/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಕೃತ್ತಿಕಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ನಿದ್ದೆಯ ಅಭಾವದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
- ಸರಿಯಾದ ವಿಶ್ರಾಂತಿಯ ಅಗತ್ಯವಿರುತ್ತದೆ, ಮಾನಸಿಕವಾದ ಸುಸ್ತು ಕಾಡಬಹುದು
- ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪರಿಪೂರ್ಣವಾದ ಶಕ್ತಿಯಿರುತ್ತದೆ
- ಆಹಾರ ವ್ಯತ್ಯಾಸದಿಂದ ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
- ಇಂದು ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ
- ಅಗ್ನಿ ದೇವತಾ ಶಕ್ತಿಯನ್ನು ಉಪಾಸನೆ ಮಾಡಿ
ವೃಷಭ
- ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಿನ್ನಡೆ ಆಗುವ ಸಾಧ್ಯತೆ
- ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಲು ಸಕಾಲ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತದೆ
- ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಕೋಪ ಬರುತ್ತದೆ
- ಸಾಯಂಕಾಲದ ವೇಳೆಗೆ ಸ್ತ್ರೀಯರಿಗೆ ಎದೆನೋವು ಕಾಣಿಸಬಹುದು ಎಚ್ಚರಿಕೆ
- ಮಾತಿನ ಭರದಲ್ಲಿ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳಬಹುದು
- ರುದ್ರಮಂತ್ರವನ್ನು ಶ್ರವಣ ಮಾಡಿ
ಮಿಥುನ
- ಹೊಸ ಕೆಲಸ, ಹೊಸ ಜೀವನವನ್ನು ಪ್ರಾರಂಭ ಮಾಡಲು ಶುಭದಿನ
- ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ, ತೊಂದರೆಯ ಸೂಚನೆಗಳಿವೆ
- ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ
- ಹಗುರವಾಗಿ ಮಾತನಾಡುವುದರಿಂದ ನಿಮ್ಮ ಗೌರವ ಕಡಿಮೆಯಾಗಬಹುದು
- ಖಾಸಗಿ ಉದ್ಯೋಗ ಮಾಡುವವರಿಗೆ ನೌಕರಿಯ ಭಯ ಇದೆ ಆದರೆ ಯಾವುದೇ ತೊಂದರೆಯಿಲ್ಲ
- ಬಹಳ ದಿನದಿಂದ ಮದುವೆಗೆ ಕಾಯುತ್ತಿದ್ದ ಪ್ರೇಮಿಗಳಿಗೆ ಶುಭದಿನ
- ಗೋಮಾತೆಯನ್ನು ಪೂಜಿಸಿ
ಕಟಕ
- ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕವಾಗಿ ಸಮಾಧಾನ ಇಲ್ಲದೆ ಇರುವ ದಿನ
- ಅಕ್ಕಪಕ್ಕದವರ ಜೊತೆ ಜಗಳದ ಸಾಧ್ಯತೆಯಿದೆ ಜಾಗ್ರತೆವಹಿಸಿ
- ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಹೋಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ
- ಅಹಂಕಾರ ಬೇಡ ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
- ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
- ಗಣಪತಿಯ ಆರಾಧನೆ ಮಾಡಿ
ಸಿಂಹ
- ಒಳ್ಳೆಯ ಕಾರ್ಯಕ್ಕೆ ಸಮಯವನ್ನು ಉಪಯೋಗಿಸಿಕೊಳ್ಳಬೇಕು
- ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರದಲ್ಲಿ ಸ್ವಲ್ಪ ಗೊಂದಲವಿರುತ್ತದೆ
- ಕೋಪ ಹೆಚ್ಚಾಗಿ ಕಾಣುತ್ತದೆ, ಕೋಪನ್ನು ಯಾರ ಮೇಲೂ ತೋರಿಸಬೇಡಿ
- ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ದಿನ
- ಮಕ್ಕಳಿಗೆ ಬಹಳ ಸಂತೋಷದ ದಿನ
- ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸಿ
ಕನ್ಯಾ
- ನಿಮಗಿಂತ ಕಿರಿಯರು ಉತ್ತಮ ಪದವಿ ಪಡೆದು ಯಶ್ವಸಿಗಳಾಗುತ್ತಾರೆ
- ನೀವು ಮಾಡುವ ಕೆಲಸಕ್ಕೆ ಅಸಮಾಧಾನ ಇರಲಿದೆ
- ನಿಮ್ಮ ಸ್ವಭಾವದಿಂದ ಸ್ವರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ
- ಹಳೆಯ ವಿಚಾರಗಳು ಮುನ್ನಲೆಗೆ ಬರುವಂತ ಸೂಚನೆಗಳಿವೆ
- ಸಹೋದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ
- ಹೊರಗೆ ತಿರುಗುವ ಮನಸ್ಸು ಹೆಚ್ಚಾಗಿ ಕಾಣುತ್ತದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗುತ್ತದೆ
- ಗುರು ದಕ್ಷಿಣಮೂರ್ತಿಯನ್ನು ಆರಾಧಿಸಿ
ತುಲಾ
- ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು
- ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಸರಳವಾಗಿ ಆಚರಿಸಿಕೊಳ್ಳಿ
- ವಿದ್ಯಾರ್ಥಿಗಳಿಗೆ ಅನಾರೋಗ್ಯದ ಬೇಸರ ಉಂಟಾಗಬಹುದು
- ಮನೆಯ ಸದಸ್ಯರೆಲ್ಲರ ಜೊತೆಯಲ್ಲಿ ಕಾಲ ಕಳೆಯುತ್ತೀರಿ
- ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ
- ಈ ವರ್ಷದ ಎಲ್ಲಾ ಕೆಲಸಗಳ ಬಗ್ಗೆ ಯೋಜನೆಯನ್ನು ಈ ದಿನ ಮಾಡುವಂತಹುದು
- ಇಂದು ಮನಸ್ಸಿಗೆ ಹರ್ಷ,ಆನಂದ,ಉತ್ಸಾಹ ಇರುವ ದಿನ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಹೋದ್ಯೋಗಿಗಳ ಸಹಾಯ ಪಡೆದು ನಿಮ್ಮ ಕೆಲಸ ಪೂರ್ಣ ಮಾಡಿ
- ಕೆಲಸದಲ್ಲಿ ದೊಡ್ಡ ಜವಾಬ್ದಾರಿಯಿಂದ ಬೇಸರವಾಗಬಹುದು, ಆದರೆ ಅನಿವಾರ್ಯವಾಗಿರುತ್ತದೆ
- ಇತರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಅನುಭವಿಸಬಹುದು
- ಸುಲಭವಾಗಿ ಸಾಲ ದೊರಕುವುದರಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು
- ಇಂದು ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಾಧ್ಯತೆಯಿದೆ
- ಋಣಮೋಚನ ಅಂಗಾರಕ ಸ್ತೋತ್ರ ಪಠಿಸಿ
ಧನುಸ್ಸು
- ಅಕ್ಕ-ತಂಗಿಯರು ಆಸ್ತಿಯ ವಿಚಾರವಾಗಿ ತಕರಾರು ಮಾಡಬಹುದು
- ಭವಿಷ್ಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಯೋಗ್ಯವಾದ ದಿನ
- ಇಂದು ನಿಮ್ಮ ಮನಸ್ಸು ನಿರ್ಮಲವಾಗಿರುತ್ತದೆ
- ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಿ ಕಾಣಬಹುದು
- ಕಲಿಯುವ ಹಂಬಲವಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಿದೆ
- ಬೇರೆಯವರ ವ್ಯವಹಾರದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ
- ಸದ್ಗುರುಗಳನ್ನು ಪಾರ್ಥಿಸಿ
ಮಕರ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಗಮನಿಸಿ, ತಾತ್ಸಾರ ಮಾಡಬೇಡಿ
- ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ
- ಕುಟುಂಬದ ಸ್ನೇಹಿತರು ಹಾಗೂ ಬಂಧುಗಳು ನಿಮ್ಮನ್ನು ಠೀಕಿಸಬಹುದು
- ಮಕ್ಕಳಿಂದ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
- ಅನಗತ್ಯ ಖರ್ಚುಗಳಿಂದ ಸ್ವಲ್ಪ ತೊಂದರೆಯಾಗಬಹುದು
- ಐಶ್ವರ್ಯ ಲಕ್ಷ್ಮಿಯನ್ನು ಆರಾಧಿಸಿ
ಕುಂಭ
- ಉತ್ತಮರ ಸಂಗ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ
- ಉತ್ತಮವಾದ ಆಹಾರ, ಮನಸ್ಸಿಗೆ ಸಂತೋಷ ಸಿಗುವ ದಿನ
- ಸ್ನೇಹಿತರು, ಬಂಧುಗಳು ನಿಮ್ಮ ಜೊತೆ ಸಂತೋಷ ಹಂಚಿಕೊಳ್ಳುತ್ತಾರೆ
- ಅಲಂಕಾರ ವಸ್ತುಗಳ ಖರೀದಿಗೆ ಮುಂದಾಗಬಹುದು
- ಮನೆಯ ಹಿರಿಯರ ಆಶೀರ್ವಾದ, ಪ್ರೀತಿ, ವಿಶ್ವಾಸ ದೊರೆಯುವ ದಿನ
- ನವದಂಪತಿಗಳಿಗೆ ಶುಭ ದಿನ
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಆರ್ಥಿಕವಾಗಿ ನಷ್ಟ ಅನುಭವಿಸಿದ್ದರೆ ಅದನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ
- ಮನಸ್ಸು ವಿಚಲಿತ ಆಗದೆ ಒಂದೇ ರೀತಿಯಲ್ಲಿರಬೇಕು
- ವಿದ್ಯಾರ್ಥಿಗಳಿಗೆ ಮುಖ್ಯವಾದ ತಿರುವು ಸಿಗುವುದರಿಂದ ಶುಭವಿದೆ
- ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವ ಸೂಚನೆಗಳಿವೆ
- ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ
- ನೌಕರಿಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
- ಮಕ್ಕಳ ವಿವಾಹದ ವಿಚಾರವನ್ನು ಮಾತನಾಡುತ್ತೀರಿ
- ನೌಕರಿಯಲ್ಲಿರುವ ಮಹಿಳೆಯರಿಗೆ ಶುಭಫಲ
- ಚೌಡೇಶ್ವರಿಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ