾಡುತ್ತಿದ್ದರು.

BIDAR ZP KDP MEETING FIGHT




ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮಾತನಾಡುವಾಗ ಅದನ್ನು ವಿರೋಧಿಸಿದ ಕಾಂಗ್ರೆಸ್ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ತಮ್ಮ ಕುರ್ಚಿಯಿಂದ ಎದ್ದು, ಸೀದಾ ಸಿದ್ದು ಪಾಟೀಲ್ ಕುರ್ಚಿ ಕಡೆಗೆ ಹೋಗಿ ಕೈ ಮಿಲಾಯಿಸಿಬಿಟ್ಟರು. ತಕ್ಷಣವೇ ಅಡಿಷನಲ್ ಎಸ್ಪಿ ಚಂದ್ರಕಾಂತ್ ಪೂಜಾರಿ ಮಧ್ಯೆ ಪ್ರವೇಶಿಸಿ, ಜಗಳ ಬಿಡಿಸಿದ್ದರು.  


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIDAR ZP KDP MEETING FIGHTING
Advertisment