ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್​ಬಾಸ್​ ಸ್ಪರ್ಧಿ ರಜತ್​ ಕಿಶನ್

ಕ್ಯಾಮೆರಾಗಳನ್ನು ಹೊಡೆದು ಹಾಕಿ, ಅಲ್ಲಿದ್ದವರ ಜೊತೆ ಕೆಟ್ಟದಾಗಿ ವರ್ತನೆ ಮಾಡಿದರು. ನನ್ನನ್ನು ಕಾರಿನಲ್ಲಿ ಕೂಡಿಸಿ, ದಯವಿಟ್ಟು ಹೋಗಿ ಸರ್.. ಎಂದು ಹೇಳಿದರು. ಏನಕ್ಕೆ ಹೊಡೆಯುತ್ತಿದ್ದೀರಿ, ಅವರು ಏನ್ ತಪ್ಪು ಮಾಡಿದ್ದಾರೆ?, ಒಂದು ನಿಮಿಷ ಇರಿ ಎಂದೇ?.

author-image
Bhimappa
Advertisment

ಧರ್ಮಸ್ಥಳದ ಪಾಂಗಳ ಪ್ರದೇಶದಲ್ಲಿ ಮೂವರು ಯೂಟ್ಯೂಬರ್ಸ್​ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುಟ್ಯೂಬರ್ಸ್​ ಮೇಲೆ ಹಲ್ಲೆ ಆಗಿದೆ. ಇದೇ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸ್ಥಳೀಯರು ಹಲ್ಲೆ ಮಾಡಿ ಅವರ ಕ್ಯಾಮೆರಾಗಳನ್ನು ಹೊಡೆದು ಹಾಕಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಬಿಗ್​ ಬಾಸ್​ ಖ್ಯಾತಿ ರಜತ್ ಕಿಶನ್​ ಇದ್ದರು. ಅಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ. 

ಇನ್ನು ಯೂಟ್ಯೂಬರ್ಸ್​ ಮೇಲಿನ ಹಲ್ಲೆ ಖಂಡಿಸಿದ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಹಲ್ಲೆಗೊಳಗಾದ ಯೂಟ್ಯೂಬರ್​ಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

dharmasthala Rajath kishan, Akshita Rajath
Advertisment