/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ನಿಂತಿದ್ದೇ ತಪ್ಪಾಯ್ತು : BMW ಕಾರ್ ಹಿಂದಿನಿಂದ ಡಿಕ್ಕಿ ಹೊಡೆದು ಮಲ್ಲಿಕಾ ದಾರುಣ ಸಾವು
ಮೇಷ
- ಈ ದಿನ ಕೋಪ ಹೆಚ್ಚಾಗಿರುತ್ತದೆ ತಾಳ್ಮೆಯಿರಲಿ
- ನಿಮ್ಮ ಕಾರ್ಯ ಶಿಸ್ತು ಪ್ರಶಂಸನೀಯವಾದದ್ದು
- ಸ್ನೇಹಿತರ ಮನೆಯಲ್ಲಿ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
- ಪ್ರಮುಖ ನಿರ್ಧಾರಕ್ಕೆ ಅಡ್ಡಿಯಾಗಬಹುದು
- ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಬಹುದು
- ನಿಮ್ಮ ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರ ಆಗಬಹುದು
- ಅಮೃತ ಮೃತ್ಯುಂಜಯ ಜಪಮಾಡಿ
ವೃಷಭ
- ನಿಜವಾದ ಸ್ನೇಹಿತರ ಅಸಹಕಾರ
- ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ಕೆಲಸ ಮುಂದೂಡಿಕೆ ಮಾಡುವುದರಿಂದ ಬೇಸರ ಆಗಲಿದೆ
- ತಾಯಿಯವರಿಗೆ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಆಗಬಹುದು ಎಚ್ಚರಿಕೆವಹಿಸಿ
- ಆರ್ಥಿಕ ಸಮಸ್ಯೆ ಉಂಟಾಗಲಿದೆ
- ಸಹೋದರರಲ್ಲಿ ಕಲಹ, ವಾದ- ವಿವಾದಗಳು ನಡೆಯಬಹುದು
- ಕುಬೇರನನ್ನು ಪ್ರಾರ್ಥಿಸಿ
ಮಿಥುನ
- ನಿದ್ದೆ ಅಥವಾ ಆಯಾಸದಿಂದ ಅನಾರೋಗ್ಯ ಕಾಡಬಹುದು
- ತಾಳ್ಮೆಯಿರಲಿ ನಕಾರಾತ್ಮಕ ಆಲೋಚನೆಗಳು ಬೇಡ
- ನಿಮ್ಮ ವ್ಯಾಪಾರದಲ್ಲಿ ಅಸಮಾಧಾನ ಉಂಟಾಗಬಹುದು
- ನಿಮ್ಮ ವೇಗಕ್ಕೆ ಬೇರೆಯವರು ಸಹಕರಿಸುವುದಿಲ್ಲ
- ಆತುರದ ನಿರ್ಧಾರ ಒಳಿತಲ್ಲ
- ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಡಲಿದೆ
- ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ
ಕಟಕ
- ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
- ಮನೆ ವೃತ್ತಿಯಲ್ಲಿ ಅನಾನುಕೂಲ
- ಪ್ರಯಾಣದಲ್ಲಿ ಆಯಾಸ ಆಗಬಹುದು
- ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
- ಮಾನಸಿಕವಾಗಿ ದೃಢವಾಗಬೇಕು
- ದೊಡ್ಡವರ ಮಾತನ್ನ ನಿರ್ಲಕ್ಷ ಮಾಡಬೇಡಿ
- ಭೂವರಾಹನನ್ನು ಪ್ರಾರ್ಥಸಿ
ಸಿಂಹ
- ಈ ದಿನ ನಿಮಗೆ ಒತ್ತಡದ ದಿನ
- ಮಾನಸಿಕ ಖಿನ್ನತೆ ಕಾಡಬಹುದು
- ಹಳೆಯ ನೆನಪು ಕಣ್ಣೀರು ತರಿಸಬಹುದು
- ವಿವಾಹ ವಿಚಾರ ಪ್ರಸ್ತಾಪವಾಗಿ ಗಲಭೆ ಆಗಬಹುದು
- ಮಕ್ಕಳಿಂದ ಅಸಮಾಧಾನ ಆಗಲಿದೆ
- ಅನಾರೋಗ್ಯ ಪೀಡತರಿಗೆ ಚೇತರಿಕೆ
- ಸ್ವಯಂವರ ಪಾರ್ವತಿ ಪ್ರಾರ್ಥನೆ
ಕನ್ಯಾ
- ಹೂ ವ್ಯಾಪಾರ ಮಾಡುವವರಿಗೆ ಲಾಭವಿದೆ
- ಜವಾಬ್ದಾರಿ ಹೆಚ್ಚಾಗಿ ಆತಂಕ ಸೃಷ್ಠಿಯಾಗಬಹುದು
- ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗಲಿದೆ
- ಕುಟುಂಬದಲ್ಲಿ ಮಂಗಳಕಾರ್ಯದ ಚರ್ಚೆ ನಡೆಯಲಿದೆ
- ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು
- ಅನಗತ್ಯ ಮಾತು ಹಾಸ್ಯ ಬೇಡ ಅಪಮಾನ ಆಗಬಹುದು
- ಲಲಿತಾ ಸಹಸ್ರನಾಮ ಪಠಿಸಿ
ತುಲಾ
- ಶರೀರದಲ್ಲಿ ಸಮಸ್ಯೆ ನೋವು ಕಾಣಲಿದೆ
- ಪ್ರೇಮಿಗಳಿಗೆ ಶುಭದಿನ
- ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ
- ಭಾವನಾತ್ಮಕವಾಗಿ ದುರ್ಬಲರಾಗಬಹುದು
- ಮಕ್ಕಳಿಂದ ತೊಂದರೆ ಆಗಬಹುದು
- ವಿದ್ಯಾರ್ಥಿಗಳಿಗೆ ಶುಭದಿನ
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ವೃತ್ತಿಯಲ್ಲಿ, ಕೆಲಸದಲ್ಲಿ ನಿಮಗೆ ಕಿರುಕುಳ ಆಗಬಹುದು
- ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
- ಮಾನಸಿಕ ಬೇಸರದಿಂದ ಜಿಗುಪ್ಸೆ ಉಂಟಾಗಲಿದೆ
- ದಾಂಪತ್ಯದಲ್ಲಿ ಕಲಹ ಆಗಬಹುದು
- ಅತಿಯಾದ ಕೋಪದಿಂದ ನಿಷ್ಠೂರ ಆಗುತ್ತೀರಿ
- ಯಾವುದೇ ಆತುರದ ನಿರ್ಧಾರ ಬೇಡ
- ಲಕ್ಷ್ಮಿನಾರಾಯಣ ಉಪಾಸನೆ ಮಾಡಿ
ಧನುಸ್ಸು
- ಕರ್ತವ್ಯ ನಿರ್ವಹಣೆ ನಿಯಮ ಬದ್ದವಾಗಿರಲಿ
- ಹಾಲು ವ್ಯಾಪಾರಿಗಳಿಗೆ ಶುಭದಿನ
- ಹಿರಿಯರ ಆಸ್ತಿ ವಿಚಾರದಲ್ಲಿ ಕಲಹ ಆಗಬಹುದು
- ಮನೆಯಲ್ಲಿ ಅಶಾಂತಿಯ ವಾತಾವರಣ
- ಈ ದಿನ ದೊಡ್ಡ ಆಲೋಚನೆಗಳಿರುತ್ತವೆ
- ಕಷ್ಠಪಟ್ಟು ಮಾಡಿದ ಕೆಲಸ ಫಲಕೊಡುವುದಿಲ್ಲ
- ಈಶ್ವರಾರಾಧನೆ ಮಾಡಿ
ಮಕರ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಶತ್ರುಗಳಿಗೆ ಅಧೈರ್ಯ
- ಮಕ್ಕಳ ವಿಚಾರದಲ್ಲಿ ತುಂಬಾ ಅನೂಕುಲವಿದೆ
- ಹಣ ಖರ್ಚು ಆಗುವುದರಿಂದ ಬೇಸರ ಆಗಬಹುದು
- ಅಣ್ಣ ತಮ್ಮಂದಿರಲ್ಲಿ ಕಲಹವಿರುತ್ತದೆ
- ಉದೋಗ್ಯದಲ್ಲಿ ಸಣ್ಣ ಬದಲಾವಣೆ ಉಂಟಾಗಲಿದೆ
- ವಿಷ್ಣು ಸಹಸ್ರನಾಮ ಪಠಿಸಿ
ಕುಂಭ
- ಇಂದು ಮಕ್ಕಳಿಗೆ ಪ್ರಗತಿಯಿದೆ
- ಮನೆಯಲ್ಲಿ ಸಮಾಧಾನವಿರುವುದಿಲ್ಲ
- ದಾಂಪತ್ಯದ ವೈಮನಸ್ಸು ದೂರವಾಗುತ್ತದೆ
- ನೌಕರಿ ಸ್ಥಳದಲ್ಲಿ ಹಲವಾರು ಚರ್ಚೆ ಮಾಡುತ್ತೀರಿ
- ಬೇರೆಯವರ ನಿಂದನೆಗೆ ಒಳಗಾಗುತ್ತೀರಿ
- ವಿದ್ಯಾರ್ಥಿಗಳಿಗೆ ಅನೂಕುಲವಿದೆ
- ಮನೆದೇವರಿಗೆ ತುಪ್ಪದ ದೀಪ ಹಚ್ಚಿ
ಮೀನ
- ಕೆಲಸದ ಒತ್ತಡ ಹೆಚ್ಚಾಗಲಿದೆ
- ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಬಹುದು
- ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
- ಷೇರು ಮಾರುಕಟ್ಟೆಯಲ್ಲಿ ಲಾಭವಿದೆ
- ಆರೋಗ್ಯದ ಬಗ್ಗೆ ಗಮನಿಸಿ
- ವಿದೇಶದಿಂದ ಶುಭ ವಾರ್ತೆ ಕೇಳಬಹುದು
- ಇಷ್ಟ ದೇವರ ಪ್ರಾರ್ಥನೆ ಮಾಡಿ
ಇದನ್ನೂ ಓದಿ: C-DAC ಯಲ್ಲಿ ನೇಮಕಾತಿಗೆ ಇಂಜಿನಿಯರ್ ಗಳಿಂದ ಅರ್ಜಿ ಆಹ್ವಾನ : 805 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us