SIT ಮುಂದೆ ಪ್ರಭಾವಿಗಳ ಕೈವಾಡ, ಪಿತೂರಿ ಬಗ್ಗೆ ಬಾಯ್ಬಿಟ್ಟ ಸುಜಾತ ಭಟ್..!​

ತನಿಖಾಧಿಕಾರಿ ಎಸ್​ಐ ಗುಣಪಾಲ್ ಮತ್ತು ದಯಾಮಾ​ರಿಂದ ಸುಜಾತಾ ಭಟ್​​ ವಿಚಾರಭೆ ನಡೆಸಲಾಗಿದ್ದು, ಪ್ರಭಾವಿಗಳ ಕೈವಾಡ ಮತ್ತು ಪಿತೂರಿಯ ಬಗ್ಗೆ ಸುಜಾತಾ ಮಾಹಿತಿ ಬಿಚ್ಚಿಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

author-image
Veenashree Gangani
sujatha
Advertisment

ಅನನ್ಯ ಭಟ್​​ ಮಿಸ್ಸಿಂಗ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತ ಭಟ್​​ ಅವರನ್ನ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್ ದೂರು ನೀಡಿದ್ದರು. 

ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; PHOTOS

ಇದೇ ಕೇಸ್​ಗೆ ಸಂಬಂಧಿಸಿದಂತೆ ಸುಜಾತಾ ಭಟ್​ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಹೀಗಾಗಿ ಸುಜಾತಾ ಭಟ್ ಮಂಗಳೂರಿನ ಬೆಳ್ತಂಗಡಿಯ SIT ಕಚೇರಿಗೆ ಆಗಮಿಸಿದ್ದರು. ಎರಡು ದಿನಗಳ ತನಿಖೆಯ ವೇಳೆ ಹಲವು ಸಂಗತಿಗಳು ಬಹಿರಂಗವಾಗಿದ್ದು, ಇಂದು ಎಸ್​ಐಟಿ ಅಂತಿಮ ಹಂತದ ವಿಚಾರಣೆ ನಡೆಸಲಿದೆ.

VASANTI_SUJATHA_BHAT

ತನಿಖಾಧಿಕಾರಿ ಎಸ್​ಐ ಗುಣಪಾಲ್ ಮತ್ತು ದಯಾಮಾ​ರಿಂದ ಸುಜಾತಾ ಭಟ್​​ ವಿಚಾರಭೆ ನಡೆಸಲಾಗಿದ್ದು, ಪ್ರಭಾವಿಗಳ ಕೈವಾಡ ಮತ್ತು ಪಿತೂರಿಯ ಬಗ್ಗೆ ಸುಜಾತಾ ಮಾಹಿತಿ ಬಿಚ್ಚಿಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ತನ್ನ ಸುತ್ತ ಹೆಣೆದ ವ್ಯೂಹದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿರೋ ಸುಜಾತ ಭಟ್​​ ಇಂದು ಅಂತಿಮ ಹಂತದ ವಿಚಾರಣೆ ಎದುರಿಸಲಿದ್ದಾರೆ.

ಇನ್ನೂ, ಅನನ್ಯ ಭಟ್​​ ಮಿಸ್ಸಿಂಗ್​ ಕೇಸ್​ ಸುಳ್ಳು ಅನ್ನೋದು ಗೊತ್ತಾಗ್ತಿದ್ದಂತೆ ಸುಜಾತಾ ಭಟ್​​ ಏಕಾಂಗಿಯಾಗಿದ್ದಾರೆ.ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್​ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು. ನಂತರ ಸುಳ್ಳು ಫೋಟೋ ತೋರಿಸಿ ಸುಜಾತ ಭಟ್​​ಸಿಕ್ಕಿಹಾಕಿಕೊಂಡಿದ್ದರು.

Dharmasthala Sujata bhat
ಸುಜಾತಾ ಭಟ್

ಮಾಧ್ಯಮ ಹಾಗೂ ಬುರುಡೆ ಗ್ಯಾಂಗ್​ ಮುಂದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು. ಹೀಗಾಗಿ ಸುಜಾತ ಭಟ್​​ರನ್ನ ಬುರುಡೆ ಗ್ಯಾಂಗ್​ ದೂರ ಮಾಡಿದೆ ಅಂತ ಹೇಳಲಾಗ್ತಿದ್ದು, ಆಟೋದಲ್ಲಿ ಏಕಾಂಕಿಯಾಗಿ ಬಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sujata bhat
Advertisment