Advertisment

ಬಾಬಾ ಬುಡನ್‌ಗಿರಿ ದರ್ಗಾದಲ್ಲಿ ದತ್ತ ಜಯಂತಿ ಸಂಭ್ರಮ : ಜಿಲ್ಲಾಡಳಿತದಿಂದ ಹೈ ಆಲರ್ಟ್ ಘೋಷಣೆ

ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತ ಜಯಂತಿ ನಡೆಯುತ್ತಿದೆ. ಇಂದು ಅನಸೂಯ ಜಯಂತಿ ಅಂಗವಾಗಿ ಮಹಿಳೆಯರು ಸಂಕೀರ್ತನಾ ಯಾತ್ರೆ ನಡೆಸಿದ್ದಾರೆ. ಇಂದು ಮಹಿಳೆಯರು ಅನಸೂಯ ದೇವಿ ದರ್ಶನ ಪಡೆಯುವರು.

author-image
Chandramohan
chikkamagaluru datta jayanathi

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಸಂಭ್ರಮ

Advertisment

ಕರ್ನಾಟಕದ ಅಯೋಧ್ಯೆ ಎಂದೇ ಹೆಸರಾದ ಕಾಫಿನಾಡು   ಚಿಕ್ಕಮಗಳೂರಿನ  ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ಶುರುವಾಗಿದೆ.  ಇಂದಿನಿಂದ ಮೂರು ದಿನಗಳ ವಿವಾದಿತ ಸ್ಥಳದಲ್ಲಿ ದತ್ತಜಯಂತಿ ಆಚರಣೆ  ನಡೆಯಲಿದೆ.  ಇನ್ನು ಮೂರು ದಿನಗಳ ಕಾಲ‌ ಕೂಲ್‌ ಕಾಫಿನಾಡು ಫುಲ್ ಹಾಟ್...ಹಾಟ್.
ಇಂದು ಅನುಸೂಯ ಜಯಂತಿ ಅಂಗವಾಗಿ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯುತ್ತಿದೆ.   ಸಾವಿರಾರು ಮಹಿಳೆಯರಿಂದ ನಗರದಲ್ಲಿ ಸಂಕೀರ್ತನ ಯಾತ್ರೆ  ನಡೆಯುತ್ತಿದೆ. ಸಂಕೀರ್ತನಾ ಯಾತ್ರೆ ಮುಗಿಸಿ ದತ್ತಪೀಠದಲ್ಲಿ ಅನುಸೂಯ ಜಯಂತಿ ಆಚರಣೆ ಮಾಡಲಾಗುತ್ತೆ.  ದತ್ತಪೀಠದಲ್ಲಿ ಹೋಮ ಹವನ ನಡೆಸಿ ಅನುಸೂಯ ದೇವಿಯ ದರ್ಶನವನ್ನು ಮಹಿಳೆಯರು  ಪಡೆಯುವರು.
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು  ನಿಯೋಜನೆ ಮಾಡಲಾಗಿದೆ.  ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.  ಮುಂಜಾಗ್ರತ ಕ್ರಮವಾಗಿ ನಾಳೆಯಿಂದ‌ ಎರಡು  ದಿನಗಳ ಕಾಲ‌ ಜಿಲ್ಲೆಯಾದ್ಯಂತ  ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.  ಈಗಾಗಲೇ 5 ದಿನಗಳ ಕಾಲ ಗಿರಿ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.  
ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ದತ್ತ ಜಯಂತಿ ಸಂಭ್ರಮ ಜೋರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Chikkamagaluru datta jayanthi celebration
Advertisment
Advertisment
Advertisment