/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಕೃತ್ತಿಕಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ನಿದ್ದೆಯ ಅಭಾವದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
 - ಸರಿಯಾದ ವಿಶ್ರಾಂತಿಯ ಅಗತ್ಯವಿರುತ್ತದೆ, ಮಾನಸಿಕವಾದ ಸುಸ್ತು ಕಾಡಬಹುದು
 - ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪರಿಪೂರ್ಣವಾದ ಶಕ್ತಿಯಿರುತ್ತದೆ
 - ಆಹಾರ ವ್ಯತ್ಯಾಸದಿಂದ ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
 - ಇಂದು ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ
 - ಅಗ್ನಿ ದೇವತಾ ಶಕ್ತಿಯನ್ನು ಉಪಾಸನೆ ಮಾಡಿ
 
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಿನ್ನಡೆ ಆಗುವ ಸಾಧ್ಯತೆ
 - ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಲು ಸಕಾಲ
 - ಇಂದು ಮಾನಸಿಕ ಸಮಾಧಾನವಿರುವುದಿಲ್ಲ
 - ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತದೆ
 - ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಕೋಪ ಬರುತ್ತದೆ
 - ಸಾಯಂಕಾಲದ ವೇಳೆಗೆ ಸ್ತ್ರೀಯರಿಗೆ ಎದೆನೋವು ಕಾಣಿಸಬಹುದು ಎಚ್ಚರಿಕೆ
 - ಮಾತಿನ ಭರದಲ್ಲಿ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳಬಹುದು
 - ರುದ್ರಮಂತ್ರವನ್ನು ಶ್ರವಣ ಮಾಡಿ
 
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಹೊಸ ಕೆಲಸ, ಹೊಸ ಜೀವನವನ್ನು ಪ್ರಾರಂಭ ಮಾಡಲು ಶುಭದಿನ
 - ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ, ತೊಂದರೆಯ ಸೂಚನೆಗಳಿವೆ
 - ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ
 - ಹಗುರವಾಗಿ ಮಾತನಾಡುವುದರಿಂದ ನಿಮ್ಮ ಗೌರವ ಕಡಿಮೆಯಾಗಬಹುದು
 - ಖಾಸಗಿ ಉದ್ಯೋಗ ಮಾಡುವವರಿಗೆ ನೌಕರಿಯ ಭಯ ಇದೆ ಆದರೆ ಯಾವುದೇ ತೊಂದರೆಯಿಲ್ಲ
 - ಬಹಳ ದಿನದಿಂದ ಮದುವೆಗೆ ಕಾಯುತ್ತಿದ್ದ ಪ್ರೇಮಿಗಳಿಗೆ ಶುಭದಿನ
 - ಗೋಮಾತೆಯನ್ನು ಪೂಜಿಸಿ
 
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕವಾಗಿ ಸಮಾಧಾನ ಇಲ್ಲದೆ ಇರುವ ದಿನ
 - ಅಕ್ಕಪಕ್ಕದವರ ಜೊತೆ ಜಗಳದ ಸಾಧ್ಯತೆಯಿದೆ ಜಾಗ್ರತೆವಹಿಸಿ
 - ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಹೋಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ
 - ಅಹಂಕಾರ ಬೇಡ ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
 - ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
 - ಗಣಪತಿಯ ಆರಾಧನೆ ಮಾಡಿ
 
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಒಳ್ಳೆಯ ಕಾರ್ಯಕ್ಕೆ ಸಮಯವನ್ನು ಉಪಯೋಗಿಸಿಕೊಳ್ಳಬೇಕು
 - ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರದಲ್ಲಿ ಸ್ವಲ್ಪ ಗೊಂದಲವಿರುತ್ತದೆ
 - ಕೋಪ ಹೆಚ್ಚಾಗಿ ಕಾಣುತ್ತದೆ, ಕೋಪನ್ನು ಯಾರ ಮೇಲೂ ತೋರಿಸಬೇಡಿ
 - ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ದಿನ
 - ಮಕ್ಕಳಿಗೆ ಬಹಳ ಸಂತೋಷದ ದಿನ
 - ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸಿ
 
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ನಿಮಗಿಂತ ಕಿರಿಯರು ಉತ್ತಮ ಪದವಿ ಪಡೆದು ಯಶ್ವಸಿಗಳಾಗುತ್ತಾರೆ
 - ನೀವು ಮಾಡುವ ಕೆಲಸಕ್ಕೆ ಅಸಮಾಧಾನ ಇರಲಿದೆ
 - ನಿಮ್ಮ ಸ್ವಭಾವದಿಂದ ಸ್ವರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ
 - ಹಳೆಯ ವಿಚಾರಗಳು ಮುನ್ನಲೆಗೆ ಬರುವಂತ ಸೂಚನೆಗಳಿವೆ
 - ಸಹೋದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ
 - ಹೊರಗೆ ತಿರುಗುವ ಮನಸ್ಸು ಹೆಚ್ಚಾಗಿ ಕಾಣುತ್ತದೆ
 - ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗುತ್ತದೆ
 - ಗುರು ದಕ್ಷಿಣಮೂರ್ತಿಯನ್ನು ಆರಾಧಿಸಿ
 
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು
 - ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಸರಳವಾಗಿ ಆಚರಿಸಿಕೊಳ್ಳಿ
 - ವಿದ್ಯಾರ್ಥಿಗಳಿಗೆ ಅನಾರೋಗ್ಯದ ಬೇಸರ ಉಂಟಾಗಬಹುದು
 - ಮನೆಯ ಸದಸ್ಯರೆಲ್ಲರ ಜೊತೆಯಲ್ಲಿ ಕಾಲ ಕಳೆಯುತ್ತೀರಿ
 - ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ
 - ಈ ವರ್ಷದ ಎಲ್ಲಾ ಕೆಲಸಗಳ ಬಗ್ಗೆ ಯೋಜನೆಯನ್ನು ಈ ದಿನ ಮಾಡುವಂತಹುದು
 - ಇಂದು ಮನಸ್ಸಿಗೆ ಹರ್ಷ,ಆನಂದ,ಉತ್ಸಾಹ ಇರುವ ದಿನ
 - ಕುಲದೇವತಾ ಪ್ರಾರ್ಥನೆ ಮಾಡಿ
 
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಸಹೋದ್ಯೋಗಿಗಳ ಸಹಾಯ ಪಡೆದು ನಿಮ್ಮ ಕೆಲಸ ಪೂರ್ಣ ಮಾಡಿ
 - ಕೆಲಸದಲ್ಲಿ ದೊಡ್ಡ ಜವಾಬ್ದಾರಿಯಿಂದ ಬೇಸರವಾಗಬಹುದು, ಆದರೆ ಅನಿವಾರ್ಯವಾಗಿರುತ್ತದೆ
 - ಇತರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಅನುಭವಿಸಬಹುದು
 - ಸುಲಭವಾಗಿ ಸಾಲ ದೊರಕುವುದರಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು
 - ಇಂದು ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಾಧ್ಯತೆಯಿದೆ
 - ಋಣಮೋಚನ ಅಂಗಾರಕ ಸ್ತೋತ್ರ ಪಠಿಸಿ
 
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಅಕ್ಕ-ತಂಗಿಯರು ಆಸ್ತಿಯ ವಿಚಾರವಾಗಿ ತಕರಾರು ಮಾಡಬಹುದು
 - ಭವಿಷ್ಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಯೋಗ್ಯವಾದ ದಿನ
 - ಇಂದು ನಿಮ್ಮ ಮನಸ್ಸು ನಿರ್ಮಲವಾಗಿರುತ್ತದೆ
 - ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಿ ಕಾಣಬಹುದು
 - ಕಲಿಯುವ ಹಂಬಲವಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಿದೆ
 - ಬೇರೆಯವರ ವ್ಯವಹಾರದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ
 - ಸದ್ಗುರುಗಳನ್ನು ಪಾರ್ಥಿಸಿ
 
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಗಮನಿಸಿ, ತಾತ್ಸಾರ ಮಾಡಬೇಡಿ
 - ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ
 - ಕುಟುಂಬದ ಸ್ನೇಹಿತರು ಹಾಗೂ ಬಂಧುಗಳು ನಿಮ್ಮನ್ನು ಠೀಕಿಸಬಹುದು
 - ಮಕ್ಕಳಿಂದ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
 - ಅನಗತ್ಯ ಖರ್ಚುಗಳಿಂದ ಸ್ವಲ್ಪ ತೊಂದರೆಯಾಗಬಹುದು
 - ಐಶ್ವರ್ಯ ಲಕ್ಷ್ಮಿಯನ್ನು ಆರಾಧಿಸಿ
 
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಉತ್ತಮರ ಸಂಗ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ
 - ಉತ್ತಮವಾದ ಆಹಾರ, ಮನಸ್ಸಿಗೆ ಸಂತೋಷ ಸಿಗುವ ದಿನ
 - ಸ್ನೇಹಿತರು, ಬಂಧುಗಳು ನಿಮ್ಮ ಜೊತೆ ಸಂತೋಷ ಹಂಚಿಕೊಳ್ಳುತ್ತಾರೆ
 - ಅಲಂಕಾರ ವಸ್ತುಗಳ ಖರೀದಿಗೆ ಮುಂದಾಗಬಹುದು
 - ಮನೆಯ ಹಿರಿಯರ ಆಶೀರ್ವಾದ, ಪ್ರೀತಿ, ವಿಶ್ವಾಸ ದೊರೆಯುವ ದಿನ
 - ನವದಂಪತಿಗಳಿಗೆ ಶುಭ ದಿನ
 - ಕುಲದೇವತಾ ಪ್ರಾರ್ಥನೆ ಮಾಡಿ
 
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಆರ್ಥಿಕವಾಗಿ ನಷ್ಟ ಅನುಭವಿಸಿದ್ದರೆ ಅದನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ
 - ಮನಸ್ಸು ವಿಚಲಿತ ಆಗದೆ ಒಂದೇ ರೀತಿಯಲ್ಲಿರಬೇಕು
 - ವಿದ್ಯಾರ್ಥಿಗಳಿಗೆ ಮುಖ್ಯವಾದ ತಿರುವು ಸಿಗುವುದರಿಂದ ಶುಭವಿದೆ
 - ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವ ಸೂಚನೆಗಳಿವೆ
 - ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ
 - ನೌಕರಿಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
 - ಮಕ್ಕಳ ವಿವಾಹದ ವಿಚಾರವನ್ನು ಮಾತನಾಡುತ್ತೀರಿ
 - ನೌಕರಿಯಲ್ಲಿರುವ ಮಹಿಳೆಯರಿಗೆ ಶುಭಫಲ
 - ಚೌಡೇಶ್ವರಿಯನ್ನು ಆರಾಧಿಸಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us