ಧರ್ಮಸ್ಥಳ ಕೇಸ್​ಗೆ ಬಿಗ್​ ಟ್ವಿಸ್ಟ್​.. ಅಷ್ಟಕ್ಕೂ ಚಿನ್ನಯ್ಯ ತಂದಿದ್ದ ತಲೆಬುರುಡೆ ಯಾರದ್ದು..?

ತಲೆಬುರುಡೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ಶ*ವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯ ತಂದಿದ್ದ ತಲೆಬುರುಡೆಯ ಎಫ್‌ಎಸ್‌ಎಲ್ ವರದಿ ಬಂದಿದೆ.

author-image
Veenashree Gangani
dharmasthala case(1)
Advertisment

ತಲೆಬುರುಡೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ಶ*ವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯ ತಂದಿದ್ದ ತಲೆಬುರುಡೆಯ ಎಫ್‌ಎಸ್‌ಎಲ್ ವರದಿ ಬಂದಿದೆ. ವರದಿಯಲ್ಲಿ ತಲೆಬುರುಡೆಯಲ್ಲಿ ಮಣ್ಣಿನ ಅಂಶ ಪತ್ತೆಯಾಗದ ಕಾರಣ, ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ SIT ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಚಿನ್ನಯ್ಯ ತಂದಿದ್ದ ತಲೆ ಬುರುಡೆ ಯಾವುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

dharmasthala case(3)

ಯಾವುದು ಈ ಬುರುಡೆ?

ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನ ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ್ದ ಚಿನ್ನಯ್ಯ ಬರೋವಾಗ ತಲೆ ಬುರುಡೆಯೊಂದನ್ನು ತೆಗೆದುಕೊಂಡು ಬಂದಿದ್ದ. ಅಲ್ಲದೇ ಅದನ್ನೂ ಕೋರ್ಟ್​ಗೆ ಸಹ ಒಪ್ಪಿಸಲಾಗಿತ್ತು. ಬಳಿಕ ತಲೆಬುರುಡೆಯನ್ನು ಎಸ್​ಐಟಿ ಅಧಿಕಾರಿಗಳು FSLಗೆ ಕಳುಹಿಸಿದ್ದರು. ಆದ್ರೆ ವರದಿಯಲ್ಲಿ ತಲೆಬುರುಡೆಯಲ್ಲಿ ಮಣ್ಣಿನ ಅಂಶ ಪತ್ತೆಯಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. 

dharmasthala case(10)

ಹೀಗಾಗಿ ಆರೋಪಿ ಚಿನ್ನಯ್ಯ ತಂದಿದ್ದ ತಲೆ ಬುರುಡೆ ಹಿಂದೆ ಬಿದ್ದ ಎಸ್​ಐಟಿ ತಂಡ ಬಿದ್ದಿದೆ. ಆ ಬುರುಡೆ ಮಣ್ಣಿನಲ್ಲಿ ಸಿಕ್ಕಿಲ್ಲ ಅಂತ ಅನುಮಾನ ವ್ಯಕ್ತವಾಗಿದೆ. ಯಾವುದಾದ್ರೂ ರಿಸರ್ಚ್ ಸೆಂಟರ್​ನಿಂದ ಬುರುಡೆ ತಂದಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಧರ್ಮಸ್ಥಳ ಅಕ್ಕ ಪಕ್ಕದ ರಿಸರ್ಚ್ ಸೆಂಟರ್​​ಗಳಲ್ಲಿ ಬುರುಡೆ ನಾಪತ್ತೆ ಆಗಿದಿಯಾ ಅಂತ ತನಿಖೆ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chenna Dharmasthala
Advertisment