ನಿರಂತರ ಕಾಡಾನೆ ದಾಳಿ, ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದಲ್ಲಿ ಬಂದ್‌

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ತಾಲ್ಲೂಕುಗಳಲ್ಲಿ ನಿರಂತರವಾಗಿ ಕಾಡಾನೆ ದಾಳಿಯಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಕಾಡಾನೆ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸ್ ಲಾಠಿಚಾರ್ಜ್ ಕೂಡ ನಡೆದಿದೆ. ಇದನ್ನು ಖಂಡಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಂದ್ ನಡೆಸಲಾಗಿದೆ.

author-image
Chandramohan
wild elephant attack in chikkamagaluru (1)
Advertisment

ನಿರಂತರ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ಮಲೆನಾಡಿಗರನ್ನ ನಿನ್ನೆ ಪೊಲೀಸರ ಲಾಠಿ ಏಟು ಮತ್ತಷ್ಟು ಆಕ್ರೋಶಿತರನ್ನಾಗಿಸಿತ್ತು. ಲಾಠಿ ಬೀಸಿದ ಪೊಲೀಸರ ನಡೆ ವಿರುದ್ಧ ಶೃಂಗೇರಿ ಕ್ಷೇತ್ರದಲ್ಲಿ ಇವತ್ತು ಬಂದ್​​ಆಚರಣೆ ಮಾಡಲಾಯ್ತು. ಕಾಡಾನೆ ಹಾವಳಿಗೆ ಜನ ಸಾಯ್ತಿದ್ದಾರೆ.  ಹೀಗಾಗಿ ಶಾಶ್ವತ ಪರಿಹಾರ ಮಾಡಿಕೊಡಿ ಅನ್ನೋದು ಈ ಭಾಗದ ಜನರ ಬೇಡಿಕೆಯಾಗಿದೆ. 
ನಿನ್ನೆ ಕಾಫಿನಾಡಲ್ಲಿ ಪರಿಸ್ಥಿತಿ ಹೇಗಿತ್ತು ಅಂದರೇ,  ಒಂಟಿ ಸಲಗವೊಂದು ಮಹಿಳೆಯನ್ನ ತುಳಿದು ಹಾಕಿತ್ತು. ಇದರಿಂದ ಕೆಂಡಕಾರಿದ ಮಲೆನಾಡ ಮಂದಿ ಅರಣ್ಯ ಇಲಾಖೆ, ಸಚಿವರು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಲಾಠಿಚಾರ್ಜ್​ ಕೂಡಾ ನಡೆದಿದ್ದು. ಇದನ್ನ ಖಂಡಿಸಿ ಇವತ್ತು ಚಿಕ್ಕಮಗಳೂರಿನ ಮೂರು ತಾಲೂಕುಗಳಲ್ಲಿ ಬಂದ್​ ಆಚರಿಸಲಾಯ್ತ್ತು. 
ಇನ್ನು ಇಂದಿನ ಬಂದ್ ಗೆ ಮಲೆನಾಡಿಗರಿಂದ  ಪೂರ್ಣ ಪ್ರಮಾಣದ ಬೆಂಬಲ ಸಿಕ್ಕಿದೆ. ‌ವರ್ಷದಿಂದ ತಿಂಗಳಿಗೊಂದರಂತೆ ಹೆಣ ಬಿದ್ದಿದ್ದು ಮಲೆನಾಡಿಗರು ಆತಂಕದಲ್ಲಿ ಬದುಕುತ್ತಿದ್ದಾರೆ. ಕಾರ್ಮಿಕರು ಹೆದರಿ ಕೆಲಸಕ್ಕೆ ಬರುತ್ತಿಲ್ಲ.  ಬೆಳೆ ಕೈಗೆ ಬರುತ್ತಿಲ್ಲ. ತೋಟ ಹಾಳಾಗ್ತಿದೆ. ಹೀಗೆ ಮುಂದುವರಿದ್ರೆ ನಮಗೆ ಭವಿಷ್ಯವಿಲ್ಲ. ಬದುಕು-ಜೀವಕ್ಕೆ ಭದ್ರತೆ-ಗ್ಯಾರಂಟಿ ಎರಡೂ ಇಲ್ಲ ಎಂದು ಭವಿಷ್ಯದ ಬದುಕಿಗಾಗಿ ಮಲೆನಾಡಿಗರು ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ನಮಗೆ ಪರ್ಮನೆಂಟ್ ಸಲ್ಯೂಷನ್ ಕೊಡಿ ಎಂದು ಆಗ್ರಹಿಸಿ, ಸಹಿ ಸಂಗ್ರಹ ಅಭಿಯಾನ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

wild elephant attack in chikkamagaluru (3)


ರೈತರು-ಹೋರಾಟಗಾರರು ಶೃಂಗೇರಿ ಶಾಸಕ ರಾಜೇಗೌಡ, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಬಿಜೆಪಿ ಜೆಡಿಎಸ್​ನವ್ರು ಸಾವಲ್ಲಿ ಬೇಳೆ ಬೇಯಿಸಿಕೊಳ್ತಿದ್ದಾರೆ ಅಂತ ಶಾಸಕ ರಾಜೇಗೌಡ ಕಿಡಿ ಕಾರಿದ್ದಾರೆ. 
ಸಚಿವ ಖಂಡ್ರೆ ಅಧಿಕಾರಿಗಳ ವರದಿ-ಮಾಹಿತಿ ನಂಬಿ ಅಲ್ಲೇ ಕೂರೋದು ಬೇಡ. ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಕೇಳಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.‌ ಒಟ್ಟಾರೆ,  ಈ ಬಜೆಟ್ ನಲ್ಲೇ ಶಾಶ್ವತ ಪರಿಹಾರಕ್ಕೆ ಪ್ಲಾನ್ ರೂಪಿಸಿ. ಇಲ್ಲವಾದರೆ, ಮಲೆನಾಡಲ್ಲಿ ಕಾಡಾನೆಯಿಂದ ಇನ್ನೊಂದು ಸಾವಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಸರ್ಕಾರ ಈ ಕುರಿತು ಏನ್​ ಕ್ರಮ ಕೈಗೊಳ್ಳುತ್ತೋ ಕಾದು ನೋಡ್ಬೇಕಿದೆ

wild elephant attack in chikkamagaluru (2)


ಮಹಾರುದ್ರ ಹಿತ್ತಲ್ಲಕೊಪ್ಪ ನ್ಯೂಸ್ ಫಸ್ಟ್ ಚಿಕ್ಕಮಗಳೂರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

wild elephant attack
Advertisment